ಒಟ್ಟು ನೋಟಗಳು

Monday, June 14, 2021

ಬರಿ ಮಾತಲಿ ಬೇಡುತ ಗುರುವೆಂದೊಡೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬರಿ ಮಾತಲಿ ಬೇಡುತ ಗುರುವೆಂದೊಡೆ ಅವ ಸ್ವೀಕರಿಸುವೆನೆ ಎನ್ನಾ
ಸರಿ ದಾರಿಯಲಿ ಸಾಗದೆ ಕೂಗಿದೊಡೆ ಬಂದು ಹರಸುವೆನೇ ಎನ್ನಾ|

ಮುಖವಾಡವ ಕಳಚದೆ ಬರೀ ಪದಗಳಲೇ ಬೇಡಿದೊಡೇ  ಒಪ್ಪುವನೇ ನನ್ನ
ಹುಚ್ಚು ತನವ ಭಕುತಿ ಎನುತ ನನ್ನಿಷ್ಟದಂತೆ ಕೂಗಿದೊಡೆ ಹರಸುವೆನೇ ಎನ್ನ|

ಅವನಿತ್ತುದ ಒಪ್ಪದೇ ಇನ್ನೇನನೋ ಬೇಡುವ ಆಸೆ ಹೊತ್ತವನ ಹತ್ತಿರ ಸೇರಿಸುವನೆ ಎನ್ನ
ಕರುಬು ತನದಿ ಎಲ್ಲಾ ನನ್ನದೆನುವವನ ಬೇಡಿಕೆಯ ಒಪ್ಪಿ  ಕರುಣಿಸುವನೇ ನನ್ನ|

ಪರರ ನಡೆನುಡಿಯ ಎತ್ತಿ ಆಡುವ ಈ ನಾಲಗೆಯ ಪದವ ಕೇಳಿ ದೂರ ತಳ್ಳನೇ ಎನ್ನ
ಅಲ್ಪ ಮತಿಯು ನಾನಾದರೂ ಅನ್ಯರ  ಡೊಂಕ ಹುಡುಕುವವನ ಕರುಣಿಸುವೆನೆ ನನ್ನ|

ನಾನೊಬ್ಬ ಬಕುತನೆನುತ ನಿಜ ಬಕುತರ ಹಳಿವಗೆ ದಾರಿ ತೊರೆಂದರೆ ಒಪ್ಪುವನೇ ಗುರುನಾಥ
ಸಖರಾಯಪುರದ ಹಾದಿ ಸವಿಸಿ ನಿನ್ನ ಪಾದದಡಿ ಶಿರವಿಟ್ಟು ಬೇಡುವೆನು ಕರುಣಿಸೋ ಗುರುನಾಥ|

No comments:

Post a Comment