ಒಟ್ಟು ನೋಟಗಳು

Monday, October 4, 2021

ಬೆಳಕಾಗಿ ಜಗಕೆ ದಾರಿ ತೋರಿಹೆ ನೀನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬೆಳಕಾಗಿ ಜಗಕೆ ದಾರಿ ತೋರಿಹೆ ನೀನು ಗುರಿ ತೋರಿದರೆ ದಡ ಸೇರುವೆನು ನಾನು
ತಾಮಸಿಕನಾಗಿ  ಅಲೆಮಾರಿಯಾಗಿ ಅಂಧನಂತೆ ಗುರುವೇ ಕೂಗುತಿಹೆನು ನಾನು|

ಶುದ್ಧವಿಲ್ಲವೋ ಎನ್ನ ಅಂತರಂಗ ಬಿಡದಾದೆನೋ ಬಾಹ್ಯ ಕ್ಷಣಿಕ ಬದುಕಿನ  ಸುಖದ ಸಂಗವು
ಮರುಕಳಿಸಿ ಮಾಡಿದಾ ಕರ್ಮಗಳ ನೆನಪು ಭಯದಿ ನಿನ್ನ ಆಸರೆಯ ಬೇಡಿ ಬಂದಿದೆ ಮನವು|

ಇಲ್ಲೂ ಸಲ್ಲದೆ ಅಲ್ಲೂ ಸಲ್ಲದೆ ಮತಿಹೀನನಾಗಿ ಮಾತು ಬರದ ಮುಖನಾದೇನೋ
ಎನ್ನ ಮನವ ಅರಿವ ಗುರದೇವ ನಿನ್ನ ದರುಶನಕೆ ಮುಂದೆ ನಿಲ್ಲಲಾರದೆ ಅವಿತಿಹೆನೋ|

ಬದುಕು ಮೂರು ದಿನವು ಅರಿವಿದ್ದರೂ ಭ್ರಮೆಯಿಂದ ದೂರವಿರದು ಈ ನನ್ನ ಮನವು
ಅಲ್ಪನಲ್ಲವೇ  ನಾನು  ತಿಳಿಯದೇ ನಾ ನಡೆಸುವ ಬಾಳು ಕರುಣೆ ತೋರೆಯಾ ನೀ ಗುರುವು|

ನಿನ್ನನೇ ಸೇವಿಸುವ ನಿಜ ಬಕುತರ ನುಡಿಯ ಆಲಿಸಿ ನಿನ್ನ ಕಾಣ ಬಯಸಿತು ಜೀವವು
ಸಖರಾಯಪುರದ ದೇವನೇ ನಿನ್ನ ಹೊರತು ಇನ್ನ್ಯಾರು ಸಲಹುವರು ಎಂದಿತು ನನ್ನ ಮನವು|

No comments:

Post a Comment