ಒಟ್ಟು ನೋಟಗಳು

Sunday, April 12, 2020

ಸುಮ್ಮನಿರಲಾರೆ ನಾನು ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸುಮ್ಮನಿರಲಾರೆ ನಾನು ಗುರುವೇ ನಿನ್ನನು ನೆನೆಯದಲೇ
ಮೌನ ತಾಳಲಾರೆ ಪ್ರಭುವೇ ನಿನ್ನ ನಾಮವನ ಭಜಿಸದೆಲೆ|

ನಿತ್ಯ ಗಳಿಸುವ ಕೂಳಿಗಾಗಿ ನಿತ್ಯ ಬದುಕಿನ ಅಸರೆಗಾಗಿ  ನಿನ್ನ ಕೂಗುವೆನು
ನಿತ್ಯ  ಬಾಳ ಪಗಡೆಯಾಟದಲಿ ನಿನ್ನ ಬೇಡುತ ನಡೆಯ ನಡೆಸುವೆನು  |

ನಿನ್ನ ನೆನಪು ನೀಡುವ ಆ ಸಂತಸದ ಕ್ಷಣವ ಎಂದೂ ಮರೆಯಲಾರೆನೋ
ನೀನಿಲ್ಲದ ಗಳಿಗೆಯ ಊಹಿಸಿ ಉಸಿರು ನಿಂತ ಭಾವಾದಲಿ ಬೆವೆತು ಹೋದೆನೋ| 

ನಿನ್ನ ಹಿತನುಡಿಯ ಅಲಿಸದಲೇ ಈ ಮನವು ಮರುಗಿ ಕೂಗಿದೆಯೋ
ನಿನ್ನ ಚಾರಣ ಸೇವೆಯ ಬಯಸಿ ಈ ಜೀವವು ಬಲು ಪರಿತಪಿಸಿದೆಯೋ|

ನಿನ್ನ ವೇದಸಾರ ತುಂಬಿದ ಮಾತು ಕೇಳುವ ಯೋಗವು ಎನಗೆ ಬರಲಿಲ್ಲವೋ
ನಿನ್ನ ಕಂಡು ಪಾದಪಿಡಿದು ನಿನ್ನೊಲುಮೆ ಪಡೆಯುವ ಭಾಗ್ಯ ಪಡೆಯಲಿಲ್ಲವೋ|

ಸಖರಾಯದೀಶನೆ ಕನಿಕರಿಸಿ ಈ ಪಾಮರನ ಹರಸೋ  ದೊರೆಯೇ
ನಿನ್ನ  ಒಲುಮೆಯ ನುಡಿ ಕೇಳುವ ಭಾಗ್ಯ ಕನಸಲಿ ಬಂದು ಪೂರೈಸೋ ದೊರೆಯೇ|

Sunday, April 5, 2020

ಹಚ್ಚಿದೆವು ದೀಪವ ಕತ್ತಲೆಯ ದೂರ ತಳ್ಳಿ ಮನವ ಬೆಳಗಿಸೆಂದು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಹಚ್ಚಿದೆವು ದೀಪವ ಕತ್ತಲೆಯ ದೂರ ತಳ್ಳಿ ಮನವ ಬೆಳಗಿಸೆಂದು 
ತಮವ ಕಳೆದು ಜ್ಞಾನವ ನೀಡಿ ಅರೋಗ್ಯವ ಕರಿಣಿಸೆಂದು ಗುರುನಾಥ|

ಉಸಿರಾಡುವ ಗಾಳಿಯಲೂ ತುಂಬಿಹುದು ವಿಷವು ಏನೂ ದಾರಿ ತೋರದು
ಮನುಜ ಮನುಜನ ಒಡನಾಟವೂ ದುಸ್ತರವಾಗಿ ಗುರುವೇ ಬದುಕು ನರಕವಾಗಿಹುದು |

ಸದಾ ನಿನ್ನ ನೆನೆಯುತ ಸಂತಸ ಕಂಡ ಮನಗಳು ಅನುಮಾನದ ಗೂಡಾಗಿದೆ
ಉಸಿರು ತಾಕದಂತೆ ಕಂಡರೂ ಕಾಣದಂತೆ ಬದುಕು ನಡೆಸುತಿಹೆವು ಭಗವಂತ|

ಕಂಡೂ ಕೇಳರಿಯದ ಈ ಭಯವು ನೀ ಜನಿಸಿದ ಭುವಿಗೇಕೆ ಬಂತು ಗುರುವೇ
ಮದ್ದಿಲ್ಲದ ಈ ಪೀಡೆಯಿಂದ ನಿನ್ನ ಬಕುತರಿರುವ ಈ ಭುವಿಯ ಕಾಪಾಡೋ ದೊರೆಯೇ|

ತಪ್ಪು ನಡೆದಿಹುದು ಅರಿವಿದ್ದರೂ ಅನವರತ ನಿನ್ನ ನ0ಬಿಹೆವು ಪೊರೆಯೋ ಎಮ್ಮನು
ಬೇಡುವುದೊಂದೇ ನಮ್ಮ ಬದುಕು ಭವರೋಗ ವೈದ್ಯನು ನೀನು ಸಲಹೋ ಎಲ್ಲರನು|