ಒಟ್ಟು ನೋಟಗಳು

Saturday, May 16, 2020

ಕಾಣದಾಗಿದೆ ಬದುಕು ನಡೆಸುವ ದಾರಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕಾಣದಾಗಿದೆ ಬದುಕು ನಡೆಸುವ ದಾರಿ ನಿನ್ನ ನಾಮ ಮರೆತು ಗುರುವೇ
ಭಾರವಾಗಿದೆ ಮನಸು ನಿನ್ನ ನಾಮ ಭಜಿಸದೆ ಮನ್ನಿಸೋ  ಸಖರಾಯಧೀಶ  ಪ್ರಭುವೇ|  

ಎಷ್ಟು ಬೇಡುವುದೋ ಗುರುವೇ ಎನ್ನ ಮನದ ದುಗುಡ ಅರಿಯಲಾರೆಯ
ಇನ್ನಷ್ಟು ಕಷ್ಟ ಕೊಡೋ ದೊರೆಯೇ ನಿನ್ನ ಮರೆತು ಬದುಕುವೆನೆಂದೆಯಾ|

ನಿನ್ನ ಒಲಿಸಿ ಕೊಳ್ಳಲು ಅಂತರಂಗ ಬಹಿರಂಗ ಶುದ್ದಿ ಬೇಕೆನ್ನುವರೋ
ನೀ ಎನ್ನ ನೋಡಿ ಹರಸದೆ ಇನ್ನೆಲ್ಲಿಯ ಶುದ್ಧ ಮನವ ಹುಡುಕಲೋ ಪ್ರಭುವೇ|

ಇಡುವ ಹೆಜ್ಜೆಯದು ತಪ್ಪಾಗಿದ್ದರೆ ಮುಂದಿನ ದಾರಿ ತೋರದೇ ನಿಲ್ಲಿಸೆನ್ನನು
ಎಲ್ಲಾ ಮನದ ಆಟವೆನ್ನುತ ಕಪಟ ವೇಷ ಧರಿಸಿ ನಿನ್ನ ಭಜಿಸುವ ನಾಟಕವೇನೋ|

ಲೌಕಿಕದ ಆಸೆಯ ಬಲೆಯೊಳು ಮನವು ಸಿಲುಕಿ ನಿನ್ನ ಬೇಡುವುದು ಸರಿಯೇ ಗುರುವೇ
ಇಷ್ಟು ದಿನ ಎನ್ನ ದೂರವಿಟ್ಟರೂ ನಿನ್ನ ಮನ ಕರಗಿ ಸಲಹ ಬಾರದೇ ದೊರೆಯೇ|

ಸಖರಾಯಪುರದ ಅರಸ ನೀನು ನಿನ್ನರಸಿ ಓಡೋಡಿ ಬಂದ ಪಾಮರ ನಾನು
ಬೃಂದಾವನದ  ಆ ತಂಪು ನೆರಳು ಮನಕೆ ಶಾಂತಿ ನೀಡಿ ಹರಸ ಬಾರದೇನೋ|

1 comment:

  1. Venkatachala avadootarige nanna saashtaanga pranaamagalu. Sarve jano sukinobavantu. Hari om tatsat.

    ReplyDelete