ಒಟ್ಟು ನೋಟಗಳು

Sunday, October 18, 2020

ಮನವು ಬಯಸಿದೆ ನಿತ್ಯ ಸುಖವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮನವು ಬಯಸಿದೆ ನಿತ್ಯ ಸುಖವು ನಿನ್ನ ಭಜಿಸದೆ ಅದೆಲ್ಲಿ ದೊರೆವುದು ಹೇಳು ಗುರುವೇ
ಮಿಥ್ಯಎಂಬ ಬ್ರಮೆಯೊಳು ಮನವು ಮಿಂದು ಲೌಕಿಕದ  ಕೂಪದೊಳು ನಿಂತೆನಲ್ಲವೇ|

ನೋವು ಬೇಡ ಹಸಿವು ಬೇಡ ಮಲಿನ ಮನವು ಸೌಖ್ಯ ಬಯಸಿದೆ
ಒಮ್ಮೆ ನಿನ್ನ ಸಂಗ ಬಯಸಿ ಬದುಕು ನಡೆವ ಹಾದಿ ದಿಕ್ಕ ಬದಲಿಸಲಾಗದೇ|

ಏನೋ ಬಯಸಿ ವೇಷಧರಿಸಿ  ಮನದ ತುಂಬ ಆಸೆ ಇರಿಸಿ ನಿನ್ನ ಕಾಣ ಬಂದೆನೋ
ಅಂತರಾತ್ಮ  ಶುದ್ಧವಿಲ್ಲ ಶಬ್ದದಲ್ಲೂ ಬಕುತಿಯಿಲ್ಲ ಇನ್ನು ನಿನ್ನ ಹೇಗೆ ಪಡೆವೆನೋ|

ಮನದ ತುಂಬ ಕಾಮ ಹೊತ್ತು ತೋರಿಕೆಯ ಭಕುತಿ ಬೀರಿ ನಿನ್ನ ಮುಂದೆ ನಿಂತೆನೋ
ನಾಲ್ಕು ಸಾಲು ಪದವ ಗೀಚಿ ಮಳ್ಳ ಮನದ ಆಸೆ ಅದುಮಿ ನಿನಗೆ ಶರಣು ಎಂದೆನೋ|

ನಿತ್ಯ ಬದುಕಿನಲ್ಲಿ ಸ್ವಾರ್ಥದ ಬೆನ್ನೇರಿ  ನಿನ್ನ ಸೇವೆಗೈವ ವೇಷದರಿಸಿಹೆನೋ
ಪಾಪ ಪುಣ್ಯಗಳ ಅರಿವಿದ್ದರೂ ಬಲು ಹುಂಬತನದಿ ಮೆರೆಯುತಿಹೆನೋ|

ಇನ್ಯಾವ ರೀತಿಯಲಿ ಭಜಿಸಿ ಪೂಜಿಸಲಿ ನಿನ್ನ ಎನ್ನ ಮನ್ನಿಸಿ ಕರುಣಿಸುವ ಮನ ಬಂದಿಲ್ಲವೇ
ಸಖರಾಯಪುರದ ಸರದಾರ ನೀನು ಒಮ್ಮೆ ತುಂಬು ಮನದಿ ಎನ್ನ  ಹರಸಬಾರದೇ|

1 comment:

  1. Sakaraayapurada venkatachala avadootarige nanna bhakti poorvaka namanagalu. Hari om tatsat.

    ReplyDelete