ಒಟ್ಟು ನೋಟಗಳು

Tuesday, June 9, 2020

ಎಲ್ಲೋ ಕಳೆದು ಹೋಗುತಿಹ ಮನವನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲೋ ಕಳೆದು ಹೋಗುತಿಹ ಮನವನು ನಿನ್ನ ನೆನೆವ ಬುದ್ದಿ ನೀಡಿ ಸರಿಮಾಡೋ
ಇನ್ನ್ಯಾರೋ ಬದುಕಿನಲಿ ಮನವ ತೂರಿಸದೆ ಎನ್ನ ಮನವ ಸರಿಮಾಡೋ ಗುರುನಾಥ.

ಬಕುತಿಯೆಂದರೆ ಅರಿಯದ ಮೂಡತ್ಮ ನಾನು ನಿನ್ನ ಭಜಿಸುವ ಬಗೆಯೆಂತೋ
ನಿಜ ಭಕುತಿ ತೋರುವವರ ಸಂಗನೀಡಿ ನಿನ್ನ ಸೇರುವ ಪರಿಯ ತೋರೋ|

ಬರೀ ಮಾತಾಗದೇ ಒಳ ಮನದಿ ಶುದ್ಧ ಭಾವವ ತುಂಬಿ ಹರಸೋ ಗುರುವೇ
ಕಳ್ಳ ಮನದ ಮಳ್ಳ ಯೋಚನೆಗಳ ಬಹಿರಂಗ ಪಡಿಸಿ ಬುದ್ದಿ ಕಲಿಸೋ ದೊರೆಯೇ|

ಉಳ್ಳವನಂತೆ ನಟಿಸಿ ತೋರಿಕೆಯ ಬಕುತನ ನಟನೆ ಸಾಕುಮಾಡೋ ಪ್ರಭುವೇ
ಡಂಬತನದ ಬದುಕು ಸಾಕು ನಿನ್ನ ಇರುವಿನ ಅರಿವು ಬೇಕೆನೆಗೆ ಕರುಣಿಸೋ ಗುರುವೇ|

ಮಾಡುವ ಕೆಲಸದಿ ನೋಡುವ ನೋಟದಿ ಆಡುವ ಮಾತಲಿ ನಿನ್ನ ನಾಮವಿರಲಿ
ಎಲ್ಲೇ ಇರಲಿ ಹೇಗೇ ಇರಲಿ ನಾನಿರುವ ಭೂಮಿ ಸಖರಾಯಪುರವಾಗಿರಲಿ ದೊರೆಯೇ|

1 comment:

  1. Gurudeva venkatachala Avara paadagalige nanna bhakti poorvaka namanagalu. Sadaa Harasi asheervadisi swamy. Hari om tatsat.

    ReplyDelete