ಒಟ್ಟು ನೋಟಗಳು

Sunday, February 28, 2021

ಭಾವಕೂ ಬೆಲೆಯಿಲ್ಲ ಬಕುತಿಗೂ ಬೆಲೆಯಿಲ್ಲವಿಲ್ಲಿನೀನು ನೆಪಮಾತ್ರ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಭಾವಕೂ ಬೆಲೆಯಿಲ್ಲ ಬಕುತಿಗೂ ಬೆಲೆಯಿಲ್ಲವಿಲ್ಲಿ
ನೀನು ನೆಪಮಾತ್ರ ಎಲ್ಲವೂ ತೋರಿಕೆಗೆ ಪ್ರಾಧಾನ್ಯವು|

ಗುರುವೆಂದು ಬರೀ ಮಾತಲಿ ನುಡಿಯುತ ಎನ್ನ ಸ್ವಾರ್ಥವೇ ಮೇಲಾಯಿತು
ನಿನ್ನ ನುಡಿಮುತ್ತುಗಳು ಮಾತಲೇ ಮರೆಯಾಗಿ ಎನ್ನ ಆಸೆಗಳೇ ಮುಂದಾಯಿತು|

ನೀ ನೀಡಿದ ಭಿಕ್ಷೆ ಇದು ಎನ್ನ ಸ್ವರದ ಮಧುರ ದ್ವನಿಯು ಮರೆತೇ ಹೋಯಿತು
ಬದುಕಿನ ತಾಳಗಳು ನಿನ್ನಣತಿಯಂತೆ ಇದ್ದರೂ ನಾನೆಂಬ ಭಾವವು ಮರೆಸಿತು|

ನೋಡುವ ನೋಟದಲಿ ನೀನಿರುವೆ ಗುರುವೇ ಮನ ಮರೆತು ಸಂಭ್ರಮಿಸಿತು
ಜೀವದ ಉಸಿರು ನೀನಾದರೂ ಹುಂಬನಾಗಿ ಮನ ನಿನ್ನ ಹಂಗಿಲ್ಲವೆಂದಿತು|

ನನ್ನದಲ್ಲದ ಈ ಬದುಕಿನ ಹಾದಿಯಲಿ ನಿನ್ನನೇ ಮರೆತು ಜೀವ ಮೂಡನಾಯಿತು
ನೀ ನೀಡಿದ ಪದ ಭಿಕ್ಷೆ ನನ್ನದೆನುತ ಗರ್ವದಲಿ ಈ ಕರವು ಪದವ ಗೀಚಿತು|

ದಾರಿ ತಪ್ಪಿಸಬೇಡ ನಿನ್ನ ಕಾಣಲು ಬಂದಾಗ ಮನ ಭಯದಿ ಕೂಗಿ ಬೇಡಿತು
ಸಖರಾಯಧೀಶ ದೊರೆಯೇ ನಿನ್ನ ಬೃಂದಾವನದ ಸನಿಹ ಎನ್ನ ಮನ ಕಳೆದು ಹೋಯಿತು|

1 comment:

  1. Sakaraayapurada Dore venkatachala Avara paadagalige nanna bhakti poorvaka namanagalu. Swamy yellarigu manashanti haagu rakshe sadaa doreyali. Hari om tatsat.

    ReplyDelete