ಒಟ್ಟು ನೋಟಗಳು

Monday, September 13, 2021

ಬದುಕಿನ ಮುಸ್ಸಂಜೆಯಲಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬದುಕಿನ ಮುಸ್ಸಂಜೆಯಲಿ  ಸವೆಸಿದ  ದಾರಿ ನೆನಪಾಗಿ ಮನವು  ಭಾರವಾಯಿತೋ
ನಿನ್ನ ನೆನೆಯದಲೇ ಬದುಕು ನಡೆಸಿ ದಡ ಸೇರದ ನಾವೆಯಂತೆ ಗಾಳಿಗೆ ತೇಲಿತೋ|

ಬದುಕು ಮುಗಿದಿಲ್ಲ ಇನ್ನಾದರೂ ನಾಳೆಗೊಂದು ಅರ್ಥ ನೀಡಿ ನನ್ನ ಕರುಣಿಸೋ
ಅಲ್ಪರಲಿ ಅಲ್ಪನು ನಾನು ನಿನ್ನ ಕಣ್ಣಿಗೆ ಬಿದ್ದು ಹೆಜ್ಜೆ ಮುಂದಿಡಲು ಬೆಳಕ ತೋರೋ|

ಬದುಕಿಗೊಂದು ಅರ್ಥವೆನುವರು ಯಾವುದೂ ಅರಿಯದ ಮೂಡ ಜೀವಿಯು ನಾನೋ
ಸುಮ್ಮನೇ ಕಾಲ ಕಳೆದು ಲೌಕಿಕದಲಿ ಮಣ್ಣು ಹೊತ್ತು ಬರಡು ಬಾಳ ನಡೆಸಿದೆನೋ|

ಬದುಕು ನಡೆಸುವ ಬರದಿ ಬಾಳಿದುದೇ ಸರಿ ಎನುತ ಹಂಬಿನಲಿ ಹಾರಾಡಿದೆನೋ
ಬರೀ ಕಾಮವೇ ಕಾಂಚಾಣವೇ ಬದುಕೆನುತ  ಸಂತೆಯೊಳು  ಬದುಕಿ ಹಾಳಾದೆನೋ|

ಬದುಕು ಬರಡಾಗಿ ಬಾಡುವ ಮುನ್ನ ನಿನ್ನ ಪಾದಚರಣ ಬಯಸಿ ನಿನ್ನ ಮುಂದೆ ನಿಂತಿಹೆನೋ
ಕರುಣಿಸೆನೆಗೆ ಅಲ್ಪ ಸಮಯವಾದರೂ ಅರ್ಥ ಅರಿಯಲು ಓ ನನ್ನ ಸಖರಾಯಪುರದ ಗುರುನಾಥ|

No comments:

Post a Comment