ಒಟ್ಟು ನೋಟಗಳು

Tuesday, July 4, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 34
ಗುರುವಿನ ಬಲದ ಗುರುಬಲ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಗುರುಶಿಷ್ಯರ ಸಂಬಂಧವೆಂದರೆ ಒಂದು ನಮಸ್ಕಾರ ಮಾಡಿ, ಬೇಕಾದ್ದನ್ನು ಪಡೆದು ಬಿಟ್ಟುಬಿಡುವುದಲ್ಲ. ಅದು ನಿರಂತರ... ಅವಿನಾಭಾವದ ಸಂಬಂಧವೇ ಅದು ಯಾವ ಜನ್ಮದಿಂದ ಅಂಟಿಕೊಂಡು ಬಂದಿದೆ ಎಂಬುದು ಈ ಚಕ್ಷುವಿಗೆ ಅರ್ಥವಾಗದಿದ್ದರೂ ಅದು ಹೇಗೋ ಬೆಸೆದುಕೊಂಡು ಅಂತರ ಸೆಲೆಯಾಗಿ ನಿರಂತರ ಹರಿದು ಬರುತ್ತಿರುತ್ತದೆ. ಆಗ ಭಕ್ತರ ಪರ್ಸನಲ್ ಎಂಬ ಯಾವ ವ್ಹಿಚಾರವೂ ಗುರುವಿನ ಬಳಿ ಉಳಿಯದು. ನಾವು ತಿಳಿಸದಿದ್ದರೂ ಗುರುವೇ ತಿಳಿದು ನಾವು ಮಾಡುತ್ತಿರುವ ತಪ್ಪನ್ನು ನವಿರಾಗಿ ತಿದ್ದಿ, ಮುಂದೆ ತಪ್ಪುಗಳನ್ನು ಆಗದಂತೆ ಕರುಣಿಸುವುದೇ ಗುರುಕರುಣೆ. ಅಂತಹ ಗುರುಕರುಣೆಯ ವಿಶೇಷವೇ ಇಂದಿನ ಸತ್ಸಂಗದ ವಿಚಾರವಾಗಿದೆ. 

ನಾವು ಜಾತಕ, ಪಂಚಾಂಗ, ಗುರುಬಲಗಳನ್ನು ಲೆಕ್ಕಾಚಾರ ಮಾಡಿಸಿ ಮುಹೂರ್ತಗಳನ್ನಿಡುತ್ತೇವೆ. ಎಲ್ಲಕ್ಕೂ ಗುರುಬಲ ಬರಬೇಕು ಎನ್ನುತ್ತೇವೆ. ನಿಜವಾದ ಗುರುಬಲವೆಂದರೆ, ಸದ್ಗುರುವಿನ ಬಲವೇ ಅಸಲಿ ಗುರುಬಲ. ಅಂತಹ ಸದ್ಗುರು ಯಾವ ಪಂಚಾಂಗವನ್ನೂ ನೋಡರು. ಜಾತಕವನ್ನೂ ಪರಾಮರ್ಶಿಸರು. ಅವರ ಬಾಯಿಯಿಂದ ಬಂದ ನುಡಿ, ಸಮಯವೇ ಸುಮುಹೂರ್ತ. ಗಾಯಿತ್ರಿಯವರ ಅನುಭವವೀಗ ನಮ್ಮ ಸತ್ಸಂಗಕ್ಕೆ ಒದಗಿದೆ. 

"ನಮ್ಮ ಮಗುವಿನ ಚೌಲ ಕರ್ಮದ ಸಮಯವನ್ನು ಪುರೋಹಿತರು ಈ ಮೊದಲೇ ನಿರ್ಧರಿಸಿದ್ದರು. ಆದರೆ ಅದು ಚೌಲ ಕರ್ಮಕ್ಕೆ ಪ್ರಶಸ್ತವಾಗಿರಲಿಲ್ಲ. ದ್ವಾದಶಿ ಚೌಲ ಮಾಡಬಾರದಂತೆ. ಇತರ ಪೂಜಾದಿಗಳು, ಉದಕ ಶಾಂತಿ ಮುಂತಾದ ಕಾರ್ಯಗಳನ್ನು ನಡೆಸಿಸಿ, ನಿಮ್ಮ ತಾಯಿಗೊಂದು ಶಾಂತಿ ಮಾಡಿಸಿಬಿಡು ಎಂದು ಹೇಳಿ ಆ ಶಾಂತಿಯನ್ನು ಅಂದೇ ಮಾಡಿಸಿದರು. ಬೆಳಗಿನ 8:30 ಕ್ಕೆ ಇದ್ದ ಮುಹೂರ್ತವಂತೂ ತಪ್ಪಿತ್ತು. ಮಧ್ಯಾನ್ಹದ ಉತ್ತಮ ಮುಹೂರ್ತದಲ್ಲಿ ಗುರುನಾಥರು ಚೌಲ ಕರ್ಮವನ್ನು ನೆರವೇರಿಸಿದರು. ಯಾವ ಜನ್ಮದಲ್ಲಿ ಗುರುನಾಥರಿಗೆ ಒಂದು ಲೋಟ ನೀರನ್ನು ಕೊಟ್ಟಿದ್ದೆವೋ, ಈಗ ಹೀಗೆ ನಮ್ಮ ಎಲ್ಲ ವಿಚಾರಗಳಲ್ಲಿ ಯಾವುದೇ ತಪ್ಪುಗಳಾಗದಂತೆ ತಮ್ಮ ಮನೆಯ ಕೆಲಸಕ್ಕಿಂತ ಅಧಿಕವಾಗಿ ಆಸ್ಥೆ ವಹಿಸಿ ನಮ್ಮನ್ನು ಕಾಪಾಡುತ್ತಿದ್ದಾರೆ". 

ಒಮ್ಮೆ ಗುರುನಾಥರ ಬಳಿ ಹೋಗಿದ್ದಾಗ ಆ ವರ್ಷ ನಮ್ಮವರ ತೋಟದಿಂದ ಬಂದ ಅಡಿಕೆ ಮೂಟೆಗಳು ಇಷ್ಟೇ ಆಗಿವೆ ಎಂದು ಕರಾರುವಕ್ಕಾಗಿ ಗುರುನಾಥರು ನುಡಿದರಂತೆ. "ಬೇಕಾದರೆ ಹೋಗಿ ಎಣಿಸಿ ನೋಡಿ. ಇಷ್ಟೇ ಮೂಟೆಗಳಿವೆ. ನನಗ್ಯಾವ ಸ್ಕ್ಯಾನಿಂಗ್ ಬೇಡ" ಎಂದು ತಿಳಿಸಿದಾಗ ಆ ಭಕ್ತರು ಬಂದು ಎಣಿಸಿ ನೋಡಿದರೆ ಅವರು ಹೇಳಿದಷ್ಟೇ ಮೂಟೆಗಳಿದ್ದವಂತೆ. 

ಗುರುನಾಥರ ಮಹಾ ನಿರ್ವಾಣವಾದ ಮೇಲೂ ಈ ಭಕ್ತರ ಮಗನ ಉಪನಯನ ಸಂದರ್ಭದಲ್ಲೂ ನಡೆದ ಒಂದು ವಿಶೇಷವೆಂದರೆ ಈ ಭಕ್ತರು ತಮ್ಮ ಮಗನ ಉಪನಯನ ನಡೆಸುತ್ತಿರುವಾಗ, ಗುರುನಾಥರ ಸ್ಮರಣೆ ಮಾಡದೇ ಇರಲು ಸಾಧ್ಯವೇ? ಇದೇ ಮಗುವಿನ ಚೌಲ ಕರ್ಮ ನಡೆಸಿದ್ದು ಗುರುನಾಥರೇ ಎಂಬ ನೆನಪೂ ಬರದಿರುತ್ತದೆಯೇ? ಅಂದು ಉಪನಯನದ ಸಮಯದಲ್ಲಿ ವೃದ್ಧರಿಬ್ಬರು ಬಂದರು. ಊಟಕ್ಕೆ ಆಹ್ವಾನಿಸಿದರೆ ಬೇಡ, ಸಂಭಾವನೆ ಕೊಟ್ಟುಬಿಡಿ ಸಾಕು ಎಂದು ಅವರಂದಾಗ ಸಂಭಾವನೆ ಫಲ ತಾಂಬೂಲಗಳನ್ನಿವರು ನೀಡಿದರಂತೆ. ಇದು ವಟುವಿನ ತಂದೆ ಹಾಗೂ ತಾಯಿಗಳು ಪುರೋಹಿತರಿಗೆ ಮಾತ್ರಾ ತಿಳಿದ ಸಂಗತಿ. ಸಂಭಾವನೆ ಕೊಟ್ಟ ನಂತರ ಆ ಮರುಕ್ಷಣದಲ್ಲಿ ಆ ಇಬ್ಬರೂ ಅದೆಲ್ಲಿ ಹೋದರೋ ತಿಳಿಯಲಿಲ್ಲ. ಭಕ್ತರ ಮನಸ್ಸಿಗಂತೂ ನಾವು ನೆನೆಸಿದಂತೆ ಗುರುನಾಥರೇ ಬಂದು ವಟುವಿಗೆ ಆಶೀರ್ವದಿಸಿದ್ದಾರೆಂಬ ನೆಮ್ಮದಿ. ಗುರುವಿಗೆ ಅಸಾಧ್ಯವಾದದ್ದು ಏನಿದೆ? ಯದ್ಬಾವಂ ತದ್ಭವತಿ ನಮಸ್ಕಾರ ಮಾಡಿದಾಗ "ನಾನು ಉಡುಪಿಯಿಂದ ಬಂದಿದ್ದೀನಿ" ಎಂದರಂತೆ. ಇದು ಇತ್ತೀಚೆಗೆ ಎರಡು ವರ್ಷಗಳ ಕೆಳಗೆ ಆದ ಅನುಭವವಂತೆ. 

ಮತ್ತೊಬ್ಬ ಭಕ್ತೆ ತನ್ನ ಮಗನ ಮದುವೆಯಾಗಿ ನಾಲ್ಕೈದು ವರ್ಷವಾದರೂ ಅವರಿಗೆ ಮಕ್ಕಳಾಗದೇ ಇದ್ದಾಗ, ಎಲ್ಲ ಡಾಕ್ಟರ್ ಬಳಿ ಪರೀಕ್ಷಿಸಿ, ಇವರಿಗೆ ಮಕ್ಕಳಾಗುವುದಿಲ್ಲವೆಂದು ತಿಳಿದಾಗ, ಗುರುನಾಥರ ಬಳಿ ಬಂದ ಆ ಸಾಧ್ವಿ ತಮ್ಮ ನೋವನ್ನು ತೋಡಿಕೊಂಡರಂತೆ. ಆ ಕೂಡಲೇ ಗುರುನಾಥರು "ಚಿಂತೆ ಮಾಡಬೇಡಮ್ಮ ಮಗುವಾಗುತ್ತೆ.. ನಿನ್ನ ಸೊಸೆಗೆ ಕೇಳಿ ನೋಡು ಅವಳ ಕಾಲು ತುರಿಸ್ತಾ ಇದೆ. ಕೊಬ್ಬರಿ ತಿನ್ನಬೇಕೆಂಬ ಆಸೆ ಆಗ್ತಿದೆ.. ಚಿಂತೆ ಮಾಡಬೇಡ ಮಗುವಾಗುತ್ತೆ" ಎಂದು ಆಶೀರ್ವದಿಸಿದರಂತೆ. 

ಫೋನು ಮಾಡಿ ಕೇಳಿದಾಗ ಗುರುನಾಥರು ತಿಳಿಸಿದ್ದು ನಿಜವಾಗಿತ್ತು. ಸೊಸೆ ಇದನ್ನು ಹೌದೆಂದು ಉತ್ತರಿಸಿದ್ದರು. 

ಕೆಲ ದಿನಗಳ ಹಿಂದೆ ಡಾಕ್ಟರ್ ಬಳಿ ಹೋಗಿದ್ದ ದಂಪತಿಗಳಿಗೆ ಅಂತಹ ಯಾವ ಸೂಚನೆ ಇಲ್ಲ ಎಂಬ ಉತ್ತರ ಬಂದಿತ್ತು. ತದನಂತರ ಕೆಲ ದಿನಗಳಾದ ಮೇಲೆ ಹೋದಾಗ ಗರ್ಭಿಣಿಯಾಗಿರುವುದನ್ನು ಡಾಕ್ಟರು ದೃಢಪಡಿಸಿದರಂತೆ. ಹೀಗೆ ವೈದ್ಯರ ವೈದ್ಯರಾಗಿ ಗುರುನಾಥರು ಕಂಡು ಬಂದಿದ್ದರು. 

ಗುರುನಾಥ ಪ್ರಿಯ ನಿತ್ಯ ಸತ್ಸಂಗ ಪ್ರೇಮಿಗಳೇ, ಸತ್ಸಂಗದಲ್ಲಿ ಗುರುಕಥಾಮೃತ ನಿರಂತರ ಸಾಗುತ್ತಿದೆ. ನಾಳೆಯೂ ನಮ್ಮೊಂದಿಗೆ ಇರಿ... ಬರಲೇ... ಸಹಸ್ರಾರು ಭಕ್ತರು - ಸಹಸ್ರಾರು ಕೃಪೆಗಳು, ಸದ್ ವಿಚಾರಗಳು ನಿರಂತರ ಸಾಗಲಿ ಗುರುಕಥಾಮೃತ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥
ಗುರುನಾಥ ಗಾನಾಮೃತ 
ನನ್ನದೇನಿಹುದಯ್ಯ ಗುರುನಾಥಾ
ರಚನೆ: ಅಂಬಾಸುತ 


ನನ್ನದೇನಿಹುದಯ್ಯ ಗುರುನಾಥಾ
ನಿನ್ನದಹುದಿಹುದೆಲ್ಲಾ ಗುರುನಾಥಾ ||
ತನುಮನಧನವೆಲ್ಲಾ ನೀ ಕೊಟ್ಟ ಭಿಕ್ಷೆಯೋ
ತಣ್ಣಗೆ ಎನ್ನನಿರಿಸಿರುವುದೇ ನಿನ್ನ ರಕ್ಷೆಯೋ ||

ತಂದೆತಾಯಿ ಬಂಧು ಬಳಗಾ ಗುರುನಾಥಾ
ತೋರುತಿಹ ಜಗವೆಲ್ಲಾ ಗುರುನಾಥಾ 
ಧಾತಾ ವಿಧಾತಾ ನೀನೇ ಗುರುನಾಥಾ
ಅನಾಥ ನಾಥನೀ ಗುರುನಾಥಾ||

ರವಿಶಶಿ ಜಲ ವಾಯು ಗುರುನಾಥಾ
ರಾಮ ಕೃಷ್ಣ ಗೋವಿಂದ ಗುರುನಾಥಾ
ಪುರಹರ ಪರಮೇಶ್ವರ ಗುರುನಾಥಾ
ಜಗದಂಬೆಯಾ ರೂಪ ಗುರುನಾಥಾ ||

ವೇದಶಾಸ್ತ್ರ ಪುರಾಣದೊಳೂ ಗುರುನಾಥಾ
ವೀಣಾ ವೇಣು ನಾದದೊಳೂ ಗುರುನಾಥಾ
ಅನ್ನ ನೀರು ವಸ್ತ್ರವೂ ಗುರುನಾಥಾ
ಚರಾಚರ ಪರಾತ್ಪರ ಗುರುನಾಥಾ ||

ಸರ್ವಸ್ವ ಸಂಪೂರ್ಣ ಗುರುನಾಥಾ
ನಿನ್ನಂತಹವರಿನ್ಯಾರೋ ಗುರುನಾಥಾ
ಸಖರಾಯಪುರವಾಸಿ ಗುರುನಾಥಾ
ಅಂಬಾಸುತನ ಪಿತ ಗುರುನಾಥಾ ||

Monday, July 3, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಜ್ಞಾನಂ ಪ್ರಾರ್ಥಯಮಾಣಾನಾಂ 
ಭಕ್ತಾನಾಂ ಮಾರ್ಗದರ್ಶಕಃ |
ಲೋಕೇ ಮಮಾತ್ಮಬಂಧುಂ 
ತಂ ಭಜೇಹಂ ಮಾರ್ಗಬಂಧುಮ್ ||

ಈ ಪ್ರಪಂಚದಲ್ಲಿ ಜ್ಞಾನವನ್ನು ಪಡೆಯಲು ಭಕ್ತರಿಗೆ ಮಾರ್ಗದರ್ಶನ ಮಾಡುತ್ತಿರುವ ನನ್ನಾತ್ಮಬಂಧುವೇ.,.ಸದ್ಗುರುವೇ..ನಮಗೆ ಮಾರ್ಗಬಂಧುವಾಗಿ ದಾರಿ ತೋರುತ್ತಿರುವ ನಿಮಗೆ ನಮನಗಳು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
Sri Sadguru Mahime

Author: Charana Dasa

Translator: Shri.Ganesh Prasad

Chapter 88 : The pillow

A Guru is not just for spiritual cause, he can be the guiding light in this material world as well, solace to those who have come to him after suffering hardships in life.

Once Gurunatha was sitting in front of his house, a crowd had gathered as usual. One person in his late forties walked in, offered his respects to Gurunatha and sat down. As was his practice, Gurunatha asked him “What can I do for you”.

He started, “Sir, my vision gets blurred all of a sudden, for the past 5-6 months I have seen many doctors, they tell me I don’t have any problems”. I consulted astrologers, performed pujas, homa yet no results. Someone told me about you. As a last attempt, l have come to seek a remedy from you.”

Gurunatha asked him “What’s the use of coming to test me now? If you have faith in me I shall give you medicine”. The person replied that he had faith in Gurunatha and wants the medicine walked backwards and stood at a distance, when asked the reason for such an action, he said he has not showed his back to any of the seers. Gurunatha gave a pillow to a person standing next to him and asked the person to accompany him to the peepal tree nearby. He also said, “As soon as you reach the peepal tree, five dry leaves would fall, carefully collect them on the pillow and come back, while doing so take special care not to let the pillow fall off to the ground”.

The person did as advised and came back with dry leaves within minutes. Gurunatha told him he should keep those leaves below his head while sleeping and his ailment would be gone.

The person asked Gurunatha to explain more about the cause of the problem. While replying to that, Gurunatha asked him if he gets knee pain sometimes. The person said yes.

Gurunatha told him, “See you had peculiar problem where in on some occasions the impure blood was getting into your eyes instead of pure blood, when the impure blood entered eyes your vision used to get blurred, when it entered your knees you would experience pain in the knees.

The person thanked Gurunatha profusely, offered his respects and left the place. As Gurunatha had said his eye problem was cured.

For Copies of Sadguru Mahime English and Kannada, Guru Bandhus can contact 94810 25416.

Unauthorised copy and distribution in any way without the permission of the Original Author is strictly prohibited.
ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 33
ಊಟಕೆಲ್ಲಾ ರೆಡಿ ಮಾಡು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥



ಗುರುನಾಥರು ಮನೆಗೆ ಬರುತ್ತಾರೆಂಬ ಸಂಭ್ರಮ ಸಂತಸದಲ್ಲಿ ತನ್ನ ತಾಯಿಯವರಿಗೆ ಮನೆಗೆ ಫೋನು ಮಾಡಿ ಬರಲು ತಿಳಿಸಿದ ಭಕ್ತೆಯೊಬ್ಬರು ಹೇಗೆ ಪೇಚಿಗೆ ಸಿಕ್ಕಿಕೊಂಡರು. ಮುಂದೆ ಗುರುನಾಥರೊಡ್ಡಿದ ಪರೀಕ್ಷೆಗಳಲ್ಲಿ ಅವರು ಹೇಗೆ ಪಾರಾದರು ಎಂಬುದೇ ಇಂದಿನ ನಿತ್ಯ ಸತ್ಸಂಗದ ವಿಷಯ. ಬನ್ನಿ ಗುರುಬಾಂಧವರೇ ಗಾಯಿತ್ರಿಯವರ ಮಾತುಗಳಲ್ಲಿ ಅಂದಿನ ವಿಚಾರಗಳನ್ನು ಕೇಳೋಣ. 

"ಅಂದು ಗುರುನಾಥರು ಕೋಣಂದೂರಿನ ನಮ್ಮ ಮನೆಗೆ ಬಂದಿದ್ದರು. ಗುರುನಾಥರನ್ನು ಕಂಡ ಮನೆಯವರೆಲ್ಲಾ ಬಹು ಸಂತಸಪಟ್ಟರು. ಎಲ್ಲರೂ ನಮಸ್ಕರಿಸಿದ ನಂತರ ಕ್ಷೇಮ ಸಮಾಚಾರಗಳನ್ನು ವಿಚಾರಿಸಿದ ಗುರುನಾಥರು ಗರ್ಭಿಣಿಯಾಗಿದ್ದ ನನ್ನ ಯೋಗಕ್ಷೇಮವನ್ನು ವಿಶೇಷವಾಗಿ ವಿಚಾರಿಸಿ, ತಾವು ತಂದಿದ್ದ ಅವಲಕ್ಕಿ ಬೆಲ್ಲದ ಸಿಹಿಯನ್ನು ನೀಡಿದರು. ಅಂದು ಬಹಳ ವಿರಾಮವಾಗಿ ನಮ್ಮ ಮನೆಯಲ್ಲಿ ಇದ್ದರು. ನನಗೆ ಊಟಕ್ಕೆಲ್ಲಾ ರೆಡಿ ಮಾಡಲು ಹೇಳಿದರು. ನಾನು ಸಂತಸದ ಭರದಲ್ಲಿ ಗುರುನಾಥರು ನಮ್ಮ ಮನೆಗೆ ಬಂದಿರುವ ವಿಚಾರವನ್ನು ನಮ್ಮ ತಾಯಿಯವರಿಗೂ ತಿಳಿಸಿ ಬರಲು ಫೋನಾಯಿಸಿದ್ದೆ. ಅಲ್ಲದೆ ಗಣಪತಿ ಹೋಮವು ನಮ್ಮ ಮನೆಯಲ್ಲಿ ಇದ್ದುದರಿಂದ ತುಂಬಾ ಜನ ನಮ್ಮ ಮನೆಗೆ ಬರತೊಡಗಿದರು. ಸಾಮಾನ್ಯವಾಗಿ ಗುರುನಾಥರು ಜನ ಜಂಗುಳಿಯನ್ನಿಷ್ಟಪಡರು. ತಮ್ಮ ಭಕ್ತರಿಗಾಗಿ, ಯಾರ ಕುರಿತಾಗಿ ಬಂದಿರುತ್ತಾರೋ ಅವರಲ್ಲದೆ ಬೇರೆಯವರೆಲ್ಲಾ ಅಲ್ಲಿ ಸೇರುವ ಸೂಚನೆ ಕಂಡು ಬಿಟ್ಟರೆ ಅದು ಹೇಗೋ ಅಲ್ಲಿಂದ ಅವರು ಕಣ್ಮರೆಯಾಗಿ ಬಿಡುತ್ತಾರೆ. ಅಂದು ನಮ್ಮ ಮನೆಯಲ್ಲೂ ಹಾಗೆ ಆಯಿತು. ಗುರುನಾಥರಿಗಾಗಿ ಎಲ್ಲ ಅಡುಗೆ ಸಿದ್ಧ ಮಾಡಿಕೊಂಡೆ. ಅಡುಗೆ ಮಾಡಲು ಹೇಳಿದ, ಊಟ ಕೊಡೆಂದು ಕೇಳಿದ, ಗುರುನಾಥರೇ ಆ ಊಟ ಮಾಡದಿದ್ದರೆ ಅದೇನು ಚೆನ್ನ ಎನಿಸಿತು. ಎಲ್ಲೋ ನಾನು ಮಾಡಿದ ತಪ್ಪಿನ ಅರಿವಾಯಿತು. ಜೊತೆಗೆ ಗುರುನಾಥರಿಗೆ ಈ ಅಡುಗೆ ಮಾಡಿದುದನ್ನು ಅವರಿಗೆ ಅರ್ಪಿಸಲೇಬೇಕೆಂದು ಮನ ಹೇಳಿತು. ಎಂಟು ತಿಂಗಳ ಗರ್ಭಿಣಿ ನಾನು ಪಾಯಸ ಮುಂತಾದವುಗಳೆಲ್ಲಾ ತೆಗೆದುಕೊಂಡು ಶೃಂಗೇರಿಗೆ ಹೋದೆ. ಗುರುನಾಥರನ್ನು ಕಂಡು ಎಲ್ಲವನ್ನೂ ಅವರಿಗೆ ಅರ್ಪಿಸಿದೆ. ಆಗ ಗುರುನಾಥರು "ಏನಮ್ಮಾ, ಇಲ್ಲಿಗೂ ಬಂದ್ಯಾ.... ಎಲ್ಲಾ ಇಲ್ಲಿಗೂ ತೆಗೆದುಕೊಂಡು ಬಂದ್ಯಾ.... ನೋಡು ಅದಕ್ಕೆ ಹೇಳೋದೂ, ನನ್ನ ಜೊತೆ ಇರೋಕೆ ಹೇಳೋದು" ಎಂದು ಪ್ರೀತಿಯಿಂದ ಎಲ್ಲವನ್ನೂ ಸ್ವೀಕರಿಸಿದರು. ಆಗಲೇ ನನ್ನ ಮನಕ್ಕೆ ಸಮಾಧಾನವಾದದ್ದು. ಬಹುಶಃ ಗುರುನಾಥರಿಗೆ ಅದನ್ನು ಅರ್ಪಿಸಲಾಗದಿದ್ದರೆ.. ಗುರು ಭಿಕ್ಷೆ ನೀಡದ ನೋವು ನನ್ನನ್ನು ಎಂದೆಂದಿಗೂ ಕಾಡುತ್ತಿತ್ತೋ ಏನೋ. ಆದರೆ ಕೃಪಾಳು ಗುರುನಾಥರು ಅದಕ್ಕೆ ಅವಕಾಶ ನೀಡದೆ.. ನಮ್ಮನ್ನು ಹರಸಿದರು" ಎನ್ನುತ್ತಾರೆ ಗಾಯಿತ್ರಿಯವರು. 

ಗುರುನಾಥರು ತಮ್ಮ ಭಕ್ತರಿಗೆ ತೋರಿಸಿದ ಲೀಲೆಗಳಿಗೆ ಕೊನೆ ಮೊದಲಿಲ್ಲ. ಒಮ್ಮೆ ಒಬ್ಬ ಭಕ್ತರ ಮನೆಯಲ್ಲೊಂದು ವಿಶೇಷವಿತ್ತು. ರಾತ್ರಿಯ ಹನ್ನೊಂದು ಗಂಟೆ. ಮೂರು ಜನ ಬ್ರಾಹ್ಮಣರು ಊಟಕ್ಕಿದ್ದಾರೆ. ಮನೆಯಲ್ಲಿ ಇರುವುದು ಒಬ್ಬಿಬ್ಬರಿಗೆ ಸಾಕಾಗುವಷ್ಟು. ಕೂಡಲೇ ಆ ಭಕ್ತರಿಗೆ ನೆನಪಾದದ್ದು ಗುರುನಾಥರು. ಭಕ್ತಿಯಿಂದ 'ನೀನೆ ಕಾಪಾಡಪ್ಪಾ' ಎಂದು ಬೇಡಿದರಂತೆ. ಮೂರು ಜನ ಪುಷ್ಕಳವಾಗಿ ಊಟ ಮಾಡಿದ ಮೇಲೂ ಸಾಕಷ್ಟು ಅಡುಗೆ ಉಳಿದಿತ್ತಂತೆ. ಗುರುನಾಥರಿಗೆ ಅಸದಳವಾದದ್ದು ಏನಿದೆ ಹೇಳಿ. ಗುರು ಚರಿತ್ರೆಯಲ್ಲಿ ಭಾಸ್ಕರ ದ್ವಿಜನು ತಂಡ ಮೂರು ಜನರಿಗೆ ಆಗುವ ಪದಾರ್ಥದಲ್ಲಿ ಊರವರಿಗೆಲ್ಲಾ ಗುರುಗಳು ಉಣಿಸಲಿಲ್ಲವೇ? 

ಮತ್ತೊಮ್ಮೆ ಗುರುನಾಥರ ಜೊತೆ ಬೇರೊಂದು ಕಾರಿನಲ್ಲಿ ಹೊರಟ ಭಕ್ತರ ಕಾರಿನ ಫ್ಯಾನ್ ಬೆಲ್ಟ್ ಕಟ್ಟಾಯಿತಂತೆ. ಗಾಡಿ ಮುಂದೆ ಹೋಗುವುದಾದರೂ ಹೇಗೆ? ಆದರೂ ಗುರುನಾಥರು ತಲುಪಬೇಕಾಗಿದ್ದ ಗಂತವ್ಯದವರೆಗೆ ಇವರ ಕಾರೂ, ಸ್ವಲ್ಪ ತಡವಾಗಿ ತಲುಪಿತು. ಗುರುನಾಥರು 'ಏಕಿಷ್ಟು ತಡವಾಯಿತು?' ಎಂದು ತಿಳಿದೂ ತಿಳಿಯದಂತೆ ಕೇಳಿದರಂತೆ. ಮುಂದೆ ಇವರು ಕಾರು ರಿಪೇರಿಯನ್ನು ಮಾಡಿಸಿಕೊಂಡು, ಊರಿಗೆ ಹೊರಟಾಗ ಅವರನ್ನು ಕರೆದು ಈ ಬಾಳೆ ಹಣ್ಣನ್ನು ಮನೆ ತಲುಪುವವರೆಗೆ ನಿಮ್ಮ ಕಾರಿನಲ್ಲಿ ಇಟ್ಟುಕೊಂಡಿರಿ, ಒಳ್ಳೆಯದಾಗಿ ಹೋಗಿ ಬನ್ನಿ" ಎಂದಿದ್ದರಂತೆ. 

ಬಹುಶಃ ಮುಂದೆ ಮಾರ್ಗದಲ್ಲಿ ಯಾವುದೇ ವಿಘ್ನಗಳೂ ಎದುರಾಗದೆ, ತಮ್ಮ ಭಕ್ತರು ಮನೆ ತಲುಪಲೆಂದು ಸದಭಿಪ್ರಾಯ ಗುರುನಾಥರಿಗೆ ಇತ್ತೇನೋ. ಗುರುನಾಥರ ರೀತಿ, ಪ್ರೀತಿಯೇ ಹೀಗೆ. ತಮ್ಮ ಬಳಿಗೆ ಬಂದವರನ್ನು ವಾಪಸ್ಸು ಕಳಿಸುವಾಗ 'ಬಸ್ಸಿಗೆ ಹತ್ತಿಸಿ ಬನ್ನಿ' ಎಂದು ಶಿಷ್ಯರನ್ನು ಜೊತೆಗೆ ಕಳಿಸುವುದು. 'ನೀವು ಮನೆ ತಲುಪಿದ ಕೂಡಲೇ ಫೋನು ಮಾಡಿ' ಎಂದು ಭಕ್ತರ ಫೋನಿಗಾಗಿ ಕಾಯುತ್ತಿರುವುದು. ವಯಸ್ಸಾದವರು, ಅಶಕ್ತರು, ನಿರ್ಮಲ ಮನದ ಭಕ್ತರುಗಳನ್ನು ಯಾರಾದರೂ ನಿಗಾದಲ್ಲಿ ಕಾರಿನಲ್ಲಿ ಕಳಿಸಿಕೊಡುವ ಏರ್ಪಾಟು ಮಾಡುವುದು ಗುರುನಾಥರ ಒಂದು ವಿಶೇಷ ಕಾಳಜಿಯಾಗಿತ್ತೆಂಬುದು ಅವರ ನಿಕಟವರ್ತಿಗಳಿಗೆಲ್ಲಾ ತಿಳಿದ ವಿಷಯವೇ. 

ಅಷ್ಟು ದೊಡ್ಡ ಗೌರವಕ್ಕೆ ಪಾತ್ರರಾಗಿದ್ದರೂ, ಅಪಾರ ಜವಾಬ್ದಾರಿ ಅವರ ಮೇಲಿದ್ದರೂ ಪ್ರತಿಯೊಬ್ಬ ಭಕ್ತರ ಬಗ್ಗೆ ಗುರುನಾಥರ ಪ್ರೀತಿ ಮಮತೆ ಎಷ್ಟಿತ್ತೆಂದರೆ ಅನ್ಯತ್ರ ದುರ್ಲಭ. ಪ್ರಿಯ ಸತ್ಸಂಗಾಭಿಮಾನಿಗಳೇ, ಇಂತಹ ಅಪಾರ ಕರುಣಾಶಾಲಿಯಾ ಸಾನ್ನಿಧ್ಯ ಪಡೆದ ಭಕ್ತರೇ ಧನ್ಯರು.... ಮತ್ತೆ ನಾಳೆ ಬರುವಿರಲ್ಲಾ ಗುರು ಕಥಾ ಶ್ರವಣಕ್ಕಾಗಿ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 53


ಗುರುಚರಿತ್ರಾಧ್ಯಾಯ ಸಾರವ । ನರುಹಿದನು ಪ್ರೇಮದಲಿ ಸಿದ್ಧನು । ತಿರುಗಿ 
ಪಠಣದ ವಿಧಿಯ, ಫಲವನು ವಿಸ್ತರಿಸಿದನವಾ   || 53 ||

ಹೀಗೆ ಸಿದ್ಧಯೋಗಿಯಿಂದ ಗುರು ಚರಿತ್ರವನ್ನು ಕೇಳಿ ಭಾವಪರವಶನಾಗಿ ಸಮಾಧಿ ಸ್ಥಿತಿಯಲ್ಲಿರುವ ನಾಮಧಾರಕನನ್ನು ಸಿದ್ಧಮುನಿಯು ಎಚ್ಚರಿಸಿದಾಗ ಮತ್ತೆ ಎನಗೀ ಸುಚರಿತ್ರೆ ಕೇಳಬೇಕೆನಿಸಿದೆ ಎನ್ನುವ ನಾಮಧಾರಕನಿಗಾಗಿ ಸಿದ್ಧಮುನಿಯು ಸಾರ ರೂಪದಲ್ಲಿ ಹೇಳುವುದೇ ಐವತ್ತಮೂರನೇಯ ಅಧ್ಯಾಯ. ಸಪ್ತಾಹದ ವಿಧಿಯನ್ನು ಅನುಸರಿಸಬೇಕಾದ ನಿಯಮ ಹಾಗೂ ಅದರ ಫಲಗಳೂ ಇದರಲ್ಲಿದೆ. 

ಭೂ ತಳದಿ ಶ್ರೀ ಗುರು ಚರಿತ್ರದ । ಪ್ರೀತಿಪೂರ್ವಕ ಪಠಣ ಮಾತ್ರದಿ ।
ಭೀತಿ ರೋಗಾದಿಗಳು ನಾಷಿಪವೇನ ಹೇಳುವೆನು ।
ಭೂತಪ್ರೇತಾದಿಗಳ ಬಾಧೆಯು । ಖಾತ್ರಿಯಿಂ ಸಂಹಾರವಪ್ಪುದು ।
ಪಾತಕಂಗಳು ಸುಟ್ಟು ಹೋಗುವವೀ ಪಠಣದಿಂದಾ ।

ಎನ್ನುವ ವಾಕ್ಯಗಳು ಫಲದ ಬಗ್ಗೆ ತಿಳಿಸಿದರೆ... ಸಪ್ತಾಹದ ರೀತಿ ಎಂದರೆ, 

ಮೊದಲ ದಿನ ೯ನೇ ಅಧ್ಯಾಯ, ಎರಡನೇ ದಿನ ೨೧ ಅಧ್ಯಾಯ, ಮೂರನೇ ದಿನ ಇಪ್ಪತೊಂಬತ್ತನೆಯ ಅಧ್ಯಾಯ, ನಾಲ್ಕನೆಯ ದಿನ ಮೂವತ್ತೈದು, ಐದನೆಯ ದಿನ ಮೂವತ್ತೆಂಟು, ಆರನೆಯ ದಿನ ನಲವತ್ತಮೂರು ಹಾಗೂ ಏಳನೆಯ ದಿನ ಸಾರಾಧ್ಯಾಯ ಸೇರಿ ಎಲ್ಲ ಓದಿ ಮುಗಿಸಬೇಕು. ಒಂದೇ ಸ್ಥಳದಿ ನಿತ್ಯ ಪಾರಾಯಣ ಮಾಡುವುದು, ಒಂದು ಹೊತ್ತು ಭೋಜನ, ಹಾಸಿಗೆಯ ಮೇಲೆ ಮಲಗದೆ ಇರುವುದು ಸಪ್ತಾಹದ ನಿಯಮಗಳು. ಪ್ರತಿನಿತ್ಯ ಗುರುಗಣೇಶ, ಮನೆ ದೇವರನ್ನು ನೆನೆದು ಪೂಜೆ ಪ್ರಾರಂಭಿಸಿ ಕೊನೆಯಲ್ಲಿ ನೈವೇದ್ಯ, ಆರತಿ, ಭಜನೆಗಳನ್ನು ಮಾಡಬೇಕು. ಸಪ್ತಾಹದ ಅಂತ್ಯದಲ್ಲಿ ಸಾಧ್ಯವಾದಷ್ಟು ಅನ್ನದಾನ ಮಾಡುವುದು, ಸಪ್ತಾಹದ ನಿಯಮ. 

ಮಂಗಳಂ ಶ್ರೀ ದತ್ತರಾಜಗೆ । ಮಂಗಳಂ ಶ್ರೀ ಭಕ್ತವರದಗೆ ।
ಮಂಗಳಂ ಶ್ರೀಪಾದ ಶ್ರೀ ವಲ್ಲಭಗೆ ಯತಿವರಗೆ ।
ಮಂಗಳಂ ನರಹರಿಸರಸ್ವತಿ । ಮಂಗಳಂ ನಿನಗರ್ಪಿಸುವ ಶುಭ ।
ಮಂಗಳಂ ಶ್ರೀ ರಾಘವೇಂದ್ರಗೆ ವಿಷ್ಣುದಾಸನಿಗೆ ।
ಎಂಬ ಮಂಗಲಶ್ಲೋಕದಿಂದ ಮುಕ್ತಾಯವಾಗಿದೆ. 

।।ಹರಿ ಓಂ ತತ್ಸತ್ ಶ್ರೀ ಗುರುದತ್ತಾತ್ರೇಯಾರ್ಪಣಮಸ್ತು । ಶುಭಂ ಭವತು ।।

Sunday, July 2, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸೇವತೇ ಯದಪೇಪ್ಸಯಾ
ವಿಂದತಿ ಗುರುಸೇವಯಾ |
ಭಾವಿಕಃ ಲಭತೇ ಜ್ಞಾನಂ
ಸಾಧಕಃ ತು ಪರಾಂ ಗತಿಮ್ ||


ಭಕ್ತನು ಗುರುವಿನ ಸೇವೆಯಿಂದ ತನ್ನ ಮನೋರಥವನ್ನು ಪಡೆಯುತ್ತಾನೆ...ಭಾವಿಕ ಭಕ್ತನು ಸದ್ಗುರುವನ್ನು ತ್ರಿಕರಣ ಶುದ್ದನಾಗಿ ಸೇವಿಸಿದಾಗ ಜ್ಞಾನವನ್ನು ಪಡೆದರೆ ಸಾಧಕನು ಅವನ ಗಮ್ಯವನ್ನು ಪಡೆಯುತ್ತಾನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
Sri Sadguru Mahime

Author: Charana Dasa

Translator: Shri.Ganesh Prasad

Chapter 87 : Guru is for Solitude

An army man came to know about Gurunatha through one of his relatives and desperately wanting to meet him, came to Gurunatha’s residence at 1.30 at midnight and knocked the door. Gurunatha himself having a lantern in his hand opened the door. He asked us to make arrangements for that person to sleep and told him they shall talk the next day. Gurunatha’s house was not crowded those days.

The next day Gurunatha walked around the town with him and was seen introducing this person to everyone he met and told them “See this person has come from Bangalore to see me”. Gurunatha kept him at his residence for two days and most part of those two days he was heard telling that person “A Guru will be seen only in solitude and not in a group”. Later Gurunatha sent him back saying those exact words again that next time he should come alone.

As he had got attracted towards Guru, he started to do regular visits and later thanks to Guru’s blessings started working in Mysore in central government service. He continued his practice of visits whenever he got time from his schedule and did whatever service he could at Gurunatha’s residence and went back.

During one of these visits while returning Gurunatha told him “There will be one seat in the front of the bus, you should sit there”, blessed him and sent him back. Once he got on the bus contrary to what Gurunatha had said he found only one vacant seat that too at the rear end of the bus. A bit worried but without any other option he sat there and started the journey. A little later one person got down from the front row and he saw a vacant seat in the front row. Thanking Gurunatha in his mind he sat in the first row. His earlier seat was occupied by another commuter. As the bus was traveling a vehicle coming from behind hit it and the commuter who had occupied his earlier seat died in the accident.

On seeing this first hand, it dawned on him as to why Gurunatha insisted that he should sit in the first row. He profusely thanked Gurunatha in his mind for his kindness towards him throughout the journey.

This incident was explained to me very recently and the person’s eyes were filled with tears recounting those days. An unparalleled devotion towards Guru, a pure state of mind, not venturing into others’ affairs were key takeaways for me from this devotee.

For Copies of Sadguru Mahime English and Kannada, Guru Bandhus can contact 94810 25416.

Unauthorised copy and distribution in any way without the permission of the Original Author is strictly prohibited. 
ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 32
ಭಕ್ತ ಪರಿಪಾಲಕ ಗುರುನಾಥರು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


"ಗುರುನಾಥರ ದರ್ಶನ ನನಗೆ ಆದದ್ದು ಸಹಜವಾಗಿಯೇ. ನಾನು ನನ್ನ ಅಕ್ಕನ ಮನೆಗೆ ಸಖರಾಯಪಟ್ಟಣಕ್ಕೆ ಆಗಾಗ ಹೋಗುತ್ತಿದ್ದೆ. ನಮ್ಮಕ್ಕನ ಮನೆಗೆ ಅವರು ಯಾವಾಗಲಾದರೂ ಬಂದು ಕಾಫಿ ಕುಡಿದು, ಹಣ್ಣು ಹಂಪಲು ತಿಂದು ಹೋಗುತ್ತಿದ್ದುದು ಆ ಮನೆಯ ಯಾವ ಜನ್ಮದ ಪುಣ್ಯದ ಫಲವೋ, ಅಂತಹ ಮನೆಗೆ ನಮ್ಮಕ್ಕ ಸೇರಿದ್ದುದು ನಮ್ಮ ಅದೃಷ್ಟವೆನ್ನಬಹುದು. ಆಗಾಗ್ಗೆ ಗುರುನಾಥರ ಬಗ್ಗೆ ತುಂಬಾ ಭಾವುಕಳಾಗಿ ನಮ್ಮಕ್ಕ ಅನೇಕ ವಿಷಯಗಳನ್ನು ಹೇಳುತ್ತಿದ್ದರು. ಅವರನ್ನು ಕಾಣುವ ಹಂಬಲ ಭಾವೋದ್ರೇಕವಾಗಿ ಪರಿಣಮಿಸಿಬಿಡುತ್ತಿತ್ತು. ಗುರುನಾಥರು ನಮ್ಮೆದುರಿಗೆ ಬಂದಾಗ ಇದು ನನ್ನಕ್ಕನಿಗೂ ಹಾಗೇ ಆಗುತ್ತಿತ್ತು. ಗುರುನಾಥರು ನಮ್ಮನ್ನು ನೋಡಿ ನಗುತ್ತಿದ್ದರು. "ಏ ಭಾವೋದ್ರೇಕದವರೇ" ಎಂದೇ ನಮ್ಮನ್ನು ಗುರುನಾಥರು ಕರೆಯುತ್ತಿದ್ದರು. ಗುರುನಾಥರು ಏನು ಹೆಸರಿನಿಂದ ಕರೆಯುತ್ತಿದ್ದಾರೆಂಬುದಕ್ಕಿಂತ ನಮ್ಮ ಬಳಿ ಅವರಿದ್ದಾರಲ್ಲಿ ನಮ್ಮನ್ನು ಮಾತನಾಡಿಸುತ್ತಿದ್ದಾರಲ್ಲ ಎಂಬುದೇ ನಮಗೊಂದು ಸಂತಸವಾಗುತ್ತಿತ್ತು. ಅವರಲ್ಲಿ ಏನು ಬೇಡಬೇಕು, ಏನು ಕೇಳಬೇಕೆಂಬ ಯಾವ ಭಾವನೆಯೂ ನಮ್ಮಲ್ಲಿ ಉದ್ಭವಿಸದೇ ಏನೋ ಒಂದು ಆನಂದ ಸಂತಸ ಆ ವಾತಾವರಣದಲ್ಲಿ ನಮಗೆ ಅನುಭವವಾಗುತ್ತಿತ್ತು" ಎಂದು ತಮ್ಮ ಅನುಭವವನ್ನು ತೋಡಿಕೊಂಡವರು ಕೋಣಂದೂರಿನ ಗುರುಭಕ್ತ ದಂಪತಿಗಳಾದ ಶ್ರೀಮತಿ.ಗಾಯಿತ್ರಿ ಹಾಗೂ ಅನಂತಕೃಷ್ಣ ಅವರು ನಮ್ಮ ನಿತ್ಯ ಸತ್ಸಂಗಕ್ಕಾಗಿ. 

"ನಾನು ಮೊದಲೇ ಗುರುನಾಥರ ಬಗ್ಗೆ ಸಾಕಷ್ಟು ಕೇಳಿದ್ದೆ. ಮೊದಲು ದರ್ಶನ ಪಡೆದಾಗ ನಾನು ನನ್ನ ಮಗಳ ಜೊತೆಗೆ ಹೋಗಿದ್ದೆ. ನನ್ನ ಕಣ್ಣಿಂದ ಒಂದೇ ಸಮನೆ ಆನಂದಬಾಷ್ಪಗಳು ಉದುರುತ್ತಿತ್ತು. ಮಾತನಾಡಲೂ ಆಗಲಿಲ್ಲ. ಗುರುನಾಥರ ಸರಳ ಸಜ್ಜನಿಕೆಗೆ ಗುರುನಾಥರ ರೀತಿಗೆ ಮರುಳಾಗದವರಾರು? ಕೆಲವು ಅನುಭವಗಳನ್ನು ಹೇಳಲಾಗುತ್ತಿಲ್ಲ... ಅದನ್ನು ಅನುಭವಿಸಿದ ನನಗಷ್ಟೇ ಸೀಮಿತವಾದ ಅನುಭವಗಳೇನೋ ಎನಿಸುತ್ತದೆ. ಆಗಾಗ ನಮ್ಮ ಮನೆಯಲ್ಲಿ ಗಂಡು ಮಗುವಿಗಾಗಿ ನಮ್ಮತ್ತೆ ಮಾವ ಇವರುಗಳೆಲ್ಲಾ ಆಸೆ ಪಡುತ್ತಿದ್ದರು. ಗುರುನಾಥರ ಕೃಪೆಯಾಯಿತು. ನಮ್ಮೆಲ್ಲರ ಆಸೆ ನೆರವೇರಿದಂತೆ ಗಂಡು ಮಗುವೂ ಜನಿಸಿತು. ಈ ಹಿನ್ನೆಲೆಯಲ್ಲಿ ನಡೆದ ಒಂದು ಘಟನೆ ಎಂದರೆ, ನಮ್ಮ ತಾಯಿ ಸಖರಾಯಪಟ್ಟಣಕ್ಕೆ ಹೋಗಿದ್ದರು. ನಾನಾಗ ಗರ್ಭಿಣಿ. ಇಲ್ಲಿ ಊರಿನಲ್ಲಿದ್ದ ನಾನು ಅಕಸ್ಮಾತ್ ಬಿದ್ದುಬಿಟ್ಟೆ. ಗರ್ಭಿಣಿಗೆ ಏನಾಗಿಬಿಡುವುದೋ ಎಂದು ಎಲ್ಲರೂ ಮನೆಯಲ್ಲಿ ಗಾಬರಿಯಾದರು. ಈ ವಿಚಾರವನ್ನು ನಮ್ಮ ತಾಯಿಗೂ ಫೋನು ಮಾಡಿ ತಿಳಿಸಿದರು. ಅವರು ಗುರುನಾಥರಿಗೆ ಈ ವಿಚಾರವನ್ನು ತಿಳಿಸಿ, ತೀವ್ರ ಕಳವಳಗೊಂಡರಂತೆ. ಆಗ ಗುರುನಾಥರು ಏನೂ ಆಗುವುದಿಲ್ಲ. ಭಯ ಪಡಬೇಡಿ" ಎಂದರಂತೆ. ಅವರ ದಿವ್ಯ ಅನುಗ್ರಹದಿಂದ ನನಗಾಗಲೀ, ನನ್ನ ಮಗುವಿಗಾಗಲೀ ಯಾವುದೇ ತೊಂದರೆಯಾಗಲಿಲ್ಲ. ಗುರುನಾಥರ ಪ್ರೀತಿಯ ಅನುಗ್ರಹ ಹೀಗೆ ನಮ್ಮನ್ನು ಎಡಬಿಡದೇ ಕಾಪಾಡುತ್ತಾ ಬಂದಿದೆ. ಅತ್ಯಂತ ಕರುಣಾಳುಗಳಾದ ಅವರು ತಮ್ಮನ್ನು ನಂಬಿದ ಭಕ್ತರನ್ನು ಸಲಹುವ ರೀತಿಯೇ ಒಂದು ಲೀಲೆ" ಎನ್ನುತ್ತಾರೆ ಗಾಯಿತ್ರಿ ದಂಪತಿಗಳು. 

ಮುಂದೆ ಗುರುನಾಥರು ಈ ಭಕ್ತರ ಮನೆಗೆ ಕೋಣಂದೂರಿಗೆ ಬಂದರಂತೆ. ಸ್ವತಃ ತಾವೇ ಹಾಲು ಅನ್ನವನ್ನು ತಮ್ಮ ಭಕ್ತರಿಗೆ ತಿನ್ನಿಸಿದಂತೆ ಸಿಹಿಯನ್ನು ತಿನ್ನಿಸಿ, ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸಿದ ಗುರುನಾಥರನ್ನು ಅವರು ಎಂದೆಂದೂ ಸ್ಮರಿಸುತ್ತಾರೆ. 

ಮುಂದೆ ಗಂಡು ಮಗುವಿಗೆ ಹೆಸರಿಡಬೇಕಲ್ಲ. ಇದು ತಂದೆ ತಾಯಿಗಳ ಇಷ್ಟ. ಆದರೆ ಇಲ್ಲಿಯೂ ತಮ್ಮ ಜೀವನದಲ್ಲಿ ಪರಿಪೂರ್ಣವಾಗಿ ಗುರುನಾಥರಿಗೆ ಸ್ಥಾನ ನೀಡಿದ್ದ ಈ ದಂಪತಿಗಳು ಗುರುನಾಥರನ್ನೇ ಕೇಳಿ ಏನು ಹೆಸರಿಡಬೇಕೆಂದು ನಿರ್ಧರಿಸಿದರಂತೆ. ಗುರುನಾಥರು ಊರಿನಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡು ಅನಂತಕೃಷ್ಣ ಅವರು, ಮಗುವಿನ ಹೆಸರಿನ ಬಗ್ಗೆ ವಿಚಾರಿಸಲು ಸಖರಾಯಪಟ್ಟಣಕ್ಕೆ ಹೋದರಂತೆ. ಗುರುನಾಥರಲ್ಲಿ ಇರಲಿಲ್ಲ. ಚಿಕ್ಕಮಗಳೂರಿನಲ್ಲಿ ಇದ್ದಾರೆಂದು ತಿಳಿದು ಅಲ್ಲಿಗೇ ಹೋದರು ಅನಂತಕೃಷ್ಣ. ಚಿಕ್ಕಮಗಳೂರು ತಲುಪಿದಾಗಲೂ ಗುರುನಾಥರು ಅಲ್ಲಿ ಸಿಗಲೇ ಇಲ್ಲ. ಅಲ್ಲಿ ತಿಳಿದ ವಿಚಾರವೆಂದರೆ ಶೃಂಗೇರಿಗೆ ಹೋಗಿದ್ದಾರೆಂಬುದು. ಮತ್ತೆ ಅನಂತಕೃಷ್ಣ ಶೃಂಗೇರಿಗೆ ಹೋದರು. ತುಂಗಾ ನದಿ ತುಂಬಿ ಹರಿಯುತ್ತಿತ್ತು. ಗುರುನಾಥರೇನೋ ಸಿಕ್ಕರು. "ಜಗದ್ಗುರುಗಳ ದರ್ಶನ ಮಾಡಿ ಬಾ" ಎಂದು ಆಚೆ ಕಡೆ ಕಳಿಸಿದರಂತೆ. ಜಗದ್ಗುರು ದರ್ಶನವಾದ ಮೇಲೆ ಮಗುವಿಗೆ ಚಂದ್ರಶೇಖರ ಅಥವಾ ಸೋಮಶೇಖರ ಎಂದು ಹೆಸರನ್ನಿಡಿ ಎಂದು ಆಶೀರ್ವದಿಸಿದರಂತೆ. 

ಇದೇನು ಗುರು ಪರೀಕ್ಷೆಯೋ? ಶಿಷ್ಯರ ಧೃಡತೆಯ ಪ್ರತೀಕವೋ? ಅಥವಾ ಶಿಷ್ಯರ ಮೇಲಿನ ಪ್ರೀತಿಯಿಂದ ಈ ರೀತಿ ತೀರ್ಥಕ್ಷೇತ್ರ ದರ್ಶನವನ್ನು ಗುರುನಾಥರು ತಮ್ಮ ಭಕ್ತರಿಗೆ ಮಾಡಿಸಿದರೋ.... ಅದೆಲ್ಲಾ ಅವರೇ ಬಲ್ಲರು. 

ಒಂದಂತೂ ನಿಜ. ಗುರುವಿನಲ್ಲಿ ಏಕನಿಷ್ಠ ಭಾವವೊಂದಿದ್ದರೆ ಸಾಕು. ಭಕ್ತರನ್ನು ದಡ ಸೇರಿಸುವ ಜವಾಬ್ದಾರಿ ಹೊತ್ತ ಗುರುನಾಥರು ಎಲ್ಲವನ್ನೂ ನಮಗೆ ಅರಿಯದಂತೆ ನಮ್ಮಿಂದ ಮಾಡಿಸಿರುತ್ತಾರೆ. ಮಗುವಿಗೆ ಗುರುನಾಥರು ತಿಳಿಸಿದ ಹೆಸರನ್ನಿಟ್ಟಿದ್ದಾರೆ ಆ ಗುರು ಭಕ್ತರು. ಅತ್ಯಂತ ಆನಂದಮಯ ಜೀವನ ಅವರದಾಗಿದೆ. 

ಸನ್ಮಾನ್ಯ ಸತ್ಸಂಗ ಅಭಿಮಾನಿ ಗುರುಭಕ್ತರೆ, ನಮ್ಮ ಪೂರ್ವಾಪರವು ನಮಗೆ ಅರಿಯದಿದ್ದರೂ ಸದ್ಗುರಿವಿಗೆ ಎಲ್ಲಾ ತಿಳಿದಿರುತ್ತದೆ. ಹಾಗಾಗಿ, ಎಲ್ಲವನ್ನೂ ಅವರೇ ನಿರ್ಣಯಿಸಿ ಕಾರ್ಯ ರೂಪಿಸುತ್ತಾರೆ. ಎಲ್ಲ ಗುರುನಾಥರಿಗೆ ಅರ್ಪಿಸಿ ನಿಶ್ಚಲ ಮನಸ್ಸಿನಿಂದ ಇರುವುದು ಎಂತಹ ಆನಂದ ಅಲ್ಲವೇ, ನಿರಂತರ ಆತನ ಚಿಂತನೆಯಲ್ಲಿ ಇರಲು.,... ಬನ್ನಿ ನಿತ್ಯವೂ ಸತ್ಸಂಗದಲ್ಲಿ ಇರೋಣ. ನಾಳಿನ ಸತ್ಸಂಗಕ್ಕೂ ತಪ್ಪದೇ ಬರುವಿರಲ್ಲಾ..,.. ವಂದನೆಗಳು. ನಾಳೆ ಮತ್ತೆ ಭೇಟಿಯಾಗೋಣ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 52


ಗುರುವು ತನ್ನವತಾರವ ತೀರಿಸಿ । ತೆರಳಿದನು ಶ್ರೀಶೈಲಕೆನುತಲಿ । ಶರಣರೆಲ್ಲರೂ 
ಮನದಿ ದುಃಖವ ತಾಳಿದರು ಮರುಗಿ  || 52 ||

ಗುರು ಚರಿತ್ರವೆಂಬ ಮಧುವನ್ನು ಕೇಳಿ ಆನಂದಿತನಾದ ಶಿಷ್ಯ ಶಿರೋಮಣಿ ನಾಮಧಾರಕನು, ಮತ್ತೂ ಕೇಳಬೇಕೆಂದು ಆಶಿಸಿದಾಗ, ಸಿದ್ಧಮುನಿಯು ನಡೆದ ಚೋದ್ಯ ಒಂದನ್ನು ತಿಳಿಸುತ್ತಾರೆ. ಊರವರನ್ನೆಲ್ಲಾ ಸಂತೈಸಿದರೂ ದುಃಖದಿಂದ, ಗುರು ವಿಯೋಗದ ನೋವಿನಿಂದ ಗಾಣಗಾಪುರ ಮಠಕ್ಕೆ ತೆರಳಿದ ಭಕ್ತರಿಗೆ ಅಲ್ಲಿ ಶ್ರೀ ಗುರುಗಳು ನಗುಮುಖದಿಂದ ಕುಳಿತಿರುವುದು ಕಂಡು ಬರುತ್ತದೆ. ಅರೆಗಳಿಗೆಯಲ್ಲಿ ಮಾಯವಾಗುತ್ತಾರೆ. ಗುರು ನರನಲ್ಲವೆಂಬುದು ಖಚಿತವಾಗುತ್ತದೆ. ನಾಲ್ಕು ಜನ ಪರಮ ಶಿಷ್ಯರಿಗೆ ಗುರುಗಳು ಪುಷ್ಪಾಸನವನ್ನು ರಚಿಸಲು ಹೇಳಿ ಶ್ರೀ ಗಿರಿಗೆ ತೆರಳುತ್ತಾರೆ. "ನೀವು ಬರಿದೆ ಚಿಂತೆ ಮಾಡದಿರಿ. ಗಾಣಗಾಪುರದಲ್ಲಿ ನಿರ್ಗುಣ ರೂಪದಲ್ಲಿರುತ್ತೇನೆ. ನನ್ನ ಧ್ಯಾನ, ಪಾರಾಯಣ, ಮಾಡುವವರನ್ನು ನಿರಂತರ ನಾನು ರಕ್ಷಿಸುತ್ತೇನೆಂದು ಹೇಳಿ ಪುಷ್ಪಾಸನದಲ್ಲಿ ಕುಳಿತು ನದಿಯಲ್ಲಿ ತೆರಳುತ್ತಾರೆ. ನಂತರ ಪುಷ್ಪ ಪ್ರಸಾದ ಸ್ವೀಕರಿಸಿದ ನಾವು ನಾಲ್ವರಲ್ಲಿ ನನ್ನ ಈ ಪ್ರಸಾದವು ಈಗಲೂ ಹೇಗೆ ನಳನಳಿಸುತ್ತಿದೆ ನೋಡೆಂದು ತೋರಿದಾಗ, "ನನ್ನ ಜನ್ಮ ಈ ಪುಷ್ಪ ಪ್ರಸಾದವನ್ನು ಕಂಡು ಧನ್ಯವಾಯಿತು ಎನ್ನುತ್ತಾರೆ" ನಾಮಧಾರಕರು. ಇದೇ ಐವತ್ತೆರಡನೆಯ ಅಧ್ಯಾಯ. 

ಮುಂದುವರಿಯುವುದು...

Saturday, July 1, 2017

Sri Sadguru Mahime

Author: Charana Dasa

Translator: Shri.Ganesh Prasad

Chapter 86 : Social Service

Once a college lecturer had come to meet Gurunatha, he was an active member of a religious organization and was trying to establish himself as a social worker. Trying to push one of his organization’s resolutions, the lecturer said Gurunatha should educate people about the importance of cows and help eradicate cow slaughter.

Gurunatha replied. “While I appreciate your noble intentions behind this, have you paid any attention to what will happen to those families who are entirely dependent on this for their two square meals? If you ban cow slaughter, what is your suggestion to these families about, what should they do to earn a living? Can you put forth your ideas on that first?”

Gurunatha continued.. “Let me suggest one thing.. you have about 16 lakh rupees deposited in the bank(giving him the exact amount he had kept in the bank) you shall distribute it among those affected families before you push for cow slaughter ban, will that be acceptable to you? That would be a real social service”. The lecturer was speechless.

“It is a misconception that those who have lakhs deposited in banks lead a peaceful, happy life. Happiness and tranquility have to come from inside. You can accumulate things that are supposed to make you happy but you cannot collect happiness itself. How much ever money you may have, what you can eat is a small quantity of rice isn’t it?”

Once an insurance agent met Guruantha, probably by force of habit, he suggested that Gurunatha should insure his life. Gurunatha replied “When there is no ‘assurance’ that this body will stay, how can I ‘insure’ it? Don’t know when Eashwara will give a pink slip to this body, if you keep money aside thinking that it will help you in times of distress, you are giving a red carpet welcome to distress or misfortune isn’t it? If at all you want to make a deposit, you should put a deposit in God’s bank and that deposit should be of our good conduct and being in his namasmarana(a spiritual exercise of repeating God’s name). Once you do that, a Sadguru will take you along life’s journey making sure you are never in any distress.

Once this Charanadasa tried shooing away the dogs which were moving around among a group of devotees, Gurunatha stopped and asked me why I was doing it. He went on to say “ This house does not belong to me or you, we go away from here if we are bored, we talk about others, these dogs won’t do it. Do they? They stay in this house more than us; this house belongs/means more to them than us, isn’t it? His words that day had taken the meaning of ‘equality’ to a new level.

He continued, “A dog’s saliva has got poison, a snake has venom in its teeth. But, a man’s entire body is venomous, his jealousy and conceit make the whole society venomous too. It is a big misconception that we think our bodies are beautiful, if you don’t take bath for a few days you would know how beautiful your body is, the animals never take bath do they? But still a cow’s urine even the cow dung is useful. Can you name one part of the human body that will be useful?

But, there is one thing that can be done only when you take birth as a human being, which most of us fail to do and that is Sadhana (moving in the path of self enquiry to achieve spiritual enlightenment/eternal bliss).

For Copies of Sadguru Mahime English and Kannada, Guru Bandhus can contact 94810 25416.

Unauthorised copy and distribution in any way without the permission of the Original Author is strictly prohibited.
ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 31
ಗುರುದರ್ಶನವಷ್ಟು ಸುಲಭವೇ ? 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಒಬ್ಬ ಭಕ್ತರು ಗುರುನಾಥರ ಬಗ್ಗೆ ಕೇಳಿ ತಿಳಿದಿದ್ದರಾದರೂ ಅವರನ್ನು ಕಾಣಲು ಪಟ್ಟ ಪ್ರಯತ್ನಗಳೆಲ್ಲಾ ವ್ಯರ್ಥವಾಗಿತ್ತು. ಬಹಳ ಹಿಂದೆ ಅವರ ಊರಿಗೆ ಪದೇ ಪದೇ ಗುರುನಾಥರು ಬರುತ್ತಿದ್ದರು. ಈ ವ್ಯಕ್ತಿಯ ಮನೆಯ ಮುಂದೆ ಜಗಲಿಯಲ್ಲಿ ಸಹ ಕುಳಿತಿದ್ದರಂತೆ. ಆದರೂ ಗುರುನಾಥರನ್ನು ಕಾಣುವ ಸೌಭಾಗ್ಯ ಒದಗಲಿಲ್ಲವೆಂದು ಪರಿತಪಿಸುವ ಇವರನ್ನುತ್ತಾರೆ : "ಪ್ರಖರವಾದ ಸೂರ್ಯನೇ ನಮ್ಮ ಮುಂದಿದ್ದರೂ ಕಣ್ಣು ಮುಚ್ಚಿ ಕುಳಿತವರಿಗೆ ಸೂರ್ಯನ ಬೆಳಕಿನ ಅರಿವು ಹೇಗಾಗುತ್ತದೆ. ನಮ್ಮ ಕರ್ಮ ಕಳೆಯದುದರಿಂದ ಮನೆ ಬಾಗಿಲಿಗೆ ಬಂದರೂ ಗುರುನಾಥರನ್ನು ಗುರುತಿಸಲು, ನೋಡಲು, ಅವರ ಆಶೀರ್ವಾದ ಪಡೆಯಲು ಆಗಲಿಲ್ಲ" ಎಂದು ನೊಂದುಕೊಳ್ಳುವ ಇವರು, ಕೊನೆಗೆ ಗುರುನಾಥರು ಮುಕ್ತರಾದ ವಿಚಾರ ತಿಳಿದಾಗ ಮತ್ತಷ್ಟು ಖಿನ್ನರಾದರು. ಆದರೆ ಮನಸ್ಸಿನಲ್ಲಿ ಗುರುನಾಥರ ಬಗ್ಗೆ ಅಪಾರ ಪ್ರೀತಿ, ಗೌರವ ಭಕ್ತಿಗಳು ದಿನದಿಂದ ದಿನಕ್ಕೆ ಬೆಳೆಯತೊಡಗಿತು. 

ಒಂದು ದಿನ ಮತ್ಯಾರೋ ಗುರುಗಳನ್ನು ನೋಡಿಬರಲು ಹೊರಟ ಇವರಿಗೆ ಆ ಗುರುಗಳು ಊರಿನಲ್ಲಿ ಇಲ್ಲವೆಂಬುದು, ಬಹುದೂರ ಬಂದ  ಮೇಲೆ ತಿಳಿಯಿತಂತೆ. ಏನು ಮಾಡುವುದು, ಗುರುದರ್ಶನ ಇಂದು ಮಾಡಲೇಬೇಕೆಂಬುದು ಇವರ ಗಟ್ಟಿ ವಿಚಾರವಾಗಿತ್ತು. ಅದೇ ಸಮಯದಲ್ಲಿ ಸಖರಾಯಪಟ್ಟಣಕ್ಕೆ ಹೋಗಿ ಗುರುನಾಥರ ವೇದಿಕೆಯ ದರ್ಶನ ಮಾಡಿ, ನಮಿಸಿ, ಧ್ಯಾನ ಮಾಡಿಕೊಂಡು ಬರುವುದೆಂದು ನಿರ್ಧರಿಸಿದರು. ಸಖರಾಯಪಟ್ಟಣವನ್ನೇನೋ ತಲುಪಿದರು. ಊರಿಗೆ ಹೊಸಬರಾದ ಇವರಿಗೆ ವೇದಿಕೆಯ ದಾರಿ ತಿಳಿದಿರಲಿಲ್ಲ. ಯಾರನ್ನೋ ಕೇಳಿದಾಗ "ನೇರವಾಗಿ ಹೋಗಿ ಅಲ್ಲೊಂದು ಚಾನಲ್ ಸಿಗುತ್ತದೆ. ಅಲ್ಲಿ ಬಲಕ್ಕೆ ಹೋಗಿ" ಎಂದರಂತೆ. ಕಾರು ಓಡಿತು.... ಓಡಿತು..... ಊರು ದಾಟಿ ಬಹುದೂರ ಸಾಗಿ ಸಿಕ್ಕ ಒಂದು ನಾಲೆಯ ಬಲಕ್ಕೆ ತಿರುಗಿ, ಅಲ್ಲೇನೂ ಕಾಣದೇ ಅಲ್ಲಿ ಸಿಕ್ಕ ಒಬ್ಬರನ್ನು ಕೇಳಿದಾಗ "ನೀವು ಬಹಳ ಮುಂದೆ ಬಂದಿದ್ದೀರಿ. ವಾಪಸ್ಸು ಹೋಗಿ ಊರಿನೊಳಗೆ ನೀವು ಎಡಗಡೆ ಚಾನಲ್ ಬಳಿ ತಿರುಗಿ ಹೋಗಿ" ಎಂದರಂತೆ. 

ಮತ್ತೆ ದಾರಿ ತಪ್ಪಿ ಬಹು ದೂರ ಬಂದು ಅಲ್ಲಿ ಕೇಳಿದಾಗ ಮತ್ತೊಂದು ಸೂಚನೆಯನ್ನು ಕೊಟ್ಟು, ಸರಿಯಾದ ವಿವರವನ್ನು ಅದ್ಯಾರೋ ನೀಡಿದರು. ಅಂತೂ ಕತ್ತಲಾಗಿಬಿಟ್ಟಿತ್ತು. ಕೊನೆಗೂ ಸರಿದಾರಿ ಸಿಕ್ಕಿತಂತೆ. ವೇದಿಕೆಯನ್ನು ದರ್ಶಿಸಿ, ವೇದಿಕೆಗೆ ವಂದಿಸಿ, ಆ ಕತ್ತಲಲ್ಲೇ ಗುರುನಾಥರ ಸ್ಮರಣೆ ಮಾಡುತ್ತಾ, ಭಜನೆ ಮಾಡಿ... ಸ್ವಲ್ಪ ಹೊತ್ತು ಧ್ಯಾನ ಮಾಡುತ್ತಾ ಕುಳಿತಾಗ ಜಗ್ಗನೆ ದೀಪಗಳು ಹೊತ್ತಿಕೊಂಡವಂತೆ. ಗುರುನಾಥರ ವೇದಿಕೆಯ ಒಳ ಹೋಗಲು ಬಂದವರು ಬಾಗಿಲು ತೆರೆದರಂತೆ. ಮತ್ತಷ್ಟು ಹೊತ್ತು ಅಲ್ಲಿ ಕುಳಿತು ನಂತರ ಅಲ್ಲಿಂದ ಬರಲಾರದೇ ಹೊರಟು ಬಂದರಂತೆ ಆ ನೀರವ ಪರಿಸರ, ಗುರುನಾಥರ ವೇದಿಕೆಯ ಸಾನ್ನಿಧ್ಯ ಅವರ ಮನಕ್ಕೆ ಒಂದು ಸಾಂತ್ವನ ನೀಡಿತ್ತಂತೆ. ಗುರುನಾಥರನ್ನು ಕಾಣಲಾಗಲಿಲ್ಲವಲ್ಲ ಎಂಬ ನೋವಿಗೊಂದು ಈ ದರ್ಶನ ಮುಲಾಮಾಯಿತಂತೆ. ಅವರೆನ್ನುತ್ತಾರೆ: "ವೇದಿಕೆಯ ಬಳಿ ಬರಲೇ ನಾವಿಷ್ಟು ಬಾರಿ ತಿಳಿಯದೇ ಹಿಂದೆ ಮುಂದೆ ಓಡಾಡಬೇಕಾಯಿತು. ಆದರೆ ನೋಡಲೇಬೇಕೆಂಬ ಹಠ, ಪ್ರೀತಿ ಇದ್ದುದ್ದರಿಂದ ಆ ಕತ್ತಲಲ್ಲೂ ನಮ್ಮನ್ನು ಸರಿದಾರಿ ತೋರಿಸಿ, ವೇದಿಕೆಯ ಬಳಿ, ಒಳಗೆ ನಮ್ಮನ್ನು ಗುರುನಾಥರು ಕರೆದುಕೊಂಡರು. ಸದ್ಯ ನಮಗಿದೇ ಸಿಕ್ಕ ಬಹು ದೊಡ್ಡ ಭಾಗ್ಯ" ಎಂದು ಸಂತಸ ಪಟ್ಟ ಅವರು ಗುರುನಾಥರು ಜೀವಿತರಾಗಿದ್ದ ಕಾಲದಲ್ಲಿ ನಾವು ಅವರನ್ನು ಕಾಣಲು ಸರಿಯಾದ ಪ್ರಯತ್ನವನ್ನೇ ಮಾಡಲಿಲ್ಲವೇನೋ ಎಂದು ಪೇಚಾಡುತ್ತಾರೆ. ಗುರುದರ್ಶನ ಅಷ್ಟು ಸುಲಭವೇ? ಗುರು ನರನಾಗಿ ಬಂದಾಗ ಅರಿಯುವುದು ಬಲು ದುಸ್ತರ. 

ಮತ್ತೊಮ್ಮೆ ಈ ಭಕ್ತರು ಒಂದು ಗಣಹೋಮಕ್ಕೆ ಹೊರಟಿದ್ದರು. ಗಣ ಹೋಮಕ್ಕೆ ಸೇರಿದವರೆಲ್ಲಾ ಗುರುನಾಥರ ಭಕ್ತರೇ ಎಲ್ಲಿಂದಲೋ ಕಬ್ಬು ಬರುತ್ತದೆಂದು ನಂಬಿದ್ದ ಅವರಿಗೆ ಕಬ್ಬು ಸಿಕ್ಕಿರಲಿಲ್ಲ. ಬೆಳವಾಡಿಗೆ ಈ ಹೋಮಕ್ಕೆಂದೇ ಹೊರಟ ಇವರಿಗೆ ಕಬ್ಬು ತರಲು ಫೋನು ಬಂತು. ಆಗಲೇ ಬೀರೂರಿನ ಬಳಿ ಬಂದ ಇವರು, ಬೀರೂರು, ಕಡೂರು, ಸಖರಾಯಪಟ್ಟಣಗಳಲ್ಲೆಲ್ಲಾ ಕಬ್ಬಿಗಾಗಿ ಹುಡುಕಾಡಿದರು. ಎಲ್ಲೂ ಕಬ್ಬು ಸಿಕ್ಕಿರಲಿಲ್ಲ. ಸಖರಾಯಪಟ್ಟಣದಲ್ಲೂ ಎಲ್ಲೂ ಕಬ್ಬು ಕಾಣಲಿಲ್ಲ. ಕಬ್ಬು ಬೆಳೆವ ಕೆಲವರಿಗೆ ಫೋನು ಮಾಡಿದರೂ ಏನೂ ಉಪಯೋಗವಾಗಲಿಲ್ಲ. ಕೊನೆಗೆ ಗುರುನಾಥರಿಗೆ ಕೈಮುಗಿದು ನಮ್ಮ ಪ್ರಯತ್ನ ಮುಗಿದಿದೆ. ಗುರುವೇ ನಿನ್ನ ಇಚ್ಛೆಯಂತೆ ಆಗಲಿ ಎಂದು ಮನಸ್ಸಿನಲ್ಲೇ ಬೇಡಿದರಂತೆ. 

ಅಲ್ಲಿ ಆಗಲೇ ಹೋಮ ಪ್ರಾರಂಭವಾಗಿತ್ತಂತೆ. ಚಿಕ್ಕಮಗಳೂರಿಗೆ ಹೋಗಿ ತರುವಷ್ಟು ಸಮಯವೂ ಇರಲಿಲ್ಲ. ಕಾರು ಓಡುತ್ತಿತ್ತು. ಸಖರಾಯಪಟ್ಟಣದಿಂದ ಸ್ವಲ್ಪ ದೂರದಲ್ಲಿ ಒಂದು ಕಬ್ಬಿನ ಗದ್ದೆಯಲ್ಲಿ ನಾಲ್ಕು ಕಬ್ಬಿಣ ಜಲ್ಲೆಗಳು ನಿಂತಿದ್ದವು. ಅದೇಕೆ ಕಡಿದಿರಲಿಲ್ಲವೋ. ಅಲ್ಲಿದ್ದ ವ್ಯಕ್ತಿಯನ್ನು ಕೇಳಿದಾಗ "ಹೋಮಕ್ಕಾ ಸ್ವಾಮಿ, ತೆಗೆದುಕೊಂಡು ಹೋಗಿ ಸ್ವಾಮಿ. ದೇವರ ಕಾರ್ಯಕ್ಕೆ ಇದು ಬಂದಿತಲ್ಲ" ಎಂದು ತುಂಬಾ ಪ್ರೀತಿ, ಭಕ್ತಿಯಿಂದ ಹಣ ಪಡೆಯದೇ ಕೊಟ್ಟು ಬಿಟ್ಟನಂತೆ. 

ಮುಂದೆ ಬೆಳವಾಡಿಯಲ್ಲಿ ಗುರುನಾಥರ ಊರಿನ ಈ ಪ್ರೆಶ್ ಕಬ್ಬು ಸಿಕ್ಕ ವಿಚಾರ ತಿಳಿಸಿದಾಗ ಅವರಿಗಾದ ಸಂಭ್ರಮ ಅಷ್ಟಿಷ್ಟಲ್ಲ. ಎಲ್ಲಿಯದೋ ಕಡಿದಿಟ್ಟ ಹಳೆಯ ಕಬ್ಬು ಸಲ್ಲದೆಂದು ಗುರುನಾಥರೇ ತಮ್ಮ ಊರಿನ ಈ ಅತ್ಯುತ್ತಮ ಕಬ್ಬನ್ನು ಗಣ ಹೋಮಕ್ಕೆ ಕಳಿಸಿದ್ದಾರೆಂದು ಅತ್ಯಂತ ಸಂತಸ ಭಕ್ತಿಗಳಿಂದ ಗುರುನಾಥರನ್ನು ಕೊಂಡಾಡುತ್ತಾ ಹೋಮ ಮಾಡಿದರಂತೆ. ಗುರುನಾಥರು ಏನು ನೀಡಿದರೂ ಅದು ಉತ್ತಮವಾದದ್ದು, ಭಾರಿಯಾಗಿರುವುದು ಅವರ ನೀಡಿಕೆಯ ವಿಶೇಷ. 

ಪ್ರಿಯ ಗುರುವಿನ ಬಾಂಧವ ಸತ್ಸಂಗಾಭಿಮಾನಿಗಳೇ, ನೋಡಿ ಹೇಗಿದೆ ಗುರು ಶಕ್ತಿ, ಗುರು ಭಕ್ತಿ, ನಂಬಿಕೆ ಅಲ್ಲವೇ? ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ ಗುರು ಕಥಾನಕವನ್ನು ಆಸ್ವಾದಿಸಲು..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 51


ಧರೆಯೊಳಗೆ ಕಲಿರಾಜನಾಳಿಕೆ । ಯಿರುವುದೆನುತಲಿ ನೋಡಿ ಗುಪಿತದೋ ।
ಳಿರುವೆನೆಂದನು ಗುರುವು ಕೇಳೈಯಂತ್ಯ ಪ್ರಕರಣದಿ  || 51 ||

ಮುಂದೆ ಗುರುವಿಗೆ ತಾನು ಗುಪ್ತದಲ್ಲಿರಬೇಕು. ಕಾಳಿ ಪ್ರಭಾವ ಅಧಿಕವಾಗಿದೆ ಎಂದು ತನ್ನ ಶಿಷ್ಯರನ್ನೆಲ್ಲಾ ಕರೆದು "ನಾನು ಮಲ್ಲಿಕಾರ್ಜುನ ಗಿರಿಗೆ ಹೋಗುತ್ತಿದ್ದೇನೆ" ಎಂದಾಗ ಊರವರೆಲ್ಲಾ ಅಳತೊಡಗುತ್ತಾರೆ. ಗುರುವಿಗೆ ಹೋಗದಿರೆಂದು ಬೇಡುತ್ತಾರೆ. ಕರುಣಾಸಾಗರರಾದ ಗುರುವು ಚಿಂತೆ ಬೇಡ. ನಿತ್ಯ ಸಂಗಮಕ್ಕೆ ಸ್ನಾನಕ್ಕೆ ಬರುವೆ. ಮಧ್ಯಾನ್ಹದಿ ಗಾಣಗಾಪುರಕ್ಕೆ ಭಿಕ್ಷೆಗೆ ಬರುವೆ. ನಿರಂತರ ನನ್ನ ವಾಸ ಗಾಣಗಾಪುರ ಮಠದಲ್ಲಿ ಗುಪ್ತದಲ್ಲಿ. ನೋಡುವ ಸಾಮಾನ್ಯರಿಗೆ ಇದು ಶ್ರೀ ಗಿರಿಗೆ ಪ್ರವಾಸ. ಚಿಂತೆ ಮಾಡಬೇಡಿ. ನಾನು ಭಕ್ತ ಪರಾಧೀನ. ನಿಮ್ಮ ಭಕ್ತಿಗೆ ನಾನಿಮ್ಮ ಬಳಿಯೇ ಇರುತ್ತೇನೆ ಎಂದು ಎಲ್ಲರನ್ನೂ ಹರಸಿ ಕಳಿಸುತ್ತಾರೆ. ಶ್ರೀ ಗುರು ನರಸಿಂಹ ಸರಸ್ವತಿಗಳಿಗೆ ಅಪಾರ ಭಕ್ತ ವೃಂದವಿದ್ದಿತು. ಕೃಷ್ಣ ಬಾಲ ಉಪೇಂದ್ರ ಮಾಧವ ಯತಿಗಳು, ಇವರು ಗುರು ನಿರೂಪದಂತೆ ತೀರ್ಥಯಾತ್ರೆಗೆ ನಡೆದಿದ್ದರು. ಬಹಳ ಶಿಷ್ಯರು ಊರೊಳಿದ್ದರು. ನಂದಿ, ನರಹರಿ, ಸಾಕರೆ ಹಾಗೂ ನಾನು ಸಿದ್ಧಮುನಿ, ನಾವು ನಾಲ್ವರು ಪುಷ್ಪಾಸನದಲ್ಲಿ ಗುರುಗಳನ್ನು ಕೂರಿಸಿ ಶ್ರೀ ಗಿರಿಗೆ ಕಳಿಸಿದ್ದೆವು. ಅಷ್ಟರಲ್ಲಿ ನದಿ ತೀರದಲ್ಲಿದ್ದ ನಮ್ಮ ಬಳಿ ಬಂದ ನಾವಿಕನೊರ್ವನು - ಗುರುಗಳು ಪ್ರಸಾದ ಕಳಿಸುತ್ತಾರಂತೆ ಎಂದು ಹೇಳಿ ನದಿಯಲ್ಲಿ ತೇಲಿ ಬಂದ ಪುಷ್ಪಮಾಲೆಯನ್ನು ನಮಗೆ ತೆಗೆದುಕೊಟ್ಟರು. ನೋಡು ಇದೇ ಆ ಪುಷ್ಪ ಎಂದು ಸಿದ್ಧ ಮುನಿಯು ನಾಮಧಾರಕನಿಗೆ ತೋರಿಸುವುದೇ ಐವತ್ತೊಂದನೆಯ ಅಧ್ಯಾಯ. 

ಮುಂದುವರಿಯುವುದು...
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸ್ವೀಕೃತ್ಯ ಚ ಭಾವಭಿಕ್ಷಾಂ
ಪೂರಯತಿ ಮನೋರಥಾನ್ |
ಭಕ್ತಕಲ್ಪದೃಮಂ ವಂದೇ
ವೇಂಕಟಾಚಲಸದ್ಗುರುಮ್ ||

ಭಕ್ತರ ಭಾವನೆ ಎಂಬ ಭಿಕ್ಷೆಯನ್ನು ಸ್ವೀಕರಿಸಿ ಅವರ ಮನೋರಥಗಳನ್ನು ಈಡೇರಿಸುವ ಭಕ್ತಕಾಮಕಲ್ಪಧೃಮನಾದ ಗುರುನಾಥನಿಗೆ ನಮ್ಮ ನಮಸ್ಕಾರ. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು