ಒಟ್ಟು ನೋಟಗಳು

Sunday, December 27, 2020

ಸಾಧನೆಯ ಹಾದಿಯೊಳು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸಾಧನೆಯ ಹಾದಿಯೊಳು ಭಾದಕಗಳ ಕಾಟವ  ದೂರ ಮಾಡೋ ನನ್ನ ದೊರೆಯೇ
ಮೂಡುವ ಭಾವನೆಯ ಅಲೆಗಳ ಶಾಂತಗೊಳಿಸಿ ಸ್ಥಿರ ಮನ ನೀಡೋ ನನ್ನ ಗುರುವೇ|

ಆಸೆಗಳ ಅಲೆಗಳ ಮೇಲೆ ತೇಲುತ ನಿನ್ನ ನೆನೆವುದೇ ಮರೆತನಯ್ಯ ಗುರುವೇ
ಗೊಂದಲದ ಗೂಡಾಗಿರುವ ಮನಕೆ ಸತ್ಯದ ಅರಿವು ನೀಡಿ ಹರಸೋ ಪ್ರಭುವೇ|

ಎಲ್ಲರಂತಲ್ಲ ಎನ್ನ ಮನವು ಮರ್ಕಟದ ಮತಿಯಂತೆ ಕುಣಿವುದು ನೋಡೋ ಪ್ರಭುವೇ
ಚಂಚಲತೆಯ  ಹೊಡೆತಕೆ ತತ್ತರಿಸಿ ಮನವು ಬರಿದಾಗಿ ಬೆದರಿತೋ ಗುರುವೇ|

ಕಾಮದಾ ಕಾಟಕೆ ಮನವು ಸೋತು ಸುಣ್ಣವಾಗಿ  ಮರುಗಿ ಮುದುಡಿತೋ ಮನವೇ
ನಾನೆಂಬ ಭಾವವು ಮನವ ಆವರಿಸಿ ದಾರಿ ತಪ್ಪಿಸಿ ಪಾಪದ ಹಾದಿ  ತುಳಿಯಿತೋ ಗುರುವೇ|

ಪರರ ಸೊತ್ತು ಅನ್ಯರಾ ವಿಷಯಗಳಿಗೆ ಮನವು ಹಂಬಲಿಸಿ ಬದುಕು ಬರಡಾಯಿತೋ
ಉಳಿದ ದಿನಗಳಾ ಬದುಕು ವ್ಯರ್ಥಮಾಡದೆ  ನಿನ್ನ ಸೇವಿಸುವ ಮನ ನೀಡೋ ಪ್ರಭುವೇ|

ಎಲ್ಲರೊಳು ಎನ್ನ ಸೇರಿಸಿ ನಿನ್ನವನೆಂದು ಪರಿಗಣಿಸಿ ಎನ್ನ ಕರುಣಿಸೋ ಗುರುವೇ
ನೀ ಎನ್ನ ಹರಸಲು ಇನ್ನೆಲ್ಲಿಯಾ ಭಯ ಎನಗೆ ಕರುನಾಳು ಎನ್ನ ಸಖರಾಯ ಪ್ರಭುವೇ|

1 comment:

  1. Sarve jano sukinobavantu. Gurudeva nimma aashirvaada haagu rakshe sadaa yellaranu Kaapadali.Hari om tatsat.

    ReplyDelete