ಒಟ್ಟು ನೋಟಗಳು

Monday, January 4, 2021

ನನ್ನೊಡೆಯನ ಏನೆಂದು ಬಣ್ಣಿಸಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನನ್ನೊಡೆಯನ ಏನೆಂದು ಬಣ್ಣಿಸಲಿ ಪದಕೂ ಸಿಗನು ಊಹೆಗೂ ನಿಲುಕನು ಅವನೂ
ಬಾನೆತ್ತರಕೆ ಬೆಳದಿಹ ಕರುಣಾ ಮೂರುತಿ ನನ್ನ ಒಡೆಯನು  ಗುರುವರನು|

ಸಖರಾಯಪುರವೆಂಬ ಪುಣ್ಯ ಭೂಮಿಯೊಳು ಜನಿಸಿ ಎಲ್ಲರ ಹೃದಯದಲಿ ನಿಂತನೋ
ದೇಹಿ ಎಂದು ಬಂದವರ ಭವಣೆಗಳ ಪರಿಹರಿಸಿ ಅಭಯವನಿತ್ತು ಸಲಹಿದನೋ|

ಕೀರುತಿಯ ಬಯಸದೆ ಪ್ರತಿಫಲ ಬಯಸದೆ ತನ್ನದನೆ ಹಂಚಿ ಸುಮ್ಮನಿದ್ದನೋ
ನೀಡುವುದು ತಾನಾದರೂ ತನಗರಿವಿಲ್ಲದಂತೆ ತೋರಿ ದಾರಿ ದೀಪವಾದನೋ|

ಎಲ್ಲವನು ಮೀರಿ ಮನದ ಅಳತೆಗೂ ಸಿಗದ ಸಾಧಕನು ನನ್ನ ಸದ್ಗುರುನಾಥನು
ಎಲ್ಲವನು ಮಹಾದೇವನಿಗೆ ಅರ್ಪಿಸುತ ಗುರುಒಬ್ಬನೇ ಮೇಲೆಂದನೋ|

ಆಶ್ರಮವೆಂಬ ಶ್ರಮವ ಬಯಸದೆ ಇಡೀ ಜಗವನೇ  ಕರ್ಮಭೂಮಿ ಮಾಡಿಕೊಂಡನೋ
ಸಮಸ್ಟಿಸ್ಥಿತಿ ತಲುಪಿ  ಎಲ್ಲರಿಗೂ ಅದರರಿವು ಮೂಡಿಸಿ ಬಕುತರ ಹರಸಿದನೋ|

ಅದೇನೋ ಭಾವವು ಮನತುಂಬಿ ಬರಲು ಗುರುನಾಥನ ಸದಾ ನೆನೆವೆನೋ
ಸಾಖರಾಯಧೀಶ ಸದ್ಗುರೂನಾಥ ಎನ್ನ ಜೊತೆಯಿದ್ದು ಹರಸುವನೋ|

1 comment:

  1. Om venkatachala gurubyon namaha. Yellarigu nimma aashirvaada haagu krupe sadaa erali. Hari om tatsat.

    ReplyDelete