ಒಟ್ಟು ನೋಟಗಳು

Wednesday, November 28, 2018

ಗುರುನಾಥ ಗಾನಾಮೃತ 
ಎಲ್ಲಾ ಅರಿತಿರುವ ನಿನ್ನನು ನಾ ಬೇಡುವುದೆಂತೋ
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲಾ ಅರಿತಿರುವ ನಿನ್ನನು ನಾ ಬೇಡುವುದೆಂತೋ
ನಿನ್ನರಿವಿಗೆ ಬಾರದೆ ನಾ ಬದುಕು ನಡೆಸುವುದೆಂತೋ|

ಕಪಟ ತುಂಬಿದ ಮನವಿದು ಹಿಡಿತಕೇ ಬಾರದೆ ಓಡುವುದೋ
ನಿನ್ನ ನೆನೆದಾಗ ಮಾಡಿದ ತಪ್ಪಿನ ಅರಿವಾಗಿ ಮರುಗುವುದೋ|

ಎನ್ನ ಮನ್ನಿಸೆಂದು ಎಷ್ಟು ಸಾರಿ ಕೂಗಿ ಬೇಡುವುದೋ ಅರಿಯಲಾರೆ
ನೀ ಕರುಣದಿ ಮನ್ನಿಸಿದರೂ ಸ್ವಾರ್ಥದ ಬೆನ್ನತ್ತಿ ಓಡದೆ ಇರಲಾರೆ|

ನಿನ್ನ ಅಂಗಳದಲಿ ನಿಂತ ಎನಗೆ ಮೇಲೂ ಕೀಳೆಂಬ ಭಾವವಿಲ್ಲಾ
ಅಂತರಾಳದಲಿ ತುಂಬಿದ ಬೇರೆ ಎಂಬ ಭಾವದಲಿ ನಾ  ಸೋತೆನಲ್ಲಾ|

ನಾನು ಎಂಬುದು ಎನ್ನ ಬಿಡದೆ ಕಾಡಿದೆಯಲ್ಲಾ ಗುರುವೇ
ಎಲ್ಲಾ ನೀನೆಂಬ ಭಾವ ಮನದಿ ತುಂಬಿ ಎನ್ನ ಹರಸು ಗುರುವೇ|

Wednesday, November 21, 2018

ಗುರುನಾಥ ಗಾನಾಮೃತ 
ಹೊರಟಿಹೆನು ನಾನು ಗಾಣಗಾಪುರವೆಂಬ ಭೂ ಕೈಲಾಸಕೆ 
ರಚನೆ: ಆನಂದರಾಮ್, ಶೃಂಗೇರಿ  


ಹೊರಟಿಹೆನು ನಾನು ಗಾಣಗಾಪುರವೆಂಬ ಭೂ ಕೈಲಾಸಕೆ
ಸಕರಾಯಧೀಶನ  ಅನುಮತಿ ಬೇಡಿ ಮುನ್ನಡೆದಿಹೆನು ಪುಣ್ಯ ಲೋಕಕೆ|

ಇಲ್ಲೇ ಬಾ ಎಂದಿಹನು ಹರಸುವನು ಕಳೆಯುವನು ಕರ್ಮವನು 
ಭವ  ಬಂಧನವ ಕಳೆವನು ಮುಕುತಿಯ ದಾರಿಯ ತೋರುವನು|

ಸುಲಭದಿ ದೊರೆವುದಿಲ್ಲಾ ಗುರುವಿನ ಕರುಣೆಯು ನೀ  ಅರಿಯೊ
ನೀಡಿಹನು ಸಕರಾಯಧೀಶನು ಒಂದವಕಾಶವನು ಮಹಾದೇವನು|

ಬರೀ ಬೇಡುವುದೊಂದೆ ಕಾಯಕವಲ್ಲಾ ನೀಡುತ  ಬದುಕೆಂದನು 
ದಿವ್ಯ ಗುರು ಸನ್ನಿಧಿಯಿದು ಮಲಿನ ಮನವ  ಹಸನು ಮಾಡಿ ಬದುಕೆಂದನು |
ಗುರುನಾಥ ಗಾನಾಮೃತ 
ಎಂದು ಬರುವೆ ಗುರುನಾಥ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಎಂದು ಬರುವೆ ಗುರುನಾಥ
ನಮ್ಮ ಮನೆಯ ಅಂಗಳದೊಳಗೆ |
ಎಂದು ನೆಲೆಸುವೆ ಗುರುನಾಥ
ನಮ್ಮ ಮನಸಿನ ಗುಡಿಯೊಳಗೆ ||

ಹೊರಗಣ್ಣ ಜ್ಯೋತಿಯಲಿ 
ಒಳಗಣ್ಣ ಕಾಂತಿಯಲಿ
ನೋಡುವೆನೊಮ್ಮೆ ನಿನ್ನ ದಿವ್ಯಮೂರ್ತಿಯ |
ಬಹಿರಂಗದ ಮಾತಿನಲಿ 
ಅಂತರಂಗದ ಮೌನದಲಿ
ಕಾಣುವೆನೊಮ್ಮೆ ನಿನ್ನ ಭವ್ಯಮೂರ್ತಿಯ || ೧ ||

ಸುಂದರ ಸಗುಣ ರೂಪದಲಿ
ನಿರಾಕಾರ ನಿರ್ಗುಣ ಸ್ವರೂಪದಲಿ
ದರ್ಶಿಪನೊಮ್ಮೆ ನಿನ್ನ ತೇಜೋಮೂರ್ತಿಯ |
ಅಂತರ್ಮುಖಿಯ ಸ್ತಬ್ಧತೆಯಲಿ
ಬಹಿರ್ಮುಖಿಯ ಚೇತನದಲಿ
ಕಾಣುವೆನೊಮ್ಮೆ ನನ್ನ ಜೀವದೊಡೆಯನಾ || ೨ ||

Friday, November 9, 2018

ಗುರುನಾಥ ಗಾನಾಮೃತ 
ಬಂದೆನೋ ಬೃಂದಾವನಕೆ ಸಕರಾಯಧೀಶನ ಆಸ್ಥಾನಕೆ 
ರಚನೆ: ಆನಂದರಾಮ್, ಶೃಂಗೇರಿ  


ಬಂದೆನೋ ಬೃಂದಾವನಕೆ  ಸಕರಾಯಧೀಶನ ಆಸ್ಥಾನಕೆ 
ಬಕುತರ ಅನುದಿನ ಸಲಹುವ ಮಹಾದೇವನ ಮನೆಯಂಗಳಕೆ|

ಮನವು ಕಂಡಿತು ಅನುಪಮ ಶಾಂತಿಯ ಅವನ ಸನಿಹ ಬಂದಾಗ
ಮೂಡಿತು ಮನದಿ ಮುದದ ಅನುಭವ  ಬೃಂದಾವನ
ಕಂಡಾಗ| 

ಹೊತ್ತು ಬಂದಾಗ ಬವಣೆಗಳ ಕಂತೆ ನಿರಾಳವಾಯಿತು ಗುರುವ ಕಂಡಾಗ
ಮುಸುಕಿದ  ಮಂಜು ಕರಗಿದಂತೆ ಮನದ ನೋವು ಅಳಿಸಿ ಹೋದಾಗ|

ಮಂತ್ರ ವೇದಗಳ  ಪಠಿಸದೆ ಒಲಿವನು ಗುರುವು ಮನ ಶುದ್ದಿಯಾದಾಗ
ಹರಸುವನು ಗುರುವು ಹೃದಯದಲಿ ಹಂಬಲದ ಭಕ್ತಿ ತೋರಿದಾಗ|

ಎಲ್ಲರೊಳು ಅವನ ಕಂಡಾಗ  ನಾನೆಂಬ ಬಾವ ಕರಗಿ ಹೋದಾಗ
ಅರಿವಿಲ್ಲದೆ ಬಕುತರ ಸಲಹುವನು ಕಷ್ಟ ಬಂದು ಮರುಗಿದಾಗ|
ಗುರುನಾಥ ಗಾನಾಮೃತ 
ಏನೂ ಅರಿಯದಾದೆನೋ ಗುರುವೇ ಏನೂ ತಿಳಿಯದಾದೆನೋ
ರಚನೆ: ಆನಂದರಾಮ್, ಶೃಂಗೇರಿ  


ಏನೂ ಅರಿಯದಾದೆನೋ ಗುರುವೇ ಏನೂ ತಿಳಿಯದಾದೆನೋ
ನಿನ್ನ ಬಜಿಸುವ ಪರಿ ತಿಳಿಯದಾದೆನೋ  ದಾರಿ ತೋರಿ ಹರಸು ಎನ್ನನು|

ಮನವ  ನಿಲ್ಲಿಸಿ ನಿನ್ನ ನೆನೆವ ರೀತಿ ಎನಗೆ ತಿಳಿಯದಾಯಿತೋ
ಕೂಗಿ ಕರೆವ ಬಕುತಿ ತೋರಿ ನಿನ್ನ ಬಜಿಸಲಾರೆನೋ ಗುರುವೇ|

ಆಡಂಬರದ ಬಕುತಿ ತೋರಲಾರೆನೋ ನಿಜ ಬಕುತಿಯ ಅರಿಯಲಾರೆನೋ
ಮಲಿನ ಮನವ ಶುದ್ದಿ ಮಾಡಿ ನಿನ್ನ ಬಜಿಸುವ ಶುದ್ದ ಮನವ ನೀಡಲಾರೆಯಾ|

ಕಾಮ ಮೋಹ ತುಂಬಿ ತನುವು ಮನವು ಹಳಸಿ ಹೋಗಿದೆ
ಕಪಟ ಕುಹುಕ ಬಾವ ತುಂಬಿ ಹೃದಯ ಬಲು ಬಾರವಾಗಿದೆ|

ಮಂದ ಮತಿಯು ನಾನು ಪೊಳ್ಳು ಮಾತುಗಳ ಆಡುತಿಹೆನೋ
ಪಾಮರನು ನಾನು ನಿತ್ಯ ಬದುಕ ಬವಣೆ ಮೀರಿ ನಿಲ್ಲಲಾರೆನೋ|

ಎಲ್ಲರ ಸಲಹುವ ಗುರುವೇ ನಮ್ಮ ಮಹಾದೇವ ನೀನಲ್ಲಾವೇನು|
ಸಕರಾಯಪುರದ ಅರಸನು ನೀನು ಕರುಣಿಸಿ ಹರಸು ಎನ್ನನು|

Sunday, November 4, 2018

ಗುರುನಾಥ ಗಾನಾಮೃತ 
ತುಸು ಸಾದಿಸಿದೆ ಎಂಬ ಹಂಬಿನಲಿ ನಿನ್ನ ನೆನೆವುದ ಮರೆತೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ತುಸು ಸಾದಿಸಿದೆ ಎಂಬ ಹಂಬಿನಲಿ ನಿನ್ನ ನೆನೆವುದ ಮರೆತೆ ಗುರುವೇ
ಬದುಕಿನ ಹಾದಿಯೊಳು ಬರುವ ಕಂದಕದಲಿ ಬಿದ್ದಾಗ ನಿನ್ನ ನೆನೆದೆ ಗುರುವೇ|

ಆಡುವ ಮಾತಿನೊಳು ಹಿಡಿತವಿಲ್ಲದೆ ಮನ ನೋಯಿಸಿ ಬದುಕಿದೆ
ನೋಡುವ ನೋಟದಲೂ ಕಪಟ ತುಂಬಿ ಮನ ಮಲಿನವಾಗಿ ನಲುಗಿದೆ ಗುರುವೇ|

ಬಕುತಿಯ ಮಾಡದೇ ನಿನ್ನ ಬೇಡಿ ಬರುತಿಹೆನು ಗುರುವೇ
ನಿಸ್ಸಹಾಯಾಕನು ನಾನು ಮೋಹದ ಬಲೆಯೊಳು ಸಿಲುಕಿ ಹೋದೆನು ಗುರುವೇ|

ನಾನು ನಾನೆಂಬ ಬಾವದೊಳು ಶೂನ್ಯ ಸಾದನೆಯು ನನ್ನದು ಗುರುವೇ
ನಿನ್ನ ಅರಿವ ಪಡೆವ ಬರದಲಿ ಇಡುವ ಹೆಜ್ಜೆಯು ಸರಿ ಇಲ್ಲ ಗುರುವೇ|

ನಿತ್ಯ ನಿರಂತರ ನಿನ್ನ ಸೇವಿಸಿ ಬದುಕು ನಡೆಸುವ ಪರಿ ತಿಳಿಸೋ ಗುರುವೇ
ನಿನ್ನ ಹೊರತು ಬೇರೇನೂ ಬೇಡೆ0ಬ ಬಾವವು ನನ್ನಲಿ ತುಂಬು ನೀ ಗುರುವೇ|
ಗುರುನಾಥ ಸ್ತೋತ್ರ  ಕುಸುಮಾಂಜಲಿ 



ದೇಹೋ ದೇವಾಲಯಃ ಪ್ರೋಕ್ತಃ
ಆತ್ಮಾ ತು ದೇವತಾ ಪೂಜ್ಯಃ |
ದೇಹೋ ಪೀಡ್ಯತೇ ರೋಗೇಣ
ಸಃ ದೀಪ್ಯತೇ ಸಾಧನಯಾ ||

ಪಂಚಭೂತಾತ್ಮಕವಾದ ಈ ಶರೀರವೇ ದೇಗುಲ. ಇದರಲ್ಲಿರುವ ದೇವತೆಯೇ ಆತ್ಮ.ದೇಹಕ್ಕೆ ಆಧಿವ್ಯಾಧಿಗಳಿಂದ ಬಾಧಕವಿದ್ದರೆ ಆತ್ಮವು ನಿರಂತರ ಸಾಧನೆಯಿಂದ ಪ್ರಕಾಶಮಾನವಾಗಿ ಬೆಳಗುತ್ತದೆ.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Sunday, October 14, 2018

ಗುರುನಾಥ ಗಾನಾಮೃತ 
ಗುರುಕರುಣೆಯೇ ಸತ್ಯ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುಕರುಣೆಯೇ ಸತ್ಯ 
ಅದನರಿಯುವ ನಿತ್ಯ ।।

ಕಷ್ಟವಿರಲಿ ಸುಖವಿರಲಿ‌
ಪೊರೆವ ಸದಾ ಕಣ್ರೆಪ್ಪೆಯಂತೆ ।
ದಟ್ಟಾಡವಿಯಲಿರಲಿ ಬಟ್ಟ ಬಯಲಲಿರಲಿ
ಸಲಹುವ ಸದಾ ತಾಯಿಯಂತೆ ।। ೧ ।।

ನಮ್ಮೆಲ್ಲಾ ನೋವು ಸಂಕಟಗಳು
ಗುರುವಿಗೆ ಅರಿವುಂಟು ।
ಮನವು ಪಕ್ವವಾದಾಗ ಅವ ಕೊಡುವ
ಫಲದಲಿ ಸುಖವುಂಟು ।। ೨ ।।

ಹೇಳಿಸಿಕೊಳ್ಳದೆ ಕೊಟ್ಟುಬಿಡುವನು
 ನಮಗೆ ಸೌಭಾಗ್ಯವನು ।
ನೋಯಿಸದೆ ಉಣಿಸಿಬಿಡುವನು 
ಮಧುರ ಪೀಯೂಷವನು ।। ೩ ।।

ಅವನ ಅಮೃತ ದೃಷ್ಟಿಯಲಿ
ಮೇಲುಕೀಳೆಂಬ ಭಾವವಿಲ್ಲ ।
ಅವನ ದರ್ಬಾರಿನಲಿ
ಬಡವ ಬಲ್ಲಿದನೆಂಬ ಭೇದವಿಲ್ಲ ।। ೪ ।।

ಗುರುನಾಮಕಿಂತ ಮಿಗಿಲಾದ 
ಅನ್ಯ ತಪವು ಇಲ್ಲ ।
ಗುರುತೋರಿದ ದಾರಿಗಿಂತ 
ಬೇರೆ ದಾರಿಯು ಇಲ್ಲ ।। ೫ ।।
ಗುರುನಾಥ ಗಾನಾಮೃತ 
ಶ್ರೀಪಾದನನು ನೆನೆಯದ ಮನವು ಯಾಕೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಶ್ರೀಪಾದನನು ನೆನೆಯದ ಮನವು ಯಾಕೆ
ಗುರುಪಾದವನು ನಮಿಸದ ಜೀವ ಯಾಕೆ ।।

ಇಹದ ಸುಖವನು ಬೇಡುವ ಕೈಗಳೇಕೆ
ದಾನವ ಮಾಡದ ಸಿರಿತನವೇಕೆ ।
ಗುರುಮೂರುತಿಯ ಕಾಣದ ಕಂಗಳು ಯಾಕೆ
ಅವರ ಮಾತನು ಆಲಿಸದ ಕಿವಿಗಳು ಯಾಕೆ ।। ೧ ।।

ಶ್ರೀಚರಣಕೆ ಬಾಗದ ಶಿರವು ಏಕೆ
ಗುರುವನು ಪೊಗಳದ ನಾಲಿಗೆ ಏಕೆ ।
ಶಬ್ದಗಳಲಿ ಅವನ ಕಾಣದ ಪಾಂಡಿತ್ಯವೇಕೆ
ಜೀವದೊಡೆಯನ ಸದಾ ಸ್ಮರಿಸದ ಜನುಮವೇಕೆ ।। ೨ ।।

ಸ್ಥಿರಚಿತ್ತವಿರದ ತಪವು ಯಾಕೆ
ಗಣನೆಯೇ ಮಾಡುವ ಜಪವು ಯಾಕೆ ।
ಆಚಾರವಿಲ್ಲದ ನಾಲಿಗೆ ಏಕೆ
ಸ್ಥಿರಮುಕ್ತಿಸುಖವ ಬೇಡದ ಜೀವನವೇಕೆ ।। ೩ ।।
ಗುರುನಾಥ ಗಾನಾಮೃತ 
ಗಡ್ಡಧಾರಿ  ಇವನು ತುಂಡು ದಟ್ಟವನು  ಉಟ್ಟವನು ಯೋಗಿ ಇವನು
ರಚನೆ: ಆನಂದರಾಮ್, ಶೃಂಗೇರಿ  


ಗಡ್ಡಧಾರಿ  ಇವನು ತುಂಡು ದಟ್ಟವನು  ಉಟ್ಟವನು ಯೋಗಿ ಇವನು
ಶಿವನ ಅವತಾರ ಇವನು ಎಲ್ಲೆಲ್ಲೂ ಇಹನು ಇವನೇ ಸಾಂಬಶಿವನು|

ಇಲ್ಲೇ ಇರುವನೆಂದು ಬಲು ಕಾತುರದಿ ಕಾಣಲು ಬಂದಾಗ ಕಾಣನಿವನು
ಕರ್ಮ ಕಳೆಯದೆ ದರುಶನವೀಯನು ಅವನ  ಅಣತಿ ಇಲ್ಲದೆ  ಸಿಗನಿವನು|

ಪೊಳ್ಳು ಬಕುತಿಗೆ ಎಂದೂ ಒಲಿಯನು ನಿಜ ಬಕುತಿಗೆ ಸುಲಭನಿವನು ।
ಆಡಂಬರವ ಬೇಡನಿವನು ಸಹಜ ಪ್ರೀತಿಗೆ  ಸದಾ  ಒಲಿಯುವನು|

ಮರುಗುವನು ಬಕುತರ ಬವಣೆಗೆ ಸದಾ ಅವರ ಕಾಯ್ವನು
ಶುದ್ದ ಮನದಿ ಬದುಕ ನಡೆಸಿ ಅನ್ಯರ ವಿಚಾರ ಬೇಡವೆಂದನು|

ಸಾಧನೆ ಬಯಸಿ ಬರುವ ಭಕುತಗೆ  ತನ್ನದೆಲ್ಲ ಧಾರೆಎರೆಯಲು ಸಿದ್ದನಿವನು
ಲಾಕಿಕ ಬದುಕಿನ ಬವಣೆ ನೀಗುತ ಜೀವನದ ಅರ್ಥ ತಿಳಿಸಿದನಿವನು|

ಮನ್ನಿಸುವನು ಪಾಮರರನು ಎಚ್ಚರಿಸಿ  ಉದ್ದರಿಸಿ ಹರಸಿ ಕಲಿಸುವನು
ಭವರೋಗ ವೈದ್ಯನಿವನು ಸಕಲ ಜೀವಿಗಳ  ಸಲಹಿ ಹರಸುವನು|
ಗುರುನಾಥ ಗಾನಾಮೃತ 
ನಾನು ಭಜಿಸುವೆ ನನ್ನ ಗುರುದೇವನ ಆನಂದಘನನ ಅವಧೂತನ
ರಚನೆ: ಆನಂದರಾಮ್, ಶೃಂಗೇರಿ  


ನಾನು ಭಜಿಸುವೆ ನನ್ನ ಗುರುದೇವನ ಆನಂದಘನನ ಅವಧೂತನ
ಕಾಲಾತೀತನ ದೇಹಾತೀತನ ಸರ್ವ ದುರಿತ ಪರಿಹಾರಕನ ಗುರುವರನ|

ಪೂಜಿಪ ಪರಿ ಅರಿಯದೆ ಮನ ಹೇಳುವಂತೆ ನಿನ್ನ ಪೂಜಿಸುವೆನು
ಮನದಾಳದ ನೋವುಗಳ ಬದಿಗಿರಿಸಿ ಶುದ್ದ ಮನದಿ ನಿನ್ನ ಬೇಡುವೆನು|

ವಿಧಿಯ ಅದಿಪತಿಯ ಕುಕರ್ಮ ಪರಿಹಾರಕನ ಮನ ತುಂಬಿ ಪಾಡುವೆನು
ಸುಲಭದಲಿ  ಕಷ್ಟಗಳ ಹೊಡೆದೋಡಿಸಿ ಭಕ್ತರ ಕಾಯುವವನ ನೆನೆವೆನು|

ಎಲ್ಲರಾಗುರು ಇವನು ಬೇಧವ ತೋರನು ತನ್ನವರೆಂದು ಸಲಹುವನು
ಮೆಚ್ಚಿದ ಬಕುತರ ಸಲಹಲು ಸಮಯವ ನೋಡದೆ ಅಲ್ಲೇ ದರುಶನ ನೀಡುವನು|

ಭಾವುಕ ಬಕುತರ ಮನದೊಳು ತಾ ನೆಲೆಸಿ ಆನಂದವ ನೀಡುವನು
ನಿಜ ಭಕುತರ ಸಂಗದಿ ತಾ ಇದ್ದು ಮುಕುತಿಯ ದಾರಿಯ ತೋರುವನು|
ಗುರುನಾಥ ಗಾನಾಮೃತ 
ಎಲ್ಲವೂ ಅವನದೆಂದಿರಿ ಕಾಣುವ ಮತ್ತೆಲ್ಲಾ ಮಿಥ್ಯವೆಂದಿರಿ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲವೂ ಅವನದೆಂದಿರಿ ಕಾಣುವ ಮತ್ತೆಲ್ಲಾ ಮಿಥ್ಯವೆಂದಿರಿ ಗುರುವೇ
ನಿಮ್ಮ ನಂಬಲು ಬೇರಾವ ಸತ್ಯದ ಅರಿವಿನಗೊಡವೆ ಎನಗೆ ಬೇಡ ಗುರುವೇ|

ನನ್ನದೆಂಬುದು  ಬರೀ ಭ್ರಮೆಯು ಎರಡೂ ಒಂದಾದಾಗ  ಏನೂ ಇಲ್ಲವೋ
ಗುರುವಾಕ್ಯ ಹೊರತು ಬೇರೇನು ಬೇಡವೋ ಎಮಗೆ ನೀವೇ ಎಲ್ಲವೂ|

ಎಂಟು ಮೆಟ್ಟಿಲ ಏರಿ ಗುರುಕರುಣೆ ತೋರಿದೊಡೆ ಎಲ್ಲಾ ಲೀನವೋ
ಸದ್ಗುರು ದೊರೆತು ಕೈ ಹಿಡಿದು ಅಹಂ ಅಳಿಸಿದೊಡೆ ಅವನಲೇ ಎಲ್ಲವೂ|

ಶುದ್ದ ಮನವೊಂದೆ ಮಹಾದೇವನಿಗೆ ಪ್ರಿಯವೆಂದಿರಿ ಗುರುವೇ
ಎನ್ನ ಮನದ ಮಾತಿನಲಿ ನಿತ್ಯ ನಿನದೇ ಧ್ಯಾನ ತುಂಬಿರಲಿ ಗುರುವೇ|

ಬೇಡುವ ಮನದಾಳದಿ ತುಂಬಿರಲಿ ನಿಸ್ವಾರ್ಥದ  ಬೇಡಿಕೆಗಳು
ಉಸಿರು ಉಸಿರಲೂ ತುಂಬಿರಲಿ ನಿಮ್ಮ ನಾಮವು ಗುರುವೇ|

Tuesday, October 2, 2018

ಗುರುನಾಥ ಗಾನಾಮೃತ 
ನಾನೆಂತ ಮನುಜನೋ ಮನದಮಾತ ಅರಿಯದೆ ಮರುಗುತಿಹೆನೊ
ರಚನೆ: ಆನಂದರಾಮ್, ಶೃಂಗೇರಿ  


ನಾನೆಂತ ಮನುಜನೋ ಮನದಮಾತ ಅರಿಯದೆ ಮರುಗುತಿಹೆನೊ
ನಿನ್ನ ನಾಮವ ಜಪಿಸದೇ ಅಂಧನಾಗಿ ಬದುಕಬಂಡಿ ನಡೆಸಿಹೆನೋ|

ಮೂಡನಂತೆ ಅಲ್ಲಿ ಇಲ್ಲಿ ಅಲೆದು ನಿನ್ನ ಅರಿಯದಾದೆ  ತಿಳಿಯದಾದೆ
ಬಳಿಯಿದ್ದರೂ ನಿನ್ನ ಬೇಡದಲೆ  ಇನ್ನೆಲ್ಲೋ ಕಾಲ ಕಳೆದು ಸೋತುಹೋದೆ|

ಜೀವನದ ಪಾಠವ ಮನಕೆ ನಾಟುವ ನುಡಿಯಲಿ ತಿಳಿಸುತ ಹರಸಿದೆ
ಕೊಂಕು ನುಡಿಯದೇ ಬದುಕ ಡೊಂಕನು ತಿದ್ದಿ ದಾರಿ ತೋರಿದೆ|

ಬೇಡದಲೇ ಬಂದು ನೋವ ನೀಗಿ ಹರಸುವ ದೇವ ನೀನಲ್ಲವೇ
ನಿಜ ಬಕುತನ ಬದುಕ ಬವಣೆ ನೀಗಿ ಮನಶಾಂತಿ ನೀಡುವ ಗುರುವಲ್ಲವೇ|

ಗುರು ನಂಬಿ ನಡೆದು ಬದುಕ ಹಸನು ಮಾಡಿಕೊಳ್ಳಿ ಎಂದಿರಿ ನೀವು
ನಡೆ ನುಡಿಯಲಿ ನಿಗವಹಿಸಿ ಶುದ್ದ ಮನದಿ ಬದುಕ ನಡೆಸ ಬೇಕು ನಾವು|
ಗುರುನಾಥ ಗಾನಾಮೃತ 
ವರ್ಣಿಸಲೆಂತೋ ನಿನ್ನ ಮಹಿಮೆಯ ದೇವನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ವರ್ಣಿಸಲೆಂತೋ ನಿನ್ನ ಮಹಿಮೆಯ ದೇವನೇ
ಪದಗಳೇ ಸಾಲದಾಗಿದೆ ಮಹಾಮಹಿಮನೇ ||

ಮನುಜರೂಪದಿ ಕಾಣುತಿಹ ದೇವನೇ
ನಮ್ಮ ದೈವವೇ ನೀನಾಗಿರುವೆ ಪ್ರಭುವೇ |
ಅವಿದ್ಯೆಯ ಕರಗಿಸುವ ಗುರುವೇ
ಬ್ರಹ್ಮತತ್ತ್ವವ ಬೋಧಿಸುವ ಬಂಧುವೇ || ೧ ||

ಯಶೋದೆಗೆ ಕೃಷ್ಣನು ಬ್ರಹ್ಮಾಂಡ ತೋರಿದ ರೀತಿ
ಅಚ್ಯುತನು ಅರ್ಜುನಗೆ ದಿವ್ಯಕಂಗಳಾ ನೀಡಿದ ರೀತಿ |
ಅಂತರಂಗದಾ ಕಣ್ಣು ತೆರೆಯೋ ಪ್ರಭುವೇ
ಅರಿವಿನ ಸಾಕ್ಷಾತ್ಕಾರ ಮಾಡಿಸೋ ಬಂಧುವೇ || ೨ ||

Thursday, September 27, 2018

ಗುರುನಾಥ ಗಾನಾಮೃತ 
ಗುರುವೇ ಬೇಗ ಬಾರಯ್ಯಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುವೇ ಬೇಗ ಬಾರಯ್ಯಾ
ನಮ್ಮ ಮನೆಗೆ |
ಸದ್ಗುರುವೆ ಒಮ್ಮೆ ಬಾರಯ್ಯಾ
ನಮ್ಮ ಮನಕೆ ||

ಜ್ಞಾನದ ಹೆಜ್ಜೆಯನಿಡುತಾ
ಕರುಣೆಯ ದೃಷ್ಟಿಯ ಬೀರುತಾ |
ಭಕ್ತಿಯ ರಸವಾ ಚೆಲ್ಲುತಾ
ಮಂದದ ನಗೆಯಾ ಸೂಸುತಾ || ೧ ||

ಕಣ್ಣಂಚಿನಲೇ ಎಲ್ಲರ ನೋಡುತಾ
ಮನದಲ್ಲಿಯೇ ಭಕ್ತರಾ ಹರಸುತಾ |
ನಿಮ್ಮೊಡನೆ ನಾನಿರುವೆನೆಂದು ಹೇಳುತಾ
ಪ್ರತೀಕ್ಷೆಯ ಫಲವು ಉತ್ತಮವಿದೆಯೆನುತಾ || ೨ ||

ಕರ್ಮದ ಕಾಷ್ಠವಾ ದಹಿಸುತಾ
ಧರ್ಮದ ಹಾದಿಯ ತೋರಿಸುತಾ |
ಹೃದಯದಲೇ ದೈವವ ಕಾಣಿರೆನುತಾ
ಸದ್ವಿದ್ಯೆಯ ದೀಪವಾ ಬೆಳಗಿಸುತಾ || ೩ ||
ಗುರುನಾಥ ಗಾನಾಮೃತ 
ಏಕೆ ಮೌನವಾಗಿಹೆ ಗುರುವೇ ಎನ್ನ ಮೊರೆ ಕೆಳದೇ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಏಕೆ ಮೌನವಾಗಿಹೆ ಗುರುವೇ ಎನ್ನ ಮೊರೆ ಕೆಳದೇ ಗುರುವೇ
ನಿನ್ನದೇ ಧ್ಯಾನದಲಿ ಮನವು ಮುಳುಗಿಹುದು ದಯೆ ತೋರು ಗುರುವೇ|

ಚಿತ್ತವು ನಿನ್ನಲೇ ನೆಲೆ ನಿಲ್ಲಲಿ ವಿತ್ತದ ಹಿಂದೆ ಹೋಗದಿರಲಿ 
ಕಡುಬಡವನಾದರೂ ಚಿಂತೆಇಲ್ಲಾ ಬಕುತಿಯಲಿ ಸಿರಿವಂತನ ಮಾಡು ಗುರುವೇ|

ಮನವು ಬಯಸುವುದು ಲೌಕಿಕದ ಎಲ್ಲಾ ಸುಖವನು ದಿನವೂ
ಎಲ್ಲೆ ಮೀರಿ ಹೋಗದಿರಲಿ ಆಸೆಯು ನಿನ್ನ ನಿಗವು ಎನ್ನ  ಮೇಲಿರಲಿ ಗುರುವೇ|

ಸಂಸಾರ ಬಂಧನದ ಸುಳಿಯಲಿ ಸಿಲುಕಿ ನಿನ್ನ ಮರೆತನೇ  ನಾನು
ಎನ್ನ ಮನ್ನಿಸಿ ನಿನ್ನೊಳು ಎನ್ನ ಮನ ನಿಲ್ಲುವಂತೆ ಮಾಡೋ ಗುರುವೇ|

ಬಕುತಿಯ ಸೋಗಿನಲಿ ಎನ್ನ ಸ್ವಾರ್ಥವ ಮುಂದಿಟ್ಟು ನಿನ್ನ  ಬೇಡಿದೆನು
ಎನ್ನ ಮನ್ನಿಸಿ ನಿನ್ನವನೆಂದು ಕನಿಕರಿಸಿ ಹರಸೋ ನನ್ನ ಗುರುವೇ|

ಸಕಲವೂ ತಿಳಿದ ದೇವನು ಸಕರಾಯಪುರದಿ ನೆಲೆಸಿಹೆ ನೀನು
ಸಕಲ ಬಕುತರ ನಿತ್ಯವೂ ಸಲಹುವ ನೀನು ಎನ್ನನೂ ಸಲಹು ಗುರುವೇ|

ಗುರುನಾಥ ಗಾನಾಮೃತ 
ಎನ್ನ ಗುರುನಾಥನೇ ಸದಾ ಎನ್ನ ಕಾಯುವನು ಮನವೇ
ರಚನೆ: ಆನಂದರಾಮ್, ಶೃಂಗೇರಿ  


ಎನ್ನ ಗುರುನಾಥನೇ ಸದಾ ಎನ್ನ ಕಾಯುವನು ಮನವೇ
ಇನ್ನು ಯಾತಕೆ ಭಯವು ಅವನಲೇ ಲೀನನಾಗು ಮನವೇ|

ಪೊಳ್ಳು ಮಾತುಗಳ ನೀ  ನಂಬದೆ ಅವನನೇ ನಂಬು ಮನವೇ
ನಿತ್ಯ ನಿರಂತರ ಸತ್ಯವು ಅವನ ಇರುವು ಕೇಳೋ ಮನವೇ|

ಭಯ ಭೀತನಾಗಬೇಡ ಅನ್ಯರಿಗೆ ಅಂಜಿ ಬದುಕ ಬೇಡ ಮನವೇ
ನಿತ್ಯ ಅವನನೇ ನೆನೆಯುತ ಸುಂದರ ಸತ್ಯವ ನೀ ಅರಿಯೊ ಮನವೇ|

ಅವನ ಪಾದವ ಮನದಿ ತುಂಬಿ ಬಹು ಬಕುತಿಯ ಮಾಡು ಮನವೇ
ಮಕುತಿಯ ನೀಡುವ  ಆ ಪಾದವೇ ಮಹಾದೇವನ
ಪಾದ ತಿಳಿ ಮನವೇ|

ತುಂಡು ಉಡುಗೆಯ ದೊರೆಯೋ  ಮಹಾ ಮಹಿಮನೋ ಮನವೇ
ದಟ್ಟ ದಾರಿದ್ರವ ಹೊಡೆದೋಡಿಸುವ ಮಹಾ ಪುರುಷನೋ ಮನವೇ|

ಎಲ್ಲರೊಳಗೂಡಿ ತನ್ನ ಕೆಲಸವ ಮಾಡಿ ಸುಮ್ಮನಿರುವನೋ ಮನವೇ
ಹೃದಯ ತುಂಬಿ ಕೂಗಿದಾಗ ಓಗೊಡುವನೊ ಮನವೇ|

ಎನೂ ಬಯಸದ ಗುರು ಇವನು ಸರ್ವರನೂ ಕಾಯ್ವನು ಮನವೇ
ನೀ ಎತ್ತಲಾದರೂ ಸಾಗು ನಾ ಗುರುವ ನಂಬಿ ನಡೆವೆ ಓ ನನ್ನ ಮನವೇ|