ಒಟ್ಟು ನೋಟಗಳು

Sunday, June 28, 2020

ಬೇಡುವ ಬಕುತನ ಮನದಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೇಡುವ ಬಕುತನ ಮನದಲಿ ಮೂಡುವ ಬಯಕೆಗೆ ಕೊನೆಯುಂಟೆ
ಬಾವಿಕ ಬಕುತನ ಸಲಹುವ ಗುರವೇ ನಿನ್ನ ಲೀಲೆಗೆ ಮಿತಿಯುಂಟೇ|

ಎಲ್ಲೆಲ್ಲೋ ಅಲೆದು ನೀನೇ ಗತಿಯೆಂದು
ಬೇಡುತಿಹ ಎನ್ನನು ದೂರಮಾಡುವುದುಂಟೆ
ಅಂತರಂಗದಲಿ ನಿಜ ಭಾವ ಭಕುತಿ ಮೂಡದ ಹೊರತು ನೀ ಸಲಹುವುದುಂಟೇ|

ಎನ್ನನೇ ಆವರಿಸಿರುವೇ ಗುರುವೇ ನಿನ್ನ ಹೊರತು ಅನ್ಯರ ಬಜಿಸಿರೆ ಬದುಕುಂಟೆ
ಇಷ್ಟವೋ ಕಷ್ಟವೋ ಎನ್ನ ಸಹಿಸಿ ಮುನಿಸು ತೋರದೇ ಹರಸದಿರೆ ನಾ ಬಾಳುವುದುಂಟೇ|

ನೋಡುಗರ ನೋಟಕೆ ನಾನೂ ಬಕುತನೆಂದು ನಾ ನಟಿಸಿರೆ ನೀ ಎನ್ನ ಒಪ್ಪುವುದುಂಟೇ
ಕಣ್ಣಾಲಿಗಳಲಿ ತುಂಬಿಹ ಬಕುತಿಯ ಹನಿಗಳ ನೀ ಕಾಣದೆ ಎನ್ನ ಕೂಗಿಗೆ ಬೆಲೆಯುಂಟೇ|

ಕಾಣದ ಗುರುವಿಗೆ ಹಂಬಲಿಸಿ ಸೋತಿಹ ಮನಕೆ ನೀ ಒಲಿಯದೇ ಬೇರೆ ದಾರಿಉಂಟೇ
ಸಖರಾಯದೀಶ ಬಕುತರ ಭಗವಂತ ಎನ್ನ ನುಡಿಗಳ ಆಲಿಸದೆ ದೂರಮಾಡುವುದುಂಟೇ|

1 comment:

  1. Poojya venkatachala avadootarige nanna saashtaanga pranaamagalu. Sadaa kaala nimma aashirvaada beduva obba bhakta. Hari om tatsat.

    ReplyDelete