ಗುರುನಾಥ ಗಾನಾಮೃತ
ಮನದೊಳು ಬಚ್ಚಿಟ್ಟೂಕೊಳಬೇಕು ಈ ಪಾದವಾ
ರಚನೆ: ಅಂಬಾಸುತ
ಮನದೊಳು ಬಚ್ಚಿಟ್ಟೂಕೊಳಬೇಕು ಈ ಪಾದವಾ
ಮೌನದಲೇ ನೆನೆದಿರಬೇಕು ಗುರುಪಾದವಾ ||ಅ||
ಅಭಿಮಾನವಿಲ್ಲದಾ ಆಡಂಬರವಿಲ್ಲದಾ
ಶುದ್ದಮಾನಸಾ ಪೂಜಾವಿಧಿಯಲೀ
ಸಾತ್ವಿಕ ಗುಣಕುಸುಮದಾ ಮಾಲಿಕೆಯೊಡಗೂಡೀ
ಅರ್ಚಿಸಿ ನಿಜ ಆನಂದವ ಪಡೆಯಲೂ ||೧||
ಮಾನಸ ಮಂದಿರದೀ ಬಲುಪ್ರೇಮದಿಂದಲೀ
ಅಹಂಕಾರಾದಿಗಳಾ ಸುಟ್ಟು ದೂರ ಮಾಡುತಲೀ
ತಂದೆ ನೀ ಸುತ ನಾ ಎಂಬ ಶುದ್ದಭಾವದಲೀ
ಸಾಧನೆಯಾ ಮಾರ್ಗವಾ ತೋರೋ ಎನ್ನಲೂ ||೨||
ಮೆಚ್ಚುಗೆ ಬಯಸದಾ ಹೆಚ್ಚಿನ ದ್ರವ್ಯವಿರದಾ
ಅನುಭವಾಮೃತವ ಅಂತರಂಗದೀ ಸ್ಪುರಿಸುವಾ
ಸಖರಾಯಪುರವಾಸೀ ಸದ್ಗುರುನಾಥನಾ
ಅಂಬಾಸುತನಾ ಸದ್ಗುರುಪಾದವಾ ||೩||
No comments:
Post a Comment