ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ ಆಸೆ ಆಮಿಷಗಳ ಸುಳಿಯಿಂದ ಹೊರಬರಲಾರೆ
ಉದ್ದಾರ ಮಾಡೆನ್ನನು ಎನ್ನಲು ಎನ್ನ ನಾಲಗೆ ಮಲಿನವಾಗಿದೆ ಗುರುದೇವಾ|
ಕಾಣುತಿಹದು ಕಾಮದಾಟವ ಮನಸು  ಧರಿಸಿಹುದು ಕಪಟ ವೇಷವ
ನುಡಿಯುತಿಹುದು ನಾಲಗೆಯು ನಿನ್ನ ನಾಮವ ತೋರಿಕೆಯ ಬಕುತಿ ಭಾವವ|
ಹಣದಾಸೆಯ ಅಮಲಿನಲಿ ನಾನೆಂಬ ಭಾವದಲಿ ಬಕುತಿಯೆಂದು ನಟಿಸುತಿಹೆನೋ
ಹುಂಬತನದ ಮಾತಿನಲಿ ಎಲ್ಲಾ ಬಲ್ಲೆನೆಂಬ ಗರ್ವದಲಿ ಬದುಕುತಿಹೆನೋ|
ಹಲವು ವೇಷದರಿಸಿ ಹಲವು ಮಂತ್ರ ಜಪಿಸಿ ನಾಟಕವಾಡುತ  ಉಸಿರಾಡುತಿಹೆನೋ
ಎನ್ನ ಕುಕರ್ಮಕೆ ಎನ್ನ ಅಪರಾಧಕೆ ಅನ್ಯರ      ದೂಶಿಸಿ ನಿನ್ನ ಬೇಡುತಿಹೆನೋ|
ಬದುಕಿಗಾಗಿ ಕಾಯಕ ಮಾಡುತಾ ಇತಿಮಿತಿಯ ಎಲ್ಲೆ ಮೀರುತ ನಡೆಯುತಿಹೆನೋ
ಅನ್ಯರ ಏಳಿಗೆಯ ಮಾತಿನಲಿ ಸಹಿಸುತ ಒಳಮನದಿ ಕರುಬುತ ಮುಖವಾಡ ದರಿಸಿಹೆನೋ|
ಮಾಡುವುದೆಲ್ಲ ಮಾಡಿ ಆಡುವುದೆಲ್ಲ ಆಡಿ ಮುಗಿಸಿ ದೈವವ ದೂರುತಿಹೆನೋ
ಸಖರಾಯಪುರದ ನ್ಯಾಯಾಧೀಶ ನೀನು ಎನ್ನ ಕಾರ್ಯಕೆ  ನಿನ್ನಂಗಳದ ತೀರ್ಪು ನೀಡೋ|
Poojya Venkatachala avadootarige nanna bhakti poorvaka namanagalu. Hari om tatsat.
ReplyDelete