ಒಟ್ಟು ನೋಟಗಳು

Tuesday, October 17, 2017

ಗುರುನಾಥ ಗಾನಾಮೃತ 
ಮನದೊಳು ಬಚ್ಚಿಟ್ಟೂಕೊಳಬೇಕು ಈ ಪಾದವಾ
ರಚನೆ: ಅಂಬಾಸುತ 


ಮನದೊಳು ಬಚ್ಚಿಟ್ಟೂಕೊಳಬೇಕು ಈ ಪಾದವಾ
ಮೌನದಲೇ ನೆನೆದಿರಬೇಕು ಗುರುಪಾದವಾ ||ಅ||

ಅಭಿಮಾನವಿಲ್ಲದಾ ಆಡಂಬರವಿಲ್ಲದಾ
ಶುದ್ದಮಾನಸಾ ಪೂಜಾವಿಧಿಯಲೀ
ಸಾತ್ವಿಕ ಗುಣಕುಸುಮದಾ ಮಾಲಿಕೆಯೊಡಗೂಡೀ
ಅರ್ಚಿಸಿ ನಿಜ ಆನಂದವ ಪಡೆಯಲೂ ||೧||

ಮಾನಸ ಮಂದಿರದೀ ಬಲುಪ್ರೇಮದಿಂದಲೀ
ಅಹಂಕಾರಾದಿಗಳಾ ಸುಟ್ಟು ದೂರ ಮಾಡುತಲೀ
ತಂದೆ ನೀ ಸುತ ನಾ ಎಂಬ ಶುದ್ದಭಾವದಲೀ
ಸಾಧನೆಯಾ ಮಾರ್ಗವಾ ತೋರೋ ಎನ್ನಲೂ ||೨||

ಮೆಚ್ಚುಗೆ ಬಯಸದಾ ಹೆಚ್ಚಿನ ದ್ರವ್ಯವಿರದಾ
ಅನುಭವಾಮೃತವ ಅಂತರಂಗದೀ ಸ್ಪುರಿಸುವಾ 
ಸಖರಾಯಪುರವಾಸೀ ಸದ್ಗುರುನಾಥನಾ
ಅಂಬಾಸುತನಾ ಸದ್ಗುರುಪಾದವಾ ||೩||

No comments:

Post a Comment