ಒಟ್ಟು ನೋಟಗಳು

Saturday, February 15, 2020

ಕರುಣಿಸ ಬಾರದೇ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕರುಣಿಸ ಬಾರದೇ ಗುರುವೇ ಎನ್ನನು ಇನ್ನೆಷ್ಟು ತಡ ಮಾಡುವೆ ಪ್ರಭುವೇ 
ನಿನ್ನ ಬೇಡುವ ಮನವೇತಕೆ ನೀಡಿದೆ ಎನಗೆ ಇದು ನಿನ್ನ ಲೀಲೆಯ ಪರಿಯಲ್ಲವೇ|

ಓಡುವ ಮನದ  ಅರ್ಥವಿಲ್ಲದ ದುರಾಸೆಯ ಸೆಳೆತವ  ತಾಳದಾದೆನೋ
ಅರಿವಿದ್ದರೂ ಎಡವುತಿಹ  ಈ ನನ್ನ ಮನದ ಹುಂಬ ತನಕೆ ಸೋತುಹೋದೆನೋ|

ಕರ್ಮ ಕಳೆಯದೇ ಎನ್ನ ಮನ ಶುದ್ಧಿಯಾಗದೆ ನಿನ್ನ  ಕರುಣೆ ದೊರೆಯದೇನೊ
ಕಪಟ ಭಾವಗಳ ಸಂಗಮದಿ ಬದುಕು ಬಸವಳಿದು ಸೋತಿತೇನೋ|

ಓಡುವ ಬದುಕಿನ ದಾರಿಯಲಿ ಬರೀ ಪೊಳ್ಳು ಮಾತುಗಳ ದ್ವನಿ ಕೇಳಿದೆಯೋ
ಗುರಿ ತಲುಪಿಸುವ ಮುನ್ನ ನೀ ಮೆಚ್ಚುವ ಬದುಕು ನಡೆಸುವ ಬಗೆ ತಿಳಿಸೋ ದೊರೆಯೇ|

ನೇಮನಿಷ್ಠೆಗಳ ಅರಿವೆನಗಿಲ್ಲ ನಿನ್ನ ಸೇವಿಸುವುದರ ಬಿಟ್ಟು ಬೇರೇನೂ ಬೇಕಿಲ್ಲಾ
ನೀ ಕರುಣಿಸುವ ಬಕುತರ ನಡುವೆ ಈ ಪಾಮರನೂ ಒಬ್ಬನಾಗಿರಲಿ ಗುರುದೇವ|


.

1 comment:

  1. Parama poojya venkatachala avadootarige nanna saashtaanga pranaamagalu. Yellaranu ee kantaka dinda mukthi kodisi uddarisi Gurudeva.sarve jano sukinobavantu.

    ReplyDelete