ಒಟ್ಟು ನೋಟಗಳು

238896

Wednesday, November 8, 2017

ಗುರುನಾಥ ಗಾನಾಮೃತ 
ಬಾಣಾವಾರವೇ ಸದ್ಗುರುತವರು
ರಚನೆ: ಅಂಬಾಸುತ 


ಬಾಣಾವಾರವೇ ಸದ್ಗುರುತವರು
ಬರುವರು ಸಾವಿರಾರುಜನರು
ನೆಲೆಸಿಹುದು ಚೈತನ್ಯದ ಬೇರು
ಭಕ್ತರಿಗಿದು ಜ್ಞಾನದ ಚಿಗುರು

ಜೋಳಿಗೆ ಬಿಕ್ಷೆಯ ಹಿಡಿಸೇರು
ಉಣ್ಣುವ ಭಕ್ತರು ಸಾವಿರಾರು
ಇಲ್ಲ ಯಾವುದೇ ತಕರಾರು 
ಕಾರಣ ಇದು ಸದ್ಗುರು ದರ್ಬಾರು

ನಾಮಸ್ಮರಣೆಯೇ ಇಲ್ಲಿಯ ಉಸಿರೂ
ಪ್ರತಿ ಮನದಲ್ಲೂ ಗುರು ತಾ ಹಸಿರೂ
ದೊರಕದೆ ಇರದೂ ಅನ್ನ ನೀರೂ
ಭಾವಿಕ ಬಕುತರಿಗಿದೇ ನಿಜ ಸೂರು||

ಭಜನೆಯ ಝೇಂಕಾರ ಇಲ್ಲಿ ಬಲು ಜೋರೂ
ಸಾಕ್ಷಿ ಸ್ವರೂಪನು ತಾನಿಲ್ಲಿ ಸದ್ಗುರು
ಇಲ್ಲಿಗೆ ಬಂದರೆ ಭವಬಂಧನದಿಂ ಪಾರೂ
ಪಡೆವಂತೆ ಸ್ವರ್ಗವ ಹೂವಿನಿಂ ನಾರೂ ||

No comments:

Post a Comment