ಒಟ್ಟು ನೋಟಗಳು

Thursday, October 31, 2019

ನಿನ್ನ ದಿವ್ಯ ಚರಣ ಕಂಡ ಮನವು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ದಿವ್ಯ ಚರಣ ಕಂಡ ಮನವು ಬಲು ಮುದದಿ  ಕುಣಿದಾಡಿತೋ 
ಹೃದಯ ಕಮಲದಿ ನಿನ್ನ ಸ್ಮರಣೆ ನೆಲೆ ನಿಂತು ಧನ್ಯವಾಯಿತೋ ಗುರುವೇ|

ಬುದ್ದಿ ಇಲ್ಲದಾ ಜೀವವಿದು ನಿನ್ನ ನೆನೆವ ಅರಿವು ಪಡೆಯಿತೋ
ಕರ್ಮ ಫಲದ ಅರಿವಿಲ್ಲದೇ ಬದುಕು ನಡೆಸಿ ಮೂಡನಾಯಿತೋ|

ಅಂತರಂಗದಿ ಭಾವ ಶುದ್ದಿ ಇಲ್ಲದೇ ವೇಷ ಧರಿಸಿ ದಿನವ ಕಳೆಯಿತೋ
ಅರಿವಿದ್ದರೂ ಬಾಳು ನಡೆಸಿ ಕಪಟನಾಗಿ ಪಾಪಿಯಾಯಿತೋ|

ತೋರಿಕೆಯ ಭಕುತಿ ಮಾಡಿ ಮಲಿನ ಮನವ ಸಂಗ ಪಡೆಯಿತೋ
ಮೂರು ದಿನದ ಬದುಕಿಗಾಗಿ ಬಣ್ಣ ಬಣ್ಣದ ವೇಷವ ದರಿಸಿತೋ|

ನಿನ್ನ ನಾಮವೊಂದೇ ಸಕಾಯ್ತು ಎನ್ನ ಮನಕೆ  ಬದುಕ ಕಲಿಸಿತೋ
ಸದಾ ನಿನ್ನ ಒಲುಮೆಗಾಗಿ ಮನವು ಮಿಡಿದು ನಿನ್ನ ಪಾದ ಪಿಡಿಯಿತೋ|

Monday, October 21, 2019

ದಯ ಮಾಡೋ ಗುರುವೇ ಎನ್ನಾ ಮನೆಗೆ ದಯಮಾಡೋ - ರಚನೆ :ಆನಂದ ರಾಮ್

ದಯ ಮಾಡೋ ಗುರುವೇ ಎನ್ನಾ ಮನೆಗೆ ದಯಮಾಡೋ
ಪಾಮರನು ನಾನು ನಿನ್ನ ಸೇವೆಯ ಪರಿಯ ಅರಿಯನೋ ಒಮ್ಮೆ ದಯಮಾಡೋ|

ನಿನ್ನ ಚರಿತೆಯ ಓದುತ ನಿನ್ನ ಮಹಿಮೆಯ ಅರಿಯುತ ದೈನ್ಯದಿ ಬೇಡುವೆನೋ
ಸಾಟಿಯಿಲ್ಲದಾ ಗುರುವರ ನೀ ಎನ್ನ ಕೋರಿಕೆಯ ಮನ್ನಿಸಿ ಬರುವಿಯೇನೋ|

ನಿರಂತರ ನಿನ್ನ ಸೇವಿಸುವ ಬಕುತರ ಸಂಗವ ತೊರೆದು ಒಮ್ಮೆ ಹರಸೋ ಎನ್ನನು
ನಿನ್ನ ತತ್ವವ ಅರಿಯದ ಈ ಮೂಡನ ತಪ್ಪನ ಮನ್ನಿಸಿ ಪೊರೆಯೋ ಎನ್ನನು|

ಹಸಿದು ಬಂದ ಬಕುತರ ಹಸಿವ ನೀಗಿಸಿ ನೋವುಂಡವರ ನೋವು ನೀಗುವೆ ನೀನು
ಸಖರಾಯಪುರವೆಂಬ ಪುಣ್ಯ ಮಣ್ಣಲಿ ಜನಿಸಿ ಜಗವ ಪೊರೆವ ಸದ್ಗುರುವೋ ನೀನು|

Wednesday, October 16, 2019

ಎದ್ದು ಬರುವನು ಗುರುವು - ರಚನೆ: ಶ್ರೀ. ಆನಂದರಾಮ್, ಗಾಯನ: ಶ್ರೀ.ಶಿವಾನಂದ್


ಬಂದೇನು ಬೃಂದಾವನಕೆ - ರಚನೆ: ಶ್ರೀ.ಆನಂದರಾಮ್, ಗಾಯನ: ಶ್ರೀ.ಶಿವಾನಂದ್


ಬಂಧಮುಕ್ತ ಮಾಡೋ ಎನ್ನನು ಮನದ ಮಲಿನ ಭಾವಗಳಿಂದ - ರಚನೆ: ಶ್ರೀ.ಆನಂದರಾಮ್

ಬಂಧಮುಕ್ತ ಮಾಡೋ ಎನ್ನನು ಮನದ ಮಲಿನ ಭಾವಗಳಿಂದ 
ಪರಿಶುದ್ಧ ಮಾಡೋ ಎನ್ನ ಹೃದಯವ ಸದಾ  ನಿನ್ನ ಸ್ಮರಣೆಯಿಂದ|

ಬೇಡಲೂ ಭಯವಾಗುತಿದೆ ಗುರುವೇ ಕಪಟ ತುಂಬಿದ ಮಾತಿನಿಂದ
ವಿಧ ವಿಧ  ವೇಷ ಧರಿಸೆ   ಭಕುತಿ  ಇಲ್ಲದ ಭಾವಾವೇಷದಿಂದ |

ಪರಿ ಪರಿಯ ಬೇಡಿಕೆಯ  ಮುಂದಿಡಲಾರೆ ಮುಕ್ತಗೊಳಿಸೆನ್ನ ಕರ್ಮದಿಂದ
ಬಿಡುಗಡೆಗೊಳಿಸೆನ್ನ ಮನವ ಗುರುವೇ  ಅನ್ಯರಾ ವಿಷಯದ ಆಸೆಯಿಂದ|

ಮಂತ್ರ ತಂತ್ರದ ಅರಿವಿಲ್ಲ ಎನಗೆ ದೂರ ಮಾಡು ಎನ್ನ ಮನವ ಶಂಕೆಯಿಂದ
ಕಟ್ಟು ಪಾಡುಗಳು  ಬೇಡವೆನಗೆ ನೀಡೋ ಮನಕೆ ಶಾಂತಿಯ ನಿನ್ನ ಸೇವೆಯಿಂದ|

ನಿನ್ನ ಪಾದಕಮಲದಡಿ ಎನ್ನ ಶಿರವಿಟ್ಟು ಬೇಡುವೆನು ಕುರುಡು ಬಕುತಿಯಿಂದ
ದೂರ ಮಾಡಬೇಡ ಎನ್ನನು ಗುರುವೇ ನಿನ್ನ ನಿಜ ಬಕುತರ  ಸಂಗದಿಂದ|

ಎತ್ತಿರೇ ಆರತಿ ನಮ್ಮ ಗುರುನಾಥಗೆ - ರಚನೆ: ಶ್ರೀ.ಆನಂದ ರಾಮ್, ಗಾಯನ: ಶ್ರೀ.ಶಿವಾನಂದ್


ಗುರು ಕೊಟ್ಟರೆ ಉಂಟು - ರಚನೆ: ಶ್ರೀ.ಆನಂದ ರಾಮ್, ಗಾಯನ: ಶ್ರೀ.ಶಿವಾನಂದ್


ನೀ ಕರುಣಿಸೆ ಇನ್ನೇನು ಬೇಕು ನನ್ನ ದೊರೆಯೇ - ರಚನೆ: ಶ್ರೀ. ಆನಂದರಾಮ್, ಗಾಯನ: ಶ್ರೀ.ಶಿವಾನಂದ್