ಒಟ್ಟು ನೋಟಗಳು

Saturday, February 13, 2021

ಎನ್ನ ಅರಿವಿಗೆ ಬರಲಿಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎನ್ನ ಅರಿವಿಗೆ ಬರಲಿಲ್ಲ ನೀನು ಇನ್ನೆಷ್ಟು ದಿನ ಗುರುವೇ ಕಾಯಬೇಕು ನಾನು
ದೇಹ ಶುದ್ದಿ ಸಾಲದಂತೆ ಮನ ಶುದ್ದಿ ಮಾಡಿ ಕೊಳ್ಳಲಿಲ್ಲ  ಪ್ರಭುವೇ ನಾನು|

ನೋಡುವ ನೋಟದಲೂ ತುಂಬಿಹುದು ಬರೀ ಕುಹುಕದ ಭಾವವು
ಆಡುವ ಮಾತಿನಲೂ ಕಾಣಸಿಗದು ನೀ ಬಯಸುವ ಶುದ್ದ ಭಾವವು|

ಮಾಡುವ ಕರ್ಮವೂ ಬಯಸಿದೆ  ಸ್ವಾರ್ಥದಾ ಹಂಬಲವು
ನಿಷ್ಕಾಮ ಕರ್ಮಕೆ ಮನ ಹಾತೊರೆದರೂ ಬಿಡದು ಚಂಚಲ ಮನವು|

ನಾನು ನಾನೆಂಬ ಭಾವವು ಮನ ತುಂಬಿ ಸಾಗಿ ನಡೆದಿದೆ ವ್ಯರ್ಥ ಜೀವನವು
ತೋರಿಕೆಯ ಪ್ರೀತಿ ಬಕುತಿಯ ಆಟ ಮೇಲಾಯಿತು ಸೋತು ಹೋಯಿತು ಮನವು|

ಸೋತು ಬೇಡುವಾಗ ನುಡಿವುದು ಮನವು ನೀನೇ ಎನ್ನ ಸರ್ವಸ್ವವೂ
ಮರು ಗಳಿಗೆಯೇ ಹಕ್ಕಿ ಹಾರಿದಂತೆ ವಾಸನೆಯ ಅರಸಿ ಓಡುವ ಎನ್ನ ಮನವು|

ಸಾಕು ಮಾಡೆನ್ನ ಈ ಬದುಕಿನ ನಾಟಕವ ನಿನ್ನ ಹಾರೈಕೆಗೆ ಕಾದಿದೆ ಜೀವವು
ಸಾಕ್ಷರಾಯಧೀಶ ಪ್ರಭುವೇ ನಿನ್ನ ಕರುಣೆಗಾಗಿ ಹಂಬಲಿಸಿ ಕೂಗಿದೆ ಮನವು|

1 comment:

  1. Parama poojya gurugalaada venkatachala Avara paadagalige nanna bhakti poorvaka namanagalu. Sarvarannu uddarisi asheervadisi Kaapadi Guruvarya. Sarve jano sukinobavantu.

    ReplyDelete