ಒಟ್ಟು ನೋಟಗಳು

Tuesday, May 10, 2022

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ ಆನಂದದಿ ನಿಂತೆನೋ
ಎಂದೂ ಕಾಣದ ಅನುಭೂತಿ ಪಡೆದು ಮೈ ಮರೆತು ಭಜಿಸಿಹೆನೋ|

ಹರನೆಲ್ಲಿ ಹರನೆಲ್ಲಿ ಎನುತ ಮುದದಿ ಪಾಡುತ ಸಖರಾಯಧೀಶನ ಕಂಡೆನೋ
ಮಹದೇವ ತಾನಾಗಿ ಬಕುತರಾ ಪೊರೆಯುತ ಇದ್ದರೂ ಇಲ್ಲದಂತಿಹನೋ|

ಶಿವನೇ ತಾನಾಗಿ ಲೀಲೆಗಳ ತೋರುತ ಎಲ್ಲರೊಳಗೊಂದಾಗಿ ಬೆರೆತಿಹನೋ
ಪಂಚ ಭೂತಗಳೊಡೆಯ ತಾನಾದರೂ ಕಿಂಚಿತ್ತೂ ಗರ್ವ ತೋರನಿವನೋ|

ಎಲ್ಲಾ ಅವನ ಲೀಲೆ ಎನುತ ಎಲ್ಲಾ ಕಷ್ಟ ದೂರಮಾಡುತ ಮೌನದರಿಸಿಹನೋ 
ಎಲ್ಲಾ ಜೀವಿಗಳ ಒಡನಾಟದಿ ಅರಿವಿಲ್ಲದೇ ಎಲ್ಲರಲೂ ಅರಿವು ಮೂಡಿಸಿಹನೋ|

ಕರ್ಮ ಬಂಧನದ ಸಂಕೋಲೆ ಕಳಚುತ ನಿತ್ಯ ಸತ್ಯ ಸಾರಿ ಹೇಳಿಹನೋ
ಗುರುನಾಥ ಎಂದೊಡೆ ಅನಾಥ ಭಾವ ಸರಿಸಿ ನಿಮ್ಮೊಡನೆ ಇರುವೆನೆಂದನೋ|

No comments:

Post a Comment