ಒಟ್ಟು ನೋಟಗಳು

Monday, July 13, 2020

ಮನದ ಮಂದಿರದಲಿ ನಿನ್ನ ಕುಳ್ಳಿರಿಸಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಮನದ  ಮಂದಿರದಲಿ ನಿನ್ನ ಕುಳ್ಳಿರಿಸಿ ಮುದದಿ ಭಜಿಸುವೆನು ಗುರುದೇವಾ
ಅಂತರಂಗದ ಕದವ ತೆರೆದು ಒಳಗಣ್ಣ ತೆರೆಸಿ ಹರಸೋ ನನ್ನ ಮಹಾದೇವ|

ಬಿರುಗಾಳಿಯಂತೆ ಬರುವ ಮನದ ಬಯಕೆಗಳ ಅಲೆಯ ತಡೆಯೋ ಗುರುದೇವ
ಎನ್ನೊಡಲ ಆಳದಲಿ ಹುದುಗಿಹ ಲೌಕಿಕದ ದುರಾಸೆಯ ನಾಶಮಾಡೋ ದೇವ|

ಎಲ್ಲರಲೂ ದೈವ ಕಾಣುವ ಮನವಿತ್ತು ಮನುಜನಾಗಿ ಮಾಡೋ ಮಹಾದೇವ
ಎನ್ನ ಮನದೊಳಗಿನ ಕಪಟ ವಾಸನೆಯ ದೂರಮಾಡಿ ಶುದ್ಧಗೊಳಿಸೋ ಗುರುದೇವ|

ಬರೀ ಬದುಕಿಗಾಗಿ ಭಜಿಸದೆಲೆ ನಿನ್ನ ಇರುವ ಅರಿವಿನ  ಬಲ ನೀಡಿ ಸಲಹೋ ದೇವ
ಕಷ್ಟ ಕಾರ್ಪಣ್ಯಗಳ ಸುಳಿಯಲಿ ಸಿಲುಕಿಸಿ ಹದಮಾಡಿ ಹರಸೋ ನನ್ನ ದೇವ|

ಅಂತೆಕಂತೆಗಳ ನಡುವೆ ಸಂತೆ ಮಾಡುತಿಹ ಮನದ ಭ್ರಾಂತಿ ದೂರ ಮಾಡೋ ದೇವ
ಅತ್ತಿತ್ತ ಓಡುತಿಹ ಮತಿಯ ನಿನ್ನತ್ತ ಸೆಳೆದು ಕಾಪಾಡೋ ಸಖರಾಯಪುರದ ಮಹನೀಯ|

1 comment:

  1. Venkatachala gurugalige nanna bhakti poorvaka namanagalu. Sarve jano sukinobavantu
    Yellaranu Harasi asheervadisi
    Hari om tatsat.

    ReplyDelete