ಕಂಡಿರೇ ಕಂಡಿರೇ ನಮ್ಮ ನಡೆದಾಡುವ ಭಗವಂತನ  ಕಂಡಿರೇ
ಸಖರಾಯಪುರವೆಂಬ ದಿವ್ಯ ಸನ್ನಿಧಿಯೊಳು ನೆಲೆಸಿಹ  ಮಹಾದೇವನ ಕಂಡಿರೇ|
ಗುರುನಾಥನೆನ್ನುವರು ಭಕುತರು ಸದ್ಗುರುಮಹಾರಾಜನೆಂದು ಭಜಿಸುವರು
ಭವಸಗರ ದಾಟಿಸುವ ಅಂಬಿಗನ ಅವತಾರವೇ ಅವಧೂತನೆನ್ನುವರು|
ಗುರುವೇ ನನ್ನ ದೊರೆಯೇ ಎನ್ನುತ ದೈನ್ಯದಿ ಅವನಂಗಳದಿ ಕಾಯುವರೋ
ಕರ್ಮಗಳ ಹೊರೆಹೊತ್ತು ಅವನ ದಿವ್ಯ ಪಾದರವಿಂದದಲಿ ಶಿರವಿಟ್ಟು ಮನ್ನಿಸೆನ್ನುವರು|
ಗುರುತತ್ವ ಅರಿಯಿರಿ ಎಂದೆನುತ  ಹಿರಿತನದಲಿ ಭಕುತರ ಸಲಹುತ  ಹರಸುವರೋ
ಗುರುವಾಕ್ಯ ಪ್ರಮಾಣವು ಅನುಮಾನಿಸದೆ ಸೇವಿಸಿ ಬದುಕೆನ್ನುವರು|
ಇಂದು ಶುಭ ದಿನವು ಗುರುವಿಗೆ ನಮನವು ಶುದ್ಧ ಭಾವಕೆ ಬೆಲೆ ಎನ್ನುವರು
ಸಖರಾಯಧೀಶನ ದಿವ್ಯರೂಪದ ಸ್ಮರಣೆಯು ಮನಕೆ ನೆಮ್ಮದಿಯ ನೀಡಲೆನ್ನುವರು|
Poojya venkatachala avadootarige nanna bhakti namanagalu. Sadaa nimma aashirvaada beduva obba bhakta. Hari om tatsat.
ReplyDelete