ಒಟ್ಟು ನೋಟಗಳು

Monday, February 10, 2020

ಮೌನದಲಿ ಮಾತು ಭಾವಗಳೆಲ್ಲ ಲೀನವಾಗೋ - ರಚನೆ :ಶ್ರೀ ಆನಂದ ರಾಮ್, ಶೃಂಗೇರಿ

ಮೌನದಲಿ ಮಾತು ಭಾವಗಳೆಲ್ಲ ಲೀನವಾಗೋ ನಿನ್ನ ಮಾತ ನಿಜ ಮಾಡೋ ಗುರುವೇ
ಅರಿವಿಲ್ಲದೇ ನಾನು ನನ್ನ ಮರೆತು ನಿನ್ನ ಸೇರಿದ ಅನುಭವ ನೀಡೋ ದೊರೆಯೇ|

ನಾನೆಂಬ ಬಾವದೊಳು ಮನ ಕಳೆದಿಹುದು ಇದು ಮಿಥ್ಯವೆಂಬ ಅರಿವ ನೀಡೋ ಪ್ರಭುವೇ
ಮಾತಿಲ್ಲದೆ ಮೌನವಾಗಿ ನಿನಗೆ ಶರಣಾಗುವೆ ಶುದ್ಧ ಭಾವವ ಕರುಣಿಸೋ  ದೊರೆಯೇ|

ಅಂತರಾಳದಲಿ ಮೂಡಿಹ ಭಾವ ಕಣ್ಣ ಹನಿಯಾಗಿ ಹರಿದು ನಿನ್ನಲೇ ಸೇರಲಿ
ಭಾವವು ಬರೀ ಮಾತಾಗದೆ ಮೌನದಲಿ ಶರಣಾಗಿ ಸದಾ ನಿನ್ನಲೇ ಲೀನವಾಗಿರಲಿ|

ಮೌನದಲಿ ನಿನ್ನ ಸ್ಮರಿಸುವ ಮನವಿತ್ತು ಎನಗೆ ಮಾತುಗಳ ಸಂಗ ಬೇಡ ಗುರುವೇ
ಹೃದಯದಲಿ ನಿನ್ನ ಕೂರಿಸಿ ಮೌನದಲಿ ಮೆರವಣಿಗೆ ಮಾಡಿ ನಿನ್ನನೇ ಭಜಿಸುವೆ|

ತೋರಿಕೆಯ ಬಕುತಿಮಾಡದೆ ಶುದ್ಧ ಮನದಲಿ ನಿನ್ನ ಬೇಡುತಲಿ ಮೌನದಲಿ ಸ್ತುತಿಸುವೆ
ಶಬ್ದ ಬ್ರಹ್ಮನ ಅರಿವು ನೀಡಿ ಅಲ್ಲ ಸಲ್ಲದ ಪದಗಳ ನುಡಿಸದೆ ಕಾಯೆಂದು ಮೌನದಲಿ ಬೇಡುವೆ|

1 comment:

  1. Parama poojya gurugalaada venkatachala Avara paadagalige nanna bhakti poorvaka namanagalu. Yellaranu Harasi asheervadisi Kaapadi swamy. Hari om tatsat.

    ReplyDelete