ಒಟ್ಟು ನೋಟಗಳು

Saturday, December 5, 2020

ಅವಧೂತನೆಂದರೆ ಅವ ಪರಮಾತ್ಮನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಅವಧೂತನೆಂದರೆ ಅವ ಪರಮಾತ್ಮನು ಸಖರಾಯಧೀಶನು ಭಕ್ತ ಜನ ಪೋಷಿತನು
ನಿತ್ಯ ನಿರಂತರ ಭಜಿಪರ ಕಾಯ್ವನು ಕರುಣಾಪೂರಿತ ನಮ್ಮ ಗುರುನಾಥನು|

ತೋರುವನು ಜಗದಾಟವ ಮೈ ಮರೆಸಿ ಚಿತ್ತವ ಬ್ರಮೆಯೊಳಿರಿಸಿ
ಮನವ ಕುಣಿಸಿ ಬಣ್ಣದ ಬದುಕ ನಿಜವೆನಿಸಿ ಜೀವವ ಭಾವದೊಳಿರಿಸಿ|

ಕಾಯೋ ಎಂದೆನೆಲು ಕರುಣೆಯ ತೋರುತ  ಮನದ ಸೋಲನು ಎತ್ತಿ ತೋರುತ
ಮುನ್ನೆಡೆವ ಹಾದಿಯೊಳು ಆಸೆ ಆಮಿಷ ತಂದಿರಿಸಿ ಗಟ್ಟಿ ಮನವ ಬಯಸುತ|

ಮನದೊಳು ಜ್ಯೋತಿ ಬೆಳಗಿಸೆ ನಿತ್ಯ ಬದುಕಿನ ಕತ್ತಲ ಕಳೆವನು ಅವಧೂತ
ಸತ್ಯವಾಗಿಹ ಜೀವಕೆ  ಜೊತೆಯಿರೆ  ಮುಕ್ತಿಪಥದ ಸಾರಥಿಯಾದನೋ ಭಗವಂತ I

ತನ್ನೊಳಗಿಹ ಆರು ಅರಿಗಳ ಭಯದಿಂದ ದೂರವಿರಿಸೆಂದು ಕೂಗಿ ಬೇಡುತಾ
ಧರೆಯೊಳು ಸಖರಾಯಪುರವೆಂಬ ವೈಕುಂಠದ ದೇವ ಗುರನಾಥನ ಬೇಡುತಾ|

1 comment:

  1. Poojya avadootaraada venkatachala Avara paadagalige nanna bhakti poorvaka namanagalu. Hari om tatsat.

    ReplyDelete