ಒಟ್ಟು ನೋಟಗಳು

Monday, May 25, 2020

ನಾನು ಬಕುತನೂ ಅಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಾನು ಬಕುತನೂ ಅಲ್ಲ ನಿನ್ನ ಬೇಡುವ ಪರಿಯ ಅರಿತವನೂ ಅಲ್ಲ
ಬರೀ ಮಾತುಗಳಲಿ ನಿನ್ನ ಪೂಜಿಸಿ ನಿಜ ಬಕುತನೆಂದೆನಲ್ಲ ಗುರುವೇ|

ಮನಸಿನಾಳದ ಭಾವನೆಗಳ ಹೊಡೆದಾಟದಿ ಮಂಕುಹಿಡಿದು ನಿನ್ನ ಬೇಡುವುದೆಂತು
ಅಡುವುದೊಂದು ಮಾಡುವುದೊಂದು ಮಾಡುತ ನಿನ್ನ ಬೇಡುವುದೆಂತೋ|

ಸರಿ ತಪ್ಪುಗಳ ಅರಿವಿದ್ದು ಬದುಕು ನಡೆಸುವ ಬರದಲಿ ಎಡುವತಿಹೆನೋ
ಮತ್ತೆ ಮತ್ತೆ ಎನ್ನ ಮನ್ನಿಸೆನುತ ನಿನ್ನ ಬೇಡುವ ನಾಟಕವಾಡುತ ನಿಂತಿಹೆನೋ|

ಧರ್ಮದ ದಾರಿಯದು ಬಲು ದುಸ್ತರವು ನಾನೂ ನಡೆವೆನೆ0ಬ ಹುಂಬಿನಲಿ ಕಾಲಿಟ್ಟೆನೋ
ಮುಗ್ಗರಿಸಿ ಬಿದ್ದು ಕರ್ಮದ ಕೂಪದೊಳು ಸಿಲುಕಿ ನಿನ್ನ ಮೊರೆ ಹೋಗುವೆನೋ|

ಕಾಮ ಕಾಂಚಾಣದ ಮೋಹವೆಂಬ ಮಾಯಾ ಜಾಲದ ಬಲೆಗೆ ಸಿಲುಕಿದ ಹುಳುವಾದೆನೋ
ಎನ್ನ ಉದ್ಧರಿಸಿ ನಿನ್ನ ನಾಮದಲೇ ಎನ್ನ ಉಸಿರಿರಿಸಿ ಸಲಹೋ ಸಖರಾಯಧೀಶನೇ|

1 comment:

  1. Sri venkatachala avadootarige nanna bhakti poorvaka namanagalu. Sarve jano sukinobavantu. Yellarigu nimma aashirvaada haagu rakshe doreyali. Hari om tatsat.

    ReplyDelete