ಒಟ್ಟು ನೋಟಗಳು

Monday, March 8, 2021

ಅನುಮಾನದ ಹುತ್ತದೊಳು ಮನವ ನಿಲ್ಲಿಸಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಅನುಮಾನದ ಹುತ್ತದೊಳು ಮನವ ನಿಲ್ಲಿಸಿ ನಿನ್ನ ಬಜಿಪನೆಂಬ ನಾಟಕವಾಡುತಿಹೆನೋ
ಇರುಳು ಮೊಬ್ಬಿನಲಿ ದಿನದ ಕುಕರ್ಮ ಕಾಡಿದಾಗ ಬೊಬ್ಬಿಡುತ ನಿನ್ನ ಬೇಡಿಹೆನೋ |

ಚಂದವಲ್ಲದ ಬಣ್ಣದ ಬದುಕಿನ ಬಲೆಯ ನೇಯುತ ನಿನ್ನ ಸೇವಿಪನಂತೆ ಹೊತ್ತು ಕಳೆಯುತಿಹೆನೋ
ಹೇಳುವುದೊಂದು ಮಾಡುವುದೆಂಬಂತೆ ಮುಖವಾಡದ ಮೊರೆಹೊಕ್ಕಿಹೆನೋ|

ನಿನ್ನ ಚರಿತ ಪಠಿಸುತ ನಿನ್ನ ಕೀರುತಿ ಹೊಗುಳುತ ಮಳ್ಳನಂತೆ ನಿನ್ನೆದುರು ನಿಂತಿಹೆನೋ
ಸುಮ್ಮನೆ ಕರುಣಿಸೆಂದೆನುತ ಕಣ್ಣಮುಚ್ಚಿ ಮನವೆಲ್ಲೋ ನೆಟ್ಟು ಬೇಡುತಿಹೆನೋ|

ನನ್ನದಲ್ಲದ ದುಡಿಮೆಯ ಫಲದಿ ನಿನ್ನ ಸೇವೆಗೈವೆನೆನುತ ಬೀಗುತಿಹೆನೋ
ಎಲ್ಲಾ ಅವನಿತ್ತುದಾದರೂ ನನ್ನದೆಂಬ ಹಂಮ್ಮಿನಲಿ ಎದೆ ಎತ್ತಿ ನುಡಿಯುತಿಹೆನೋ|

ಇದು ಬದುಕಲ್ಲ ಇದು ನಿಜವಲ್ಲವೆನಿಸಿದರೂ ಮೂಡ ಮನಕೆ ಸೋತಿಹೆನೋ
ಪ್ರಶ್ನೆಗಳ ಹೊರೆಹೊತ್ತು  ದೈನ್ಯದಲಿ ಮೊರೆಯಿಡುತ ಸಖರಾಯಪುರದ ನಿನ್ನಂಗಳದಿ  ನಿಂತೆನೋ|

1 comment:

  1. Parama poojya gurugalaada venkatachala Avara paadagalige nanna saashtaanga pranaamagalu . Yellaranu Harasi asheervadisi Kaapadi Guruvarya. Sarve jano sukinobavantu.

    ReplyDelete