ಒಟ್ಟು ನೋಟಗಳು

Friday, July 10, 2020

ಬರುವನೋ ಗುರುನಾಥ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬರುವನೋ ಗುರುನಾಥ ಕರೆದಾಗ ನಿಮ್ಮ ಮನದ ಮನೆಯೊಳಗೆ
ನಿಲ್ಲುವನೋ ಮನೆಯೊಳಗೂ ಹೊರಗೂ ಭಾವ ಶುದ್ದಿ ತುಂಬಿ ಬೇಡಿದಾಗ|

ಮಂತ್ರ ತಂತ್ರ ಕೇಳಲೊಲ್ಲ ಅವ ನಿರಂತರ ಭಜಿಸಿರೆ ಸುಲಭದಿ ದೊರೆಯುವ
ನಾನು ಎನ್ನುತಾ ಮುಂದಡಿಯಿಟ್ಟರೆ ಮತ್ತೆಂದೂ ಸಿಗದೆ ಬಲು ಕಾಡಿಸುವ|

ನುಡಿಯ ನಂಬಿ ನಡೆದುದಾದರೆ ಭವ ಬಂಧನವನು ದಾಟಿಸಿ ಬಿಡುವನವ
ಅನುಮಾನಿಸದೆ ದಾರಿ ತುಳಿದರೆ ದಾರಿ ದೀಪವಾಗಿ ಬೆಳುಕು ತೋರುವವ|

ಸಾಧಕನ ನಿಜ ಗುರು ಅವ ಬಾಧಕಗಳ ಬಡಿದೋಡಿಸಿ ಕಾಯುವವ
ಅರಿವಿನರಿವು ಬೇಕೆನುತ ಭಜಿಸುತ ಬೇಡುವ ಬಕುತಗೆ ಹರುಷದಿ ಹರಸುವವ|

ಇನ್ನೇನು ಬೇಕು ನಿಜಬಕುತಗೆ ನಿನ್ನ ಪದತಲದಿ ಶಿರವಿಟ್ಟು ಶರಣಾಗಿ ಬೇಡುವ
ಸಖರಾಯಪುರದ ಮಹನೀಯ ನಿನ್ನೊಲುಮೆ   ಬೇಡುವ ಈ ಪಾಮರಗೆ ಒಲಿಯುವೆಯಾ|

1 comment:

  1. Hosa varushadalli nimma krupe haagu asheervaada samasta janara mele erali. Hari om tatsat.

    ReplyDelete