ಒಟ್ಟು ನೋಟಗಳು

Monday, January 4, 2021

ಶ್ರೀನಿವಾಸ ಶಾರದಮ್ಮರ ಕಂದನಾಗಿ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಶ್ರೀನಿವಾಸ ಶಾರದಮ್ಮರ ಕಂದನಾಗಿ
ಕೃಷ್ಣಯೋಗೀಶ್ವರರ ಅವತಾರವಾಗಿ |
ಭಕ್ತಜನರ ಉದ್ಧಾರಕ್ಕಾಗಿ  
 ಧರೆಗವತರಿಸಿದೆ ಮಾರ್ಗಶಿರಬಹುಳಷಷ್ಠಿಯಂದು || 

ಕಾಯಕದಲ್ಲೇ ತೃಪ್ತಿಯ ಕಾಣುತ್ತಾ
ಎಲ್ಲರಲ್ಲೂ ಭಗವಂತನ ನೋಡುತ್ತಾ |
ಮಿತಭಾಷೆಯ ಆಭರಣವ ತೊಡುತ್ತಾ 
ಜೀವಜಂತುಗಳಲಿ ಸಮತೆಯನರಸುತ್ತಾ || 1 ||

ಮೌನದ ಸಾಧನೆಯ ನಡೆಸುತ್ತಾ
ಕೃಷ್ಣಯೋಗೀಶ್ವರರ ಸಾನಿಧ್ಯದಿ ಜಪವ ಮಾಡುತ್ತಾ |
ಶೃಂಗೇರಿ ಜಗದ್ಗುರುಪೀಠಕ್ಕೆ ಭಕ್ತಿಯಲಿ ನಮಿಸುತ್ತಾ
ಆತ್ಮಜ್ಞಾನದ ಬೆಳಕಲಿ ಮೀಯುತ್ತಾ || 2 ||

ವೇದಾರ್ಥಗಳನು ಸುಲಭವಾಗಿ ತಿಳಿಸುತ್ತಾ
ಎರಡಿಲ್ಲದಂತೆ ಬದುಕಬೇಕೆಂಬುದ ಹೇಳುತ್ತಾ |
 ಮೂಕನಿಗೂ ವಾಗ್ದೇವಿಯ ಅಮೃತವನುಣಿಸುತ್ತಾ 
ಸಾಧಕರ ಹೃನ್ಮನಗಳಲಿ ವಾಸ ಮಾಡುತ್ತಾ || 3 ||

|| ಸರ್ವದಾ ಸದ್ಗುರುನಾಥೋ ವಿಜಯತೇ ||
5-1-2021

1 comment:

  1. Poojya venkatachala avadootarige nanna poojya namanagalu. Sarve jano sukinobavantu. Yellaranu Harasi asheervadisi swamy.

    ReplyDelete