ಒಟ್ಟು ನೋಟಗಳು

Wednesday, December 28, 2022

ಸ್ತಿರವಲ್ಲದ ಮನವಹೊತ್ತು - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಸ್ತಿರವಲ್ಲದ ಮನವಹೊತ್ತು ಬಿದ್ದೆದ್ದು ಓಡುವ ಬದುಕ ನಡೆಸಿ ಸೋತೆನೋ
ಸಂಕುಚಿತ ಭಾವದೊಳು ನಿನ್ನ ಬಜಿಸುವೆನೆನುತ ಬೀಗಿ ಏನೂ ಪಡೆಯದಾದೆನೋ.

ಗುರು ಕೊಡುವನೆಂದು ಹಗುರ ಭಾವದಿ ಮೈ ಮರೆತು ಮೆರೆದೆನೋ
ಅರಿವು ಮೂಡುವ ಮೊದಲೇ ಅರಿತವನಂತೆ ಬೀಗುತ ಎಡವಿ ಬಿದ್ದೆನೋ.

ಚಪಲ ತುಂಬಿದ ಮನ ಹೊತ್ತು ನಿನ್ನ ಭಜಿಸುವ ವೇಷ ಧರಿಸಿ ನಿಂತಿಹೆನೋ
ಆಸೆಗಳ ಮೂಟೆ ಹೊತ್ತು ಏನೂ ಅರಿಯದ ಭಾವ ತೋರಿ ಸೋತೆನೋ.

ನಾನೇ ನಿನ್ನ ಬಕುತನೆನುತ ಬಿಂಕತೋರಿ ನಿಜ ಬಕುತರ ಅರಿಯದಾದೆನೋ
ಶುದ್ಧ ಭಾವದ ಕೊರತೆ ನೀಗದೆ ಚಂಚಲ ಮನದ ಸೆಳೆತ ಮೆಟ್ಟಿ ನಿಲ್ಲದಾದೆನೋ.

ನಿನ್ನ ಕೃಪೆಗೆ ಹಾತೊರೆದು ನಿನ್ನ ಪದತಲದಿ ಶಿರವಿಟ್ಟು ಬೇಡುವ ಪರಿ ತಿಳಿಯದಾದೆನೋ
ಸಖರಾಯಪುರದ ಸರದಾರ ನೀನು ಸರಿ ತಪ್ಪು ತೋರಿ ಹರಸಬಾರದೇನೋ.

No comments:

Post a Comment