ಒಟ್ಟು ನೋಟಗಳು

238828

Tuesday, April 16, 2024

ಭಕ್ತನೆಂಬ ಬಿರುದು ಬೇಡವೋ ನನಗೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಭಕ್ತನೆಂಬ ಬಿರುದು ಬೇಡವೋ ನನಗೆ ನಾ ನಿನ್ನ ಬಕುತನಲ್ಲವೋ  ಗುರುವೇ
ಭವ ಬಂಧನದಿಂದ ಮುಕುತಿ ಬೇಡುವ ತಿರುಕ ನಾನು ಏನ್ನ ಕೈ ಬಿಡ ಬೇಡವೋ.

ಅಳೆದೂ ಸುರಿದು ಗುಣಿಸಿ ಎಣಿಸಿ ಬರೀ ಬಂಡ ಬದುಕು ನಡೆಸಿ ಸೋತಿತು ಜೀವವು
ಸೋಗು ದರಿಸಿ ಬೇಧ ಎಣಿಸಿ ದಿನವ ದೂಡಿ ಸಾಕು ಸಾಕಾಗಿ ಕೊರಗಿತು ಜೀವವು.

ಇನ್ನು ಸಾಕು ನಿನ್ನ ಲೀಲೆ ಕರುಣೆ ಬಾರದೇ ಗುರುವೇ ಎನ್ನ ಮೇಲೆ ಕಾದು ದಣಿವಾಗಿದೆ
ಮುoದೆ  ಇನ್ನೂ ಕಾಯಿಸಬೇಡ ಓರೆಗೆ ಹಚ್ಚಿ ನೋಡಬೇಡ ಒಮ್ಮೆ ಹರಸ ಬಾರದೆ.

ಕಪ್ಪು ಚುಕ್ಕಿ ಎನ್ನ ಬದುಕು ಒಮ್ಮೆ ಅಳಿಸಿ ಶುದ್ಧಗೊಳಿಸಿ ನಡೆಸಬಾರದೇ
ನಿನ್ನ ಒಂದು ನೋಟಕಾಗಿ ಕಾದು ಕುಳಿತು ಜೀವ ಬಳಲಿದೆ ಓರೆ ನೋಟ ಬೀರ ಬಾರದೇ.

ನಿನ್ನ ಕೃಪೆಗೆ ಭಕುತಿ ಎಷ್ಟು ಬೇಕೋ ನಿನ್ನ ಪಡೆಯಲು ಇನ್ನೆಷ್ಟು ಸಾಧಿಸ ಬೇಕೋ ಅರಿಯಾದಾಗಿದೆ
ಪಾಮರನು ನಾನು ತೊದಲುತಿಹೆನು ಸಖರಾಯಪುರದ ಮಹಾದೇವ ನೀನು ಹರಸಬಾರದೇ.

No comments:

Post a Comment