ಒಟ್ಟು ನೋಟಗಳು

Tuesday, May 1, 2018

ಗುರುನಾಥ ಗಾನಾಮೃತ 
ಮುಂಜಾನೆದ್ದು ಮಂಗಳಕರ ಗುರು ಮೂರುತಿ ಕಾಣೀರೊ
ರಚನೆ: ಅಂಬಾಸುತ 


ಮುಂಜಾನೆದ್ದು ಮಂಗಳಕರ ಗುರು ಮೂರುತಿ ಕಾಣೀರೊ
ಹಾಡುತ ಪಾಡುತ ಆರತಿ ಮಾಡುತ ಅವನ ಭಜಿಸಿರೊ ||ಪ||

ಯೋಗನಿದಿರೆಯಿಂದೇಳಯ್ಯ ಗುರುವೇ ಎನುತ ಸುಪ್ರಭಾತವ ಹಾಡಿರೊ
ವೇದಮಂತ್ರ ಘೋಷವ ಮಾಡುತಲಿ ಸ್ನಾನವ ಮಾಡಿಸಿರೊ ||೧||

ರೇಶಿಮೆ ವಸ್ತ್ರ ಗಂಧಾಕ್ಷತೆ  ವಿಧವಿಧದಾ ಪುಷ್ಪವ ಅರ್ಪಿಸಿರೊ
ಧೂಪ ದೀಪ ಫಲ ನೈವೇದ್ಯದ ಒಡನೆ ಆತ್ಮವ ನಿವೇದಿಸಿರೊ ||೨||

ಏಕಾರತಿ ಪಂಚಾರತಿ ಮುಂದೆ ಕರ್ಪೂರದಾರತಿ ಮಾಡಿರೊ
ತಪ್ಪನು ಮನ್ನಿಸಿ ಒಪ್ಪವಾಗಿರಿಸೆನುತ ತುಪ್ಪದಾರತಿಯ ಮಾಡಿರೊ ||೩||

ಧನ್ಯವಿದು ಪ್ರದಕ್ಷಿಣೆ ಎನುತಾ ಅವನಡಿಯಲಿ ಶಿರವನ್ನಿಡಿರೊ
ಜ್ಞಾನ ಭಕ್ತಿ ವೈರಾಗ್ಯ ನೀಡಿ ಎಮ್ಮನು ಪೊರೆ ಎನುತಾ ಬೇಡಿರೋ ||೪||

ಈ ವಿಧದಿ ಸದ್ಗುರು ಸೇವೆಯನು ವಿಧವಿಧದಿ ಮಾಡಿರೋ
ನಿಶ್ಚಲನಾಗಿ ಕುಳಿತು ಅವನನು ಧ್ಯಾನಿಸಿ ನಲಿಯಿರೊ ||೫||

ಸಖರಾಯಪುರಾಧೀಶ ಸದ್ಗುರುನಾಥ ಭಕ್ತೋದ್ಧಾರಕನೋ
ಅಂಬಾಸುತನ ಅಂತರಂಗವಾಸ ಭಕ್ತಜನ ಪ್ರಿಯನೋ ||೬||

No comments:

Post a Comment