ಒಟ್ಟು ನೋಟಗಳು

Wednesday, May 12, 2021

ಭಯ ಬೇಡವೋ ಗುರುವೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಭಯ ಬೇಡವೋ ಗುರುವೇ ಬೇಡುವೆನು  ನಿನ್ನಭಯ ನೀಡಿ ಪೊರೆಯೋ ದೊರೆಯೇ
ಮನದ ಮೂಲೆಯಲಿ ಮಡುಗಟ್ಟಿದ ಮನದ ನೋವಿಗೆ ಕೊನೆ ನೀಡೋ ಪ್ರಭುವೇ|

ಆತಂಕದ ಗಳಿಗೆಯ ಸೃಷ್ಠಿಸಿ ಬಕುತಿಯಲಿ ಬಜಿಸುವುದೆಂತೋ ನಾ ಕಾಣೆನೋ
ನಿನ್ನ ನೆನೆಯದಿರೆ ಬದುಕಿಲ್ಲವೆಂಬುದು ನಾ ಕಂಡ ಸತ್ಯ ನನ್ನ ದೊರೆಯೇ|

ಜೀವದಾ ಭಯವದು ತೋರಿತೆನಗೆ ಎನ್ನ ಅಂತರಾಳದ ಭಾವದಾ ಕೊರತೆಯನು
ಉಳುವಿಗಾಗಿ ಹಾತೊರೆದು ಬೇಡುವುದು ಬರೀ ಮಾತಿನಲಿ ಭಕುತಿ ತೋರುತಿಹೆನೋ|

ಎಲ್ಲಾ ನಿನ್ನ ಪಾದಕರ್ಪಿಸಿ ಮೌನದಲಿ ಬೇಡಿದೊಡೆ ಭಯ ನಿಲ್ಲಲಿಲ್ಲಾ ಗುರುವೇ
ಅದು ಎನ್ನ ಹುಸಿ ಬಕುತಿಯ ಪರಿಯು ಎನ್ನ ಮನ ತಿಳಿ ಹೇಳಿತೆನಗೆ ಪ್ರಭುವೇ|

ಎಲ್ಲೆಡೆ ನೀನಿರುವೆ ಎಮ್ಮ ಕಾಯುವೆ ಎಂಬ ಹಮ್ಮಿನಲಿ  ಮೈ ಮರೆತೆ ಗುರುವೇ
ಸಖರಾಯಪುರವೆಂಬ ದಿವ್ಯ ಭೂಮಿಯ ನೆನೆದು ನಿನ್ನ ಭಜಿಸುವೆನು ಪ್ರಭುವೇ|

No comments:

Post a Comment