ಮೌನವಾಗಿರದ ಮನವು ನಿನ್ನ ನಾಮ ಜಪಿಸದಲೇ ಕೊರಗಿಹುದು
ಮಾಡಿದ ಕರ್ಮಗಳ ನೆನೆ ನೆನೆದು ಎನ್ನ ಹೃದಯ ಭಾರವಾಗಿಹುದು ಗುರುವೇ|
ಬೆಳಕ ಕಾಣುವ ಹಂಬಲದಿ ಕತ್ತಲೆಯೊಳು ನಿನ್ನ ನುಡಿ ಕೇಳಲು ಕಾದಿಹೆನೋ
ಸರಿ ತಪ್ಪುಗಳ ಜಂಜಾಟದಲಿ ತಪ್ಪನೇ ಸರಿಯೆಂದು ಭ್ರಮಿಸಿ ಸೋತಿಹೆನೋ|
ಇನ್ಯಾರದೋ ಬಕುತಿಯನು ಮೀರಿಸುವ ಬರದಿ ತೋರಿಕೆಯ ಭಕುತಿ ತೋರಿದೆನೋ
ಹುಂಬ ತನದಿ ನಟಿಸಿ ನಿನ್ನ ಕರುಣೆಯ ಮಾತು ಕೇಳದೇ ಸಮಯ ಕಳೆದೆನೋ|
ನಿನ್ನ ಒಂದು ನೋಟಕೆ ಹಂಬಲಿಸಿ ಹುಂಬನಾಗಿ ನಿನ್ನ ಬೇಡುವುದೇ ಮರೆತೆನೋ
ಸೇವೆ ಮಾಡದೆಲೆ ಎನ್ನ ಕರುಣಿಸೆನ್ನಲು ನನಗ್ಯಾವ ಬಲವಿದೆ ಅರಿಯೆನೋ|
ಪರಿಪೂರ್ಣ ಮಾಡೆನ್ನ ಬದುಕು ಬರಡಾಗಿ ಹೋಗದಿರಲಿ ಹರಸೆನ್ನನು
ಸಖರಾಯಧೀಶ ನೀನೇ ನನ್ನ ಪ್ರಭುವು ತೆರೆಯೋ ನನ್ನ ಒಳಗಣ್ಣನು |
Poojya avadootarige nanna bhakti poorvaka namanagalu. Sarve jano sukinobavantu. Hari om tatsat.
ReplyDelete