ಒಟ್ಟು ನೋಟಗಳು

Thursday, March 26, 2020

ನಿನ್ನಲ್ಲೊಂದು ಅರಿಕೆಯು ನನ್ನದು ಗುರುನಾಥನೇ ಕೇಳುವೆಯಾ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನಲ್ಲೊಂದು ಅರಿಕೆಯು ನನ್ನದು ಗುರುನಾಥನೇ ಕೇಳುವೆಯಾ
ಮಹಾಮಾರಿಯೊಂದು ಅವರಿಸಿಹುದು ನಿನ್ನ ಬಕುತರಿರುವ ಜಗದಲಿಂದು|

ಎಲ್ಲಾ ನಾನೆಂಬ ಬಾವದೊಳು ಬದುಕು ನಡೆಸುವ ಮನುಜಗೆ ಪಾಠವೇ ಇದು
ಇನ್ನೂ ಬೇಕೆಂಬ ದುರಾಸೆಯು ಕರ್ಮ ಕೂಪಕೆ ದಾರಿ ತೋರಿಹಿದೋ|

ಗುರುಹಿರಿಯರ ಸಾದುಸಂತರ ಸೇವೆ ಸಲ್ಲಿಸದ ಮೋಜು ಮಸ್ತಿಗೆ ಇದು ಉತ್ತರವೇ
ಎಲ್ಲಾ ಪಡೆವೆನೆಂಬ ಧಾವಂತದ ಓಟಕೆ ನಿನ್ನ ಮೌನದ ಕಡಿವಾಣವೇ|

ಮಲಿನ ಮನದ ದುರಂಹಕಾರದ ನಡೆ ನುಡಿಗೆ ಮನುಜ ತೆರುತಿರುವ ದಂಡವೇ
ಮಾತೆ ಭಗಿನಿಯರ ನೋವು ನಿಟ್ಟಿಸುರಿಗೆ ಲೋಕ ಕೊಡುತಿಹ ತೆರಿಗೆಯೇ|

ಗುರುವೇ ನಿನ್ನಲೊಂದು ಮನವಿಯು ಎಲ್ಲರನು ಮನ್ನಿಸಿ ಪೊರೆಯೋ  ದೊರೆಯೇ
ನಿನ್ನ ಮಕ್ಕಳ ತಪ್ಪು ಒಪ್ಪುಗಳ ಗಣನೆ ಮಾಡದೆ ಎಚ್ಚರಿಕೆ ನೀಡಿ ಸಲಹೋ ಪ್ರಭುವೇ|

1 comment:

  1. Poojya venkatachala avadootarige nanna saashtaanga pranaamagalu. Swamy yellarigu e kantaka dinda mukthi kodi. Hari om tatsat.

    ReplyDelete