ಒಟ್ಟು ನೋಟಗಳು

Tuesday, February 23, 2021

ಮೌನದಲಿ ಭಜಿಸುವುದೇ ಲೇಸು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮೌನದಲಿ ಭಜಿಸುವುದೇ ಲೇಸು ಮಾತಿನಲಿ ಪದ ಜಾಸ್ತಿಯಾಯಿತು
ಅಡುವುದೊಂದು ಮಾಡುವುದೊಂದು ಮನ ನೊಂದು ಬೇಸತ್ತಿದೆ ಗುರುವೇ|

ಮನದ ಭಾವನೆಗಳ ಸುಳಿಯಲಿ ನಿಜ ಭಾವದ ಭಕುತಿ ಕಳೆದು ಹೋಯಿತು
ಅಲ್ಪನು ನಾನು ಮಾತಿನಲೇ ಮೈ ಮರೆವೆನು ನೀ ಎಚ್ಚರಿಸೋ ಪ್ರಭುವೇ|

ಗೊಂದಲದ ಗೂಡಿದು ಎನ್ನ ಮನವು ಮೈಲಿಗೆಯ ಭಾವದಿ ಮಲಿನವಾಗಿಹುದು ಗುರುವೇ
ಶುದ್ಧ ಭಾವದ ಅಲೆಯ ಬಡಿದೆಬ್ಬಿಸಿ ಶುಭ್ರ ಮಾಡೋ ಎನ್ನ ಮನವ ಪ್ರಭುವೇ|

ಗಂಗೆ ತುಂಗೆಯರ ಹರಿವು ನಿನ್ನ ಪದಕಮಲದ ಸನಿಹ ಇರುವುದೋ ಗುರುವೇ
ಪಾದ ಧೂಳಿಯ ಸಿಂಚನವೇ ಸಾಕೆನಗೆ ಗಂಗೆ ತುಂಗೆಯರ ಸಮಾನವೋ ಪ್ರಭುವೇ|

ಏನಿದು ನಿನ್ನ ಲೀಲೆಯೊ ಚಂಚಲದ ಮನವಿತ್ತು ಅಮಿಷದ ಸೆರೆಹಾಸಿ ನಿಂತು ನೋಡುವೆ
ಅಂತರಂಗದಲಿ ಬಣ್ಣದಾ ಬದುಕು ಬೇಡವೆನಿಸೆ ನಿನ್ನ ನೆನೆಯುವ ಹಂಬಲ ದೊರೆಯೇ|

ಮತ್ತದೇ ಪದಬಳಸಿ  ನಿನ್ನೊಲುಮೆ ಪಡೆಯುವಾ ಪರಿ ಸರಿ ಹೇಳೋ ಗುರುವೇ
ಮತಿ ಹೀನ ಪಾಮರನು ನಾನು ನಿನ್ನ ಬೇಡುತಿಹೆನು ಸರಿ ದಾರಿ ತೋರೋ ಸಖರಾಯಪ್ರಭುವೇ|

1 comment:

  1. Sakaraayapurada Dore venkatachala avadootarige nanna poojya namanagalu. Swamy Yellaranu uddarisi asheervadisi Kaapadi Guruvarya venkatachala. Sarve jano sukinobavantu.

    ReplyDelete