ಒಟ್ಟು ನೋಟಗಳು

Thursday, March 12, 2020

ಗುರುನಾಥ ಒಲಿದರೆಂದರೆ ಯಾತರ ಭಯವೋ ಇನ್ಯಾತರ ಭಯವೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಗುರುನಾಥ ಒಲಿದರೆಂದರೆ ಯಾತರ ಭಯವೋ ಇನ್ಯಾತರ ಭಯವೋ
ಸದ್ಗುರು ಹರಸಿದೆನೆಂದರೆ ಬದುಕೆಲ್ಲಾ ಸುಂದರವೋ ಬಲು ಸುಂದರವೋ|

ಬೇಡುವ ಬಕುತನ ಮನವನು ಅರಿತು ದುರಿತಗಳ ದೂರ ಮಾಡುವ ಗುರುನಾಥ
ಮನದಲೇ ನೆನೆದು ಬಕುತಿಯ ತೋರಿರೆ ದಾರಿಯ ತೋರುವ ಗುರುನಾಥ|

ಸಂತನ ಸನಿಹದಿ ಮಧುರ ನುಡಿಗಳ ಅಲಿಸೆ ದೊರೆವುದು ಮನಕೆ ನೆಮ್ಮದಿಯು
ಬಿರುನುಡಿಯನಾಡದೆ ಸಲಹುವ ತಂದೆಯು ಸಕರಾಯಪುರದ ನಮ್ಮ ಗುರುವು|

ತುಪ್ಪದ ದೀಪಕೆ ತಾ ಒಲಿದು ಬಕುತನ ಕರುಣಿಸೆ ಹರಸುವ ಸಖರಾಯದೀಶನೋ
ಆತಂಕವ ದೂರಮಾಡುತ ಮನದ ಭಯವ ನಾಶಮಾಡುವ ಮಹಾದೇವನೋ|

ಮನದ ಭಾವಗಳ ಮಲಿನ ತೊಳೆಯುತ ಶುದ್ಧ ಅಂತಃಕರಣ ಕರುಣಿಸುವ ಗುರುದೇವ
ಬೃಂದಾವನ ಸನಿಹ ನಿಜ ಬಕುತಿಯ ತೋರಲು ಹರಸುವ ಸಖರಾಯಪುರದ ಮಹಾದೇವ|

1 comment:

  1. Sakaraayapurada venkatachala avadootarige paadagalige nanna bhakti poorvaka namanagalu. Yellaranu ee kantaka dinda mukthi kodi haagu rakshe sadaa kodi. Sarve jano sukinobavantu.

    ReplyDelete