ಒಟ್ಟು ನೋಟಗಳು

Friday, January 31, 2020

ಮನದೊಳಗೆ ಬಂದ ದೈವಕೆ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಮನದೊಳಗೆ ಬಂದ ದೈವಕೆ
ಮನೆಯೊಳಗೆ ಬಾರದ ಮನಸೇಕೆ !
ಮಗಿಲೊಳಗೆ ತುಂಬಿದ ಮಳೆಹನಿಗೆ
ಇಳೆಗೆ ಬಾರದ ಮುನಿಸೇಕೆ !

ತಪ್ಪು ಒಪ್ಪುಗಳೆಲ್ಲವು ನಿನಗೇ ಅರ್ಪಿತ
ಮಾನಸಮ್ಮಾನಕೆಲ್ಲ ನಿನದೇ ಅಂಕಿತ !
ಹೆಸರಿನೊಳಗಿನ ಉಸಿರೇ ನಿನ್ನದಯ್ಯ
ಇನ್ನಾದರೂ ತಡ ಮಾಡದೆ ಬಾರಯ್ಯ !!೧!!

ನಿನ ಪಾದದಡಿಯ ಕಣವು ನಾನು
ನನ್ನ ಪದಗಳೆಲ್ಲದರ ಭಾವವು ನೀನು !
ನಿನ್ನೊಂದು ದೃಷ್ಟಿಗೆ ಕಾದಿಹ ತೃಣವು ನಾನು 
ಬಂದೊಮ್ಮೆ ಉಣಿಸೋ ಭಕ್ತಿಯ ಜೇನು !! ೨!!

ನೀನಿದ್ದೆಡೆಯೇ ನಮಗೆ ಸುಖಧಾಮ 
ನಿನ್ನ ವಚನಗಳೇ ನಮಗೆ ಶಾಂತಿಧಾಮ !
ನೀನಿತ್ತ ವರಗಳೇ ನಮಗೆ ಚೈತನ್ಯಧಾಮ
ಬಂದೆಮ್ಮ ಗುರಿಮುಟ್ಟಿಸೋ  ಸೌಖ್ಯಧಾಮ !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೩೦-೧-೨೦೨೦

Tuesday, January 28, 2020

ಎನ್ನ ಅಂತರಂಗದ ಕದವ ತಟ್ಟಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎನ್ನ ಅಂತರಂಗದ ಕದವ ತಟ್ಟಿ ನಾನೆಂಬ ಭಾವವ ಹೊರದೂಡೋ ಗುರುವೇ
ನಿನ್ನ ನಾಮದ ಬಲದಿಂದ ಮನವ ಶುದ್ಧಗೊಳಿಸಿ
ಭವ ಬಂಧನದಿಂದ ಮುಕ್ತ ಗೊಳಿಸೋ ಪ್ರಭುವೇ|

ನಾನೇನು ಮಾಡಿದೆನೋ ಅದೂ ನಿನ್ನ ಪ್ರೇರಣೆಯ ಫಲವೆಂದು ನಂಬಿಹೆನೋ
ಒಳಿತು ಮಾಡುವ ಮಾನವ ನೀಡಿ  ಸಾರ್ಥಕತೆಯ  ಜನುಮವ ನೀಡೋ ದೊರೆಯೇ|

ಎಷ್ಟು ಅರಿತರೂ ಸಾಲದು ನಿನ್ನ ಮಹಿಮೆಯ ಚರಿತವನು ಅದು ಅಕ್ಷಯವೋ
ಅರಿತಿಹೆನೆಂದು ಪಾಮರ ನಾನು ಬೀಗಿದರೆ ಬಲು ಮೂಡನಲ್ಲದೆ ಇನ್ನೇನೋ|

ನೀ ನುಡಿವ ನುಡಿಗಳಲಿ ಅಡಗಿಹ ವೇದಸಾರವ ಅರಿತರೆ ಜನುಮ ಪಾವನವೋ
ನುಡಿದಂತೆ ನಡೆದು ಜೀವನ ತೋರುವ ಮಹಾ ಪುರುಷ ನಿನ್ನ ಸಮಾನರಿಲ್ಲವೋ|

ಧರೆಗಿಳಿದು ಬಂದು ಸಖರಾಯಪುರವೆಂಬ ಪುಣ್ಯ ಭೂಮಿಯ ಪಾವನ ಮಾಡಿದೆಯೋ
ನಿನ್ನ ಅರಸಿ ಬರುವ ಬಕುತರ ಹಸಿವೆ ನೀಗಿ ಬದುಕು ಹಸನ ಮಾಡಿ ಹರಸಿದೆಯೋ|

ಎಷ್ಟು ವರುಷಗಳು ಉರುಳಿತು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟು ವರುಷಗಳು ಉರುಳಿತು ಗುರುವೇ ನಿನ್ನ ಮೆಚ್ಚಿಗೆಯ ಪಡೆಯದೇ ಸೋತೆನೋ
ಎನ್ನ ಬಕುತಿಯಲಿ ಹುರುಳಿಲ್ಲವೆಂದು ನನ್ನ ನೆರಳಿಂದಲೂ ದೂರವಿರುವೆಯಾ ನೀನು|

ಯಾರದೋ ಭಕುತಿಯ ಕಂಡು ನಾನೂ ಭಕುತಿ ಮಾಡಿದೆನೆಂದು ತಿಳಿದೆಯಾ ದೊರೆಯೇ
ಎನ್ನಂತರಾತ್ಮದೊಳು ನೀ ನೆಲೆ ನಿಂತಿಹೆಯೆಂದು ನಂಬಿ ನಿನ್ನ ಬಜಿಸುವೆನೋ ಗುರುವೇ|

ನೇಮ ನಿಷ್ಠೆಯೊಳು ಎನಗೆ ಮನವಿಲ್ಲ ನಿನ್ನ ನಾಮದ ಹೊರತು ಬೇರೆ ಬೇಕಿಲ್ಲ
ನಿನ್ನ ಚರಿತೆಯೊಳು ನಿಲ್ಲಿಸಿಹೆ ಎನ್ನ ಮನವೆಲ್ಲ ಇನ್ನೇನು ಬೇಕೆನೆಗೆ ಎಲ್ಲಾ ನಿನ್ನದಲ್ಲ|

ನಾನೇಕೆ ನಿನ್ನ ನಂಬಿಹೆನೋ ಎನ್ನ ಮನಕೇ ತಿಳಿಯದಾಯಿತಲ್ಲ ಪ್ರಭುವೇ
ಇದೂ ನಿನ್ನ ಲೀಲೆಯ ಒಂದು ಪರಿಯಲ್ಲದೆ ಮತ್ತೇನು ಹೇಳೋ ಗುರುವೇ|

ನಿನ್ನೊಳು ಎನ್ನ ಮನ ಸದಾ ನಿಲ್ಲಿಸಲು ನಾ ಹೇಗೆ ಬಜಿಸಲಿ ಹೇಳೋ ನನ್ನ  ದೊರೆಯ
ಇನ್ಯಾವ ದೇವರನು  ನಾ ಬೇಡೆನು ನೀ ದೂರ ಮಾಡದೇ ಹರಸೋ ನನ್ನ ಗುರುವೇ|

Sunday, January 26, 2020

ಏನೂ ಅರಿಯದ ನಾನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಏನೂ ಅರಿಯದ ನಾನು ಏನು ಬರೆಯಲಿ ಪದಗಳಲಿ ಪ್ರಭುವೇ
ಸಾಲು ಸಾಲು ಪದಗಳ ಜೋಡಿಸಿ ಫಲವಿಲ್ಲ ಎಂದರಿತು ಮೌನಕೆ ಶರಣಾದೆ ಗುರುವೇ|

ಯಾರೂ ಅರಿಯದ ಲೀಲೆ ನೀ ಎನಗೆ ತೋರಿದರೆ ಜಗಕೆ ಸಾರುವೆ ನಾನು
ನನ್ನರಿವಿನ ಜಗದೊಳು ಪೊಳ್ಳು ಭಾವನೆ ತುಂಬಿರಲು ನೀ ಎಲ್ಲಿ ಒಲಿಯುವೆ ಎನಗೆ|

ಏನೂ ಅರಿಯನೆಂದು ಸಾರಿ ಜಗಕೆ ಹೇಳಿದರೂ ಬರೀ ತೋರಿಕೆಯಾಯ್ತು ನನದು
ಮನವು ಬರಿದು ಮಾಡಿ ನೀನೊಬ್ಬನೆಂಬ ಭಾವ ತುಂಬಲಾರದೆ ಸೋತಿಹ ಮನ ನನದು|

ಅನ್ಯರಗೊಡವೆ ಎನಗೆ ಬೇಡವೆಂದು ಮನಕೆ ನೀ ಹೇಳಿದರೂ ಬಿಡಲಿಲ್ಲ ಭ್ರಮೆಯು
ಇತರರ ಅನಂದದಲಿ ದೇವರನು ಕಾಣೆ0ದೆ ನೀನು
ಅದ ಅರಿಯದೇ ಮುಡನಾದೆ ನಾನು| 

ಕಳ್ಳ ಮನದೊಳು ನಂಜಿನಾ ಭಾವತುಂಬಿ ನಿನ್ನ ಭಜಿಸಿ ಫಲವೇನು
ಎಲ್ಲವನೂ ತ್ಯಜಿಸಿ ಪೂರ್ಣ ಶರಣಾಗದೆ ಬೇರೆ ದಾರಿ ತೊರೆಯಾ ನೀನು|

Saturday, January 4, 2020

ಅರ್ಥಪೂತಾಂ ಗುರೋರ್ವಾಕ್ಯಂ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಅರ್ಥಪೂತಾಂ ಗುರೋರ್ವಾಕ್ಯಂ
ಚಿತ್ತಪೂತಾಂ ಗುರೋರ್ದೃಷ್ಟಿಂ I
ವಚಃ ಪೂತಾಂ ಗುರೋರ್ತತ್ವಂ
ಆತ್ಮಪೂತಂ ಅನುಸರೇತ್ II

ಅರ್ಥಗರ್ಭಿತವಾದ ಪವಿತ್ರವಾದ ಗುರುವಾಕ್ಯವನ್ನು, ನಮ್ಮ ಮನಸ್ಸುಗಳನ್ನು ಪವಿತ್ರವಾಗಿರಿಸುವ ಗುರುದೃಷ್ಟಿಯನ್ನು,ನಮ್ಮ ಮಾತುಗಳನ್ನು ಶುದ್ಧಿಮಾಡುವ ಗುರುತತ್ತ್ವವನ್ನು ಶುದ್ಧಾತ್ಮರಾಗಿ ಅನುಸರಿಸಬೇಕು .

!! ಸರ್ವದಾ ಸದ್ಗುರುನಾಥೋ
ವಿಜಯತೇ!!
೫-೧-೨೦೨೦