ಒಟ್ಟು ನೋಟಗಳು

Saturday, September 30, 2017

ಗುರುನಾಥ ಗಾನಾಮೃತ 
ಯಾರು ಬಲ್ಲರು ನಿನ್ನ ಮನವ
ರಚನೆ: ಶ್ರೀಮತಿ.ಶೈಲಜಾ ಕುಮಾರ್


ಯಾರು ಬಲ್ಲರು ನಿನ್ನ ಮನವ
ಯಾರು ತಿಳಿವರು ನಿನ್ನಾಂತರ್ಯವ

ಬಯಸದ ಭಾಗ್ಯ ನೀ ಕೊಟ್ಟೆ
ಬಯಸಿದನು ಕೊಡಲು ಮರೆತೆ
‌ಇದರಿಂದ ಪಾಠವ ನಾ ಕಲಿತೆ
ನೋವು ನಲಿವೆಲ್ಲಾ ನಿನ್ನ ಪಾದಕೆ

ಕಾರಣವೂ ಎಲ್ಲಕೂ ನೀನಂತೆ
ನಮ್ಮಿಚ್ಛೆಯು ಏನೂ ನಡೆಯದಂತೆ
ಬದುಕಿನ ಸೂತ್ರವು ನಿನ್ನ ಕೈಯಲ್ಲಿ
ಕೈ ಹಿಡಿದು ನೆಡೆಸು ನೀನಿಲ್ಲಿ

ನನ್ನದೇನೂ ಇಲ್ಲ ಈ ಜಗದಲಿ
ನೀ ಕೊಟ್ಟ ಭಿಕ್ಷೆಯೇ ಜೀವನದಲಿ
ನಿನ್ನಿಚ್ಛೆಯಿಲ್ಲದೆ ನೆಡೆಯದೇನೂ ಇಲ್ಲಿ
ಶರಣಾಗತರಿಗೇ ರಕ್ಷಿಸುವೆ ನೀನಿಲ್ಲಿ
ಗುರುನಾಥ ಸ್ತೋತ್ರ  ಕುಸುಮಾಂಜಲಿ 

ತೇಜಸಿ ರವಿತೇಜಃ ಯಃ 
ಕರುಣಾಯಾಂ ಆರ್ದ್ರಮನಃ |
ಮನೋವ್ಯಾಪಾರೇ‌ ಅಗಮ್ಯಃ
ಪಾತು ಸದಾ ಸ ಸದ್ಗುರುಃ ||


ಯಾರು ತೇಜಸ್ಸಿನಲ್ಲಿ ಸಹಸ್ರಸೂರ್ಯಸದೃಶನೋ..ಕರುಣೆಯಲ್ಲಿ ಆರ್ದ್ರಮನವುಳ್ಳವನೋ.ಯಾರ ಯೋಚನಾಲಹರಿಯನ್ನು ಯಾರೂ ತಿಳಿಯಲು ಸಾಧ್ಯವಿಲ್ಲವೋ ಅಂತಹ ಸದ್ಗುರುವಾದ ಗುರುನಾಥನು ನಮ್ಮನ್ನು ಯಾವಾಗಲೂ ಕಾಪಾಡಲೀ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Thursday, September 28, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಪ್ರವೃತ್ತಿಶ್ಚ ನಿವೃತ್ತಿಶ್ಚ
ದ್ವೌ ಸ್ತಃ ವಿರುದ್ಧಮಾರ್ಗೇ ಹಿ |
ಏಕೋ ನಯತಿ ಸಂಸಾರೇ 
ವಿರಮತ್ಯನ್ಯೋ ಪ್ರಜ್ಞಾನೇ ||


ಲೋಕದಲ್ಲಿ ಪ್ರವೃತ್ತಿ ಹಾಗೂ ನಿವೃತ್ತಿಗಳೆಂಬ ಎರಡು ಪರಸ್ಪರ ವಿರುದ್ಧಮಾರ್ಗಗಳಿವೆ..ಇದರಲ್ಲಿ ಪ್ರವೃತ್ತಿಯು ದುಃಖಮಯವಾದ ಭವಸಾಗರಕ್ಕೆ ಒಯ್ದರೆ ಮತ್ತೊಂದಾದ ಚಿತ್ತವೃತ್ತಿನಿರೋಧ ರೂಪವಾದ ಯೋಗಮಾರ್ಗದಿಂದ ನೆಡೆಸಲ್ಪಡುವ ನಿವೃತ್ತಿಮಾರ್ಗವು ಚಿದಾನಂದಾತ್ಮಕವಾದ ಬ್ರಹ್ಮಜ್ಞಾನಕ್ಕೆ ಒಯ್ಯುತ್ತದೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Wednesday, September 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ತತ್ರಾಂತರಂಗಮೌನಂ ಚ
ಮೂಲಂ ಸರ್ವಸಾಧನೇಷು  |
ಸಾಧಕೋ ಬ್ರಹ್ಮಜಿಜ್ಞಾಸುಃ
ಪ್ರಯತತಿ ಸ್ವಜೀವನೇ ||


ಅಂತರಂಗದಲ್ಲಿ ಮೌನವಾಗಿರುವುದು ಎಲ್ಲಾ ಸಾಧನೆಗಳ ಮೂಲವಾಗಿದೆ..ಅದರಿಂದ ಬ್ರಹ್ಮಜಿಜ್ಞಾಸಕರಾದ ಸಾಧಕರು ಅಂತರಂಗವನ್ನು ಮೌನವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ...ಇಲ್ಲಿ ಮೌನವೆಂದರೆ ಮಾತನಾಡದೆ ಇರುವುದಲ್ಲ..  ಮನದಲ್ಲಿ ಹುಟ್ಟುವ ಆಲೋಚನೆಗಳಿಗೆ ಮನಸ್ಸು ಕೊಡದೆ ಇರುವುದು ನಿಜವಾದ ಮೌನ .. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ತ್ಯಕ್ತ್ವಾ ದೇಹಾಭಿಮಾನಂ ಚ
ತ್ಯಕ್ತ್ವಾ ಮಾನಾಭಿಮಾ‌ನಂ ಹಿ |
ವ್ರಜತಿ ಸಾಧಕಃ ಗುರುಂ 
ದುಃಖದ್ವೇಷಾದಯೋ ಕುತ್ರ ||


ದೇಹಾಭಿಮಾನವನ್ನೂ.. ಮಾನ ಸನ್ಮಾನಗಳನ್ನೂ ಬಿಟ್ಟು ಅನನ್ಯ ಭಕ್ತಿಯಿಂದ  ಸದ್ಗುರುವಿನ ಬಳಿ ಸಾಗುವ ಸಾಧಕನಿಗೆ ದುಃಖ ದ್ವೇಷವೇ ಮೊದಲಾದ ಭಾವಗಳ ಉಗಮವು ಹೇಗಾಗುತ್ತದೆ... 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಬದುಕೇ ಪಾವನವಾಯಿತು
ರಚನೆ: ಶ್ರೀಮತಿ.ಶೈಲಜಾ ಕುಮಾರ್


ಬದುಕೇ ಪಾವನವಾಯಿತು
ಗುರುವರನ ಸೇವೆಯು ದೊರೆತು
ನಮ್ಮ ಬದುಕೇ ಪಾವನವಾಯಿತು ||

ಪೂರ್ವಿಕರು ಮಾಡಿದ ಪುಣ್ಯದ ಫಲವೋ
ಹಿಂದಿನ ಜನ್ಮಗಳ ಸುಕೃತವೇನೋ
ಮಾಡಿದ ಪೂಜೆಗಳ ಫಲವೋ
ಸಾಧುಜನರ ದರ್ಶನದ ಫಲವೋ || ೧ ||

ಸುಲಭಕೆ ಎಂದೂ ಒಲಿಯನಿವನು
ಯಾರಿಗೂ ಅರ್ಥವಾಗದವನಿವನು 
ಕರ್ಮಮಾರ್ಗದಿ ಜ್ಞಾನವರ್ಜಿಸಿ ಎನುವನೋ
ಜ್ಞಾನದ ಹಾದಿಲಿ ಪರಮಾರ್ಥವ ಕಾಣಿರೆನ್ನುವನೋ  || ೨ ||

ನೆಡೆನುಡಿಯಲಿ ಶುದ್ಧವಾಗಿಹನೋ
ಬಾಹ್ಯಾಡಂಬರಕೆ ಸೋಲನಿವನೋ
ಧರ್ಮಮಾರ್ಗದಿ ನೆಡೆಯಿರಿ ಎನುವನೋ
ಶುದ್ಧಾಂತರಾತ್ಮಕೆ ಒಲಿಯುವನಿವನು || ೩ ||

ಆತ್ಮಸಾಧನೆಯೇ ಗುರಿಯೆನುವನೋ
ಧನಸ್ವರ್ಣಾದಿಗಳಿಗೆ ಬೆಲೆಕೊಡದವನೂ
ಜಪಧ್ಯಾನದಿ ಸಾಧನೆಮಾಡಿರೆನ್ನುವನೋ 
ಶುದ್ಧಮನದಲಿ ಸದಾ ನಲಿಯುವನೂ || ೪ ||
ಗುರುನಾಥ ಸ್ತೋತ್ರ  ಕುಸುಮಾಂಜಲಿ 

ವಿಸ್ಮೃತ್ಯ ಸ್ವಸ್ವರೂಪಂ ಚ
ಅವೇದ್ಯ ಜೀವಾತ್ಮೈಕತ್ವಂ |
ಭ್ರಮತಿ ಮನಃ ಪ್ರಪಂಚೇ 
ಗುರೋ ದರ್ಶಯ ಮೇ  ಮಾರ್ಗಮ್ ||


ತನ್ನ ನಿಜ ಸ್ವರೂಪವನ್ನು ಮರೆತು ...ಜೀವ ಆತ್ಮಗಳ ಅದ್ವೈತವನ್ನು ತಿಳಿಯದೇ ನಶ್ವರವಾದ ಈ ಪ್ರಪಂಚದಲ್ಲಿ ಮನವು ಅಲೆದಾಡುತ್ತಿದೆ...ಹೇ ಸದ್ಗುರುವೇ ...ಕೃಪೆಮಾಡಿ ನನಗೆ ದಾರಿ ತೋರು .... 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಸ್ತೋತ್ರ  ಕುಸುಮಾಂಜಲಿ 

ನ  ಶಕ್ಯಂ ಚಕ್ಷುಷಾ ದೃಷ್ಟಂ 
ನಾಪಿ ಶ್ರವಣೇನ ಶ್ರೋತುಂ |
ವೇದ್ಯಂ ಚ ಮನಸಾ ನಿತ್ಯಂ
ಗುರುಕೃಪಯಾತ್ಮಜ್ಞಾನಮ್ ||



ಚಕ್ಷುರಿಂದ್ರಿಯದಿಂದ ಕಾಣಲು ಸಾಧ್ಯವಾಗದ ..ಶ್ರವಣೇಂದ್ರಿಯಗಳಿಂದ ಕೇಳಲು ಆಗದ ... ನಿತ್ಯಸತ್ಯವೂ ಸೋಹಂ ಎಂಬ ಆತ್ಮಜ್ಞಾನವು ಸದ್ಗುರುಕೃಪೆಯಿಂದ  ಮನಸಿಗೆ ಮಾತ್ರ ವೇದ್ಯವಾಗುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Thursday, September 21, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಭಕ್ತಾರ್ತಿವಿಷಪಾನೇನ  
ತ್ವಮಭವತ್  ನೀಲಕಂಠಃ |
ಸಂತೋಷಾಮೃತಂ ಸಿಂಚತಿ 
ನಾಶಯತಿ ಕುಕರ್ಮಂ ಚ ||



ಹೇ ಗುರುವೇ..ನೀನು ಭಕ್ತರ ದುಃಖವೆಂಬ ವಿಷವನ್ನು ಕುಡಿದು ಅಂದರೆ ಪರಿಹಾರ ಮಾಡಿ ನೀಲಕಂಠನೆನಿಸಿ..ಸಂತೋಷವೆಂಬ ಅಮೃತವನ್ನು ಉಣಿಸುವೆ..ಕೆಟ್ಟ ಕರ್ಮಗಳ ಪ್ರವೃತ್ತಿಯನ್ನು ದೂರಮಾಡುವೆ.‌

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Wednesday, September 20, 2017

ಗುರುನಾಥ ಗಾನಾಮೃತ 
ಗುರುವೆ ತಾಯಿ ಗುರುವೆ ತಂದೆ ಗುರುವೆ ನಮ್ಮ ದೈವವು
ರಚನೆ: ಶ್ರೀಮತಿ.ಶೈಲಜಾ ಕುಮಾರ್


ಗುರುವೆ ತಾಯಿ ಗುರುವೆ ತಂದೆ ಗುರುವೆ ನಮ್ಮ ದೈವವು
ಗುರುವೆ ಪ್ರೇರಕ ಗುರುವೆ ಯೋಜಕ
ಗುರುವೆ ನಮ್ಮ ಜಗವು ।। ಪ ।।

ಕಣ್ಣಲಿ ವಾತ್ಸಲ್ಯವ ಸೂಸುತಿಹ
ಮನದಲಿ ಸದಾ ಇರುವೆನೆಂದಿಹ
ಮಾತಲಿ ಅಭಯವ ನೀಡುತಿಹ
ಕರದಲಿ ಸತ್ಕಾರ್ಯ ಮಾಡಿಸುತಿಹ ।। ೧ ।।

ಕುಜನರ ಸುಮಾರ್ಗಕೆ ತರುವ
ಸುಜನರಿಗೆ ಗಮ್ಯವ ತೋರುವ
ಬಾಳನು ನಂದನ ಮಾಡುವ
ಜೀವನ ಸಾರ್ಥಕ ಮಾಡುವ ।। ೨ ।।

ಶರಣೆಂಬರ ಕೈ ಹಿಡಿಯುವ
ಮತಿಹೀನರಿಗೆ ‌ಮತಿಯ ಕೊಡುವ
ನಿಸ್ವಾರ್ಥದಿ ಬಾಳಿರಿ ಎನ್ನುವ
ಶಿಷ್ಯರುದ್ಧಾರದಲಿ ಸಂತಸ ಕಾಣುವ ।। ೩ ।।

Tuesday, September 19, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ನದೀನಾಂ  ಗಮ್ಯ ಸಾಗರಃ
ವೃಷ್ಟೀನಾಂ ಚ ವಸುಂಧರಾ |
ಸಾಧಕಾನಾಂ ಮುಮುಕ್ಷೂನಾಂ  
ಗಮ್ಯಶ್ಚ ತತ್ಪದಪ್ರಾಪ್ತಿಃ ||


ಹೇಗೆ ನದಿಗಳು ಹರಿಯುತ್ತಾ ತನ್ನ ಗಮ್ಯವಾದ ಸಮುದ್ರವನ್ನು ಸೇರುವುದೋ ... ಮಳೆ ಹನಿಯು ಭೂಮಿಯನ್ನೇ ಸೇರುವುದೋ ಹಾಗೆ ಸಾಧಕರಿಗೆ ಹಾಗೂ ಮೋಕ್ಷಾರ್ಥಿಗಳಿಗೆ ಆ ಬ್ರಹ್ಮಪದ ಪ್ರಾಪ್ತಿಯೇ ಗಮ್ಯವಾಗಿರುತ್ತದೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Monday, September 18, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಉಚ್ಛ್ವಾಸೇ ಚ ನಿಶ್ವಾಸೇ ಚ
ಸೋ$ಹಂ ಭವತು ಭಾವಶ್ಚ |
ನಿದ್ರಾಯಾಂ ವಾ ಪ್ರಬೋಧೇ ವಾ
ಗುರುನಾಮಸಂಕೀರ್ತನಮ್  ||


ನಮ್ಮ ಉಚ್ಛ್ವಾಸ ನಿಶ್ವಾಸದ ಪ್ರಕ್ರಿಯೆಗಳಲ್ಲಿ ಸಃ ಅಹಂ ಎಂಬ ಅದ್ವೈತದ ಭಾವವಿರಲೀ..ನಮ್ಮ ನಿದ್ರೆಯಲ್ಲಾಗಲೀ ಎಚ್ಚರದ ಸ್ಥಿತಿಯಲ್ಲಾಗಲೀ ಗುರುನಾಮದ ಸಂಕೀರ್ತನೆಯೇ ಅನವರತ ಇರಲೀ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Sunday, September 17, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಜ್ಞಾನೇನ ವಾ ಅಜ್ಞಾನೇನ ವಾ 
ಉಪಾಧಿನಿರುಪಾಧಿನಾ |
ಸಗುಣೇ ವಾ ಚ ನಿರ್ಗುಣೇ
ಗುರುರ್ಲಸತು ಮಾನಸೇ ||


ಜ್ಞಾನಪೂರ್ವಕವಾಗಲೀ ಅಥವಾ ಅಜ್ಞಾನದಿಂದಲಾಗಲೀ..ಉಪಾಧಿಯಿಂದ ಅಥವಾ ಉಪಾಧಿರಹಿತವಾಗಲೀ.. ಸಗುಣರೂಪದಿಂದಲಾಗಲೀ ಅಥವಾ ನಿರ್ಗುಣ ನಿರಾಕಾರದಿಂದಲಾಗಲೀ ಸದ್ಗುರುವಿನ ಸ್ಮರಣೆಯು ನಮ್ಮ  ಹೃನ್ಮಂದಿರದಲ್ಲಿ ಸದಾ ಆಗಲೀ.. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಸ್ತೋತ್ರ  ಕುಸುಮಾಂಜಲಿ 

ರವಿಃ ತಪತಿ ಸಂಸಾರೇ
ಶಶೀ ಹರತಿ ತಾಪಂ ಚ |
ದುರ್ಗುಣಾನ್ ನಾಶಯಿತ್ವಾ  ಸಃ
ಭವತಾಪಂ ನಾಶಯತಿ ||


ಹೇಗೆ ಸೂರ್ಯನು ಈ ಪ್ರಪಂಚದಲ್ಲಿ ತನ್ನ ಪ್ರಖರವಾದ ಕಿರಣಗಳಿಂದ  ಉರಿಯುತ್ತಾನೋ ..ಚಂದ್ರನು ತನ್ನ ಶೀತಲಕಿರಣಗಳಿಂದ  ಆ ಉಷ್ಣತೆಯನ್ನು ಕಡಿಮೆ ಮಾಡುತ್ತಾನೋ ..ಹಾಗೆಯೇ ಸದ್ಗುರುವು ನಮ್ಮ ಅಂತರಂಗದ ಕಲ್ಮಶಗಳನ್ನು ದಹಿಸಿ ನಿರ್ಮಲವಾದ ಮನೋಮಂದಿರದಲ್ಲಿ ನೆಲೆಸಿ ಭವದ ತಾಪವನ್ನು  ನಾಶ ಮಾಡುತ್ತಾನೆ... 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Friday, September 15, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸರ್ವಜೀವಿಷು ಆತ್ಮಾನಂ
ಆತ್ಮನಿ ಸರ್ವಜಂತೂನಾಂ |
ಪರಮಾತ್ಮಜ್ಞಾನಿನಾಂ ತು 
ಹರ್ಷಶೋಕಾದಯಃ ಕುತ್ರ ||


ಎಲ್ಲಾ ಜೀವಿಗಳಲ್ಲಿ ಪ್ರಕಾಶಾತ್ಮಕನಾದ ಆತ್ಮನನ್ನು...ತನ್ನ ಆತ್ಮನಲ್ಲಿ ಸಕಲಜೀವಿಗಳನ್ನು ನೋಡುವ ಆತ್ಮಜ್ಞಾನಿಗೆ ಹರ್ಷಶೋಕವೇ ಮೊದಲಾದ ಭಾವಗಳು ಹೇಗೆ ತಾನೇ  ಪ್ರಕಟವಾಗುತ್ತದೆ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು