ಗುರುನಾಥ ಗಾನಾಮೃತ 
ಮುಕ್ತನಾದೆ ನಾನು ಗುರುವ ನಂಬಿ ಸಂತೃಪ್ತನಾದೆನು
ರಚನೆ: ಆನಂದರಾಮ್, ಶೃಂಗೇರಿ  
ಮುಕ್ತನಾದೆ ನಾನು ಗುರುವ ನಂಬಿ ಸಂತೃಪ್ತನಾದೆನು
ಗುರುವಿನಲಿ ಬವಬಂದನ ದಾಟುವ ನಾವೆ ಕಂಡೆನು |
ಹರಿಹರರ ಹುಡುಕುತ ಎಲ್ಲೋ ಕಳೆದು ಹೋದೆನು
ಗುರುವೇ ಅವರೆಂದು ಅರಿಯದೇ ಮರುಳನಾದೆನು|
ನಾನು ಎಂಬ ಮಾಯೆಯಲ್ಲಿ  ಮುಸುಕಿ ಹೋದೆನು |
ಅವನಿಂದಲೇ  ಎಂಬ ಅರಿವಿಲ್ಲದೆ ಮೂಡನಾದೆನು|
ಬದುಕು ಕಟ್ಟುವ ಬರದಿ ಭ್ರಮೆಯ ಅರಸಿ ಬಂದೆನು
ನಿಜವ ಅರಿಯಲು ನಿನ್ನ ಮುಂದೆ ಮೂಕನಾಗಿಹೆನು|
ಮಾತು ಮರೆತು ಬದುಕ ನಡೆಸಿ ಏಲ್ಲೂ ಸಲ್ಲದಾದೆನು
ನಿನ್ನ ಅರಸಿ ಬಂದು ಎನ್ನ ಕಾಯೋ ಗುರುವೆ ಎಂದೆನು|
ಮೂರು ದಿನದ ಬದುಕಿಗಾಗಿ  ನಿನ್ನ ಬೇಡಿ ಬಂದೆನು
ಎನ್ನ ಹರಸಿ ಮುಕ್ತ ಗೊಳಿಸಿ ಎನ್ನ ಸಲಹು ಎಂದೆನು|

No comments:
Post a Comment