ಒಟ್ಟು ನೋಟಗಳು

Thursday, August 13, 2020

ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ ಗುರುವೇ ನಿನ್ನ ಒಲುಮೆಗೆ
ನಿನ್ನಿಷ್ಟದ ಪೂಜೆ ಎನಗೊಲಿದಿಲ್ಲವೋ ಮನ್ನಿಸೋ ಸಖರಾಯ ಪ್ರಭುವೇ|

ಇಷ್ಟ ದೇವನು ನೀನು ಎನ್ನ ಕಷ್ಟಗಳ ದೂರ ಮಾಡೆಂದು ಅರಿಕೆ ಸಲ್ಲಿಸಿಹೆ ನಾನು
ನಿನಗರಿವಿಲ್ಲವೇ ದೊರೆಯೇ ಏನು ನೀಡಲು ಸುಮ್ಮನಾಗುವೆನೆಂದು ನಾನು|

ದಾರಿ ಕಾಣದು ಎನಗೆ ಬರೀ ಅಂಧಕಾರವೇ ಮನದಿ ತುಂಬಿಹುದು ಗುರುವೇ
ಬೆಳಕು ಚೆಲ್ಲಿ ಎನ್ನ  ಮನವ ಅರಳಿಸಿ ನಿನ್ನ ಸ್ತುತಿಪ  ಭಾವ  ತುಂಬೋ ಪ್ರಭುವೇ|

ಬದುಕಿನ ದಾರಿಯದು ಕಲ್ಲೋ ಮುಳ್ಳೋ ಏನಗರಿವಿಲ್ಲವೋ ಗುರುವೇ
ನೀ ನಡೆಸುವ ದಾರಿಯ ಅಂದ ಚೆಂದದ ಗೊಡವೆ ಏನಗೇಕೋ  ಪ್ರಭುವೇ|

ಆಡುವ ಮಾತು ಸತ್ಯವೋ ಅಸತ್ಯವೋ ಎಲ್ಲಾ ನುಡಿಸುವುದು ನೀನಲ್ಲವೇ ಗುರುವೇ
ಇಷ್ಟವಾಗದ ಮಾತು ಪದಕೆ ನಿನ್ನ ಹುಸಿಮುನಿಸು ಉತ್ತರವಲ್ಲವೇ ನನ್ನ ದೊರೆಯೇ|

ಮಹಾದೇವನೇ ನೀನು ಪಾಮರನು ನಾನು  ಬೇಡುವುದೆಂತೋ ನಿನ್ನ ಗುರುವೇ
ಮನವ ಹರಿಬಿಟ್ಟು ಪದಗಳ ಮಾಲೆ ಮಾಡಿ ಅರುಹಿದರೆ ಒಲಿಯುವೆಯಾ ಪ್ರಭುವೇ|

1 comment:

  1. Venkatachala avadootarige nanna bhakti poorvaka namanagalu. Nimma aashirvaada sadaa yellara mele erali. Hari om tatsat.

    ReplyDelete