ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು ಜಗದೊಡೆಯ ಅವನು
ತಡಮಾಡದೆ ಹರಸುವನು ಎಮ್ಮನು ಕರುಣಾಮಯ ಗುರುನಾಥನು|
ತಾನಿರುವ ಅನುಭವವ ಕಾಣದಿರು ನೀಡುತ ಗುರುವು ಸಲಹುವನು
ನೆರಳಂತೆ ಹಿಂಬಾಲಿಸುತ ಜತನದಿ ಕಾಯುತ ಕೈ ಹಿಡಿದು ನಡೆಸುವನು|
ಮುಸುಕು ತುಂಬಿದ ಬಾಳಿನೊಳು ಆಶಾ ಕಿರಣದ ಬೆಳಕ ನೀಡುತ ಪೊರೆಯುವನು
ಮನದೊಳಿಹ ಅಲ್ಪ ಭಾವಗಳ ಅಳಿಸಿ ಜಗದರಿವ ನೀಡಿ ಕರುಣಿಸುವನು|
ಚಂದದಿ ಬದುಕಿನರ್ಥವ ತಿಳಿಸಿ ಸ್ವಾರ್ಥವನಳಿಸಿ ಬದುಕು ಹಸನಾಗಿಸುವನು
ಅನ್ಯರ ನೋವನು ಕ್ಷಣದಿ ಪರಿಹರಿಸಿ ಮಾದರಿಯ ಬದುಕು ನೆಡೆಸೆನ್ನುವನು|
ನಿತ್ಯವೂ ಬದುಕೊಂದು ಯಜ್ಞವೆನುತ ಸಾಧಿಸಿ ಗುರುವು ದಾರಿ ದೀಪವಾಗಿಹನು
ಹಣದಾಸೆಯ ಮೋಹದ ಬಲೆಯ ಕಿತ್ತೊಗೆದು ನಂಬಿದವರ ಪೊರೆಯುತಿಹನು|
ಮಂತ್ರ ತಂತ್ರದ ಅರಿವಿಲ್ಲದ ಪಾಮರ ಬಕುತ ನಾನೂ ನಿನ್ನ ಸ್ಮರಿಸೆ ಅಭಯ ಪಡೆವೆನು
ಸಖರಾಯಪುರದ ಮಹದೇವನವನು ಗುರುವು ಬಕುತರ ಭಗವಂತನವನು|
Poojya Shri venkatachala avadootarige nanna poojya namanagalu. Yellaranu Harasi asheervadisi Kaapadi. Hari om tatsat.
ReplyDelete