ಒಟ್ಟು ನೋಟಗಳು

Tuesday, January 2, 2024

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ - ಕೃಪೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ ಕರುಣೆ ಬಾರದೇ ಇನ್ನೂ
ಮೌನ ಧರಿಸಿ ಬೇಡುವ ಪರಿ ಅರಿತಿಲ್ಲ ನಾನು ಮಲಿನ ಭಾವ ಕಳೆಚಿಲ್ಲ ಇನ್ನೂ.

ಯಾರೋ ಭಜಿಸಿದರೆಂದು ನಿನ್ನ ಬೇಡುವರೆಂದು ನಾನೂ ಬೇಡ ಹೊರಟೆನೋ
ಭಾವ ಅರಿಯದೇ ಭಕ್ತಿ ಬೆರಸದೇ ತೋರಿಕೆಯ ಭಕುತಿ ತೋರುತಿಹೆನೋ.

ಬೇಡಿದೊಡೆ ಕೊಡಲಿಲ್ಲ ನೀನೆಂದು ಭಕುತಿ ಬದಲಾಗಿ ಸುಮ್ಮನೆ ಕಾಲ ಕಳೆದೆನೋ
ಕರ್ಮ ಕಳೆಯದೆ ದಾರಿ ತೋರದು ಅರಿವಿದ್ದರೂ ಮೂರ್ಕನಂತೆ ಕೂಗುತಿಹೆನೋ.

ಎಲ್ಲೆಲ್ಲೋ ಹುಡುಕುತಿಹ ಈ ಮನಕೆ ನಿನ್ನ ಇರುವಿಕೆಯ ಅರಿವು ಬೇಕಾಗಿದೆ
ಬಾವ ಶುದ್ದಿ ಇಲ್ಲದ ಈ ಮನಕೆ ನಿನ್ನ ದರುಶನ ಬಾಗ್ಯ ಸಿಗಬೇಕಾಗಿದೆ ಗುರುವೇ.

ಸಾಕೆನ್ನುವ ಮೊದಲೇ ಸಾರ್ಥಕಗೊಳಿಸು ಬದುಕನ್ನು ಬೇಡುವೆನು ಪ್ರಭವೇ
ನಿರರ್ಥಕ ಬದುಕು ಸಾಕು ಮಾಡು ನಿಜವ ತಿಳಿಸಿ ಹರಸೆನ್ನ  ಸಖರಾಯಪ್ರಭುವೇ.

No comments:

Post a Comment