ಒಟ್ಟು ನೋಟಗಳು

Sunday, April 5, 2020

ಹಚ್ಚಿದೆವು ದೀಪವ ಕತ್ತಲೆಯ ದೂರ ತಳ್ಳಿ ಮನವ ಬೆಳಗಿಸೆಂದು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಹಚ್ಚಿದೆವು ದೀಪವ ಕತ್ತಲೆಯ ದೂರ ತಳ್ಳಿ ಮನವ ಬೆಳಗಿಸೆಂದು 
ತಮವ ಕಳೆದು ಜ್ಞಾನವ ನೀಡಿ ಅರೋಗ್ಯವ ಕರಿಣಿಸೆಂದು ಗುರುನಾಥ|

ಉಸಿರಾಡುವ ಗಾಳಿಯಲೂ ತುಂಬಿಹುದು ವಿಷವು ಏನೂ ದಾರಿ ತೋರದು
ಮನುಜ ಮನುಜನ ಒಡನಾಟವೂ ದುಸ್ತರವಾಗಿ ಗುರುವೇ ಬದುಕು ನರಕವಾಗಿಹುದು |

ಸದಾ ನಿನ್ನ ನೆನೆಯುತ ಸಂತಸ ಕಂಡ ಮನಗಳು ಅನುಮಾನದ ಗೂಡಾಗಿದೆ
ಉಸಿರು ತಾಕದಂತೆ ಕಂಡರೂ ಕಾಣದಂತೆ ಬದುಕು ನಡೆಸುತಿಹೆವು ಭಗವಂತ|

ಕಂಡೂ ಕೇಳರಿಯದ ಈ ಭಯವು ನೀ ಜನಿಸಿದ ಭುವಿಗೇಕೆ ಬಂತು ಗುರುವೇ
ಮದ್ದಿಲ್ಲದ ಈ ಪೀಡೆಯಿಂದ ನಿನ್ನ ಬಕುತರಿರುವ ಈ ಭುವಿಯ ಕಾಪಾಡೋ ದೊರೆಯೇ|

ತಪ್ಪು ನಡೆದಿಹುದು ಅರಿವಿದ್ದರೂ ಅನವರತ ನಿನ್ನ ನ0ಬಿಹೆವು ಪೊರೆಯೋ ಎಮ್ಮನು
ಬೇಡುವುದೊಂದೇ ನಮ್ಮ ಬದುಕು ಭವರೋಗ ವೈದ್ಯನು ನೀನು ಸಲಹೋ ಎಲ್ಲರನು|

1 comment:

  1. Venkatachala avadootarige e shuba somavaarada saashtaanga pranaamagalu. Yellarigu nimma aashirvaada haagu rakshe doreyali. Sarve jano sukinobavantu Hari om tatsat.

    ReplyDelete