ಒಟ್ಟು ನೋಟಗಳು

Thursday, October 21, 2021

ಮನದ ಭಾವಗಳ ನಡುವೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮನದ ಭಾವಗಳ ನಡುವೆ ನಿನ್ನ ನಾಮಕೆ ಹುಡುಕಾಡಿ ಸೋತು ನಿಂತಿಹೆನೋ
ಬರದು ಮಾಡದೆ ಮಲಿನ ಭಾವಗಳ ಒಡಲಾಳದಿಂದ ಹೇಗೆ ನಿನ್ನ ಪಡೆವೆನೋ|

ನಿನ್ನ ರೂಪ ಮಿಂಚಂತೆ ಮನದಿ ಬಂದು  ಎನ್ನ  ತಪ್ಪಿನ ಅರಿವು ಮೂಡಿಸಿ  ಮರೆಯಾಯಿತೋ
ಮರುಕಳಿಸದಿರಲಿ ತಪ್ಪುಗಳು ನಿನ್ನ  ನಾಮದ ಬಲವು ಎನ್ನ ಸದಾ ಕಾಯಲೋ|

ಏನು ಬಯಸಲಿ ಗುರುವೇ ನಿನ್ನ ಮಣ್ಣಲಿ ನಿಂತು ಕೇಳದೇ ಕರುಣಿಸಿ ಹರಸುವೆಯೋ
ಎನ್ನ ತಂದೆಯು ನೀನು ನಿನನ್ನೇ ನಂಬಿಹೆನು ಎಂದೆಂದೂ ನಿನ್ನ ಸೇವೆಗೆ ಕಾದಿಹೆನೋ|

ಯಾವ ಸೇವೆಯ ಮಾಡಲಿ ಪ್ರಭುವೇ ನಿನ್ನ ಕೃಪೆಯ ಪಡೆದು ಬದುಕು ಕಟ್ಟಲು
ಭವಬಂಧನದ ಸುಳಿಯೊಳು ಅರ್ಥ ಕಳೆದ ಬದುಕು ನಿನ್ನನೇ ನಂಬಿ ಬೇಡಿಹುದೋ|

ಸಖರಾಯಪುರದ ಮಹಾದೇವನೆ ನಿನ್ನಂಗಳದಿ ನಿಂತು ಅರಿಕೆಯಾ ಸಲ್ಲಿಸಿಹೆನೋ
ಮನ್ನಿಸಿ ಎನ್ನ ಬಾಲಿಶ ಭಾವಗಳ ತಾಕಲಾಟವ ಸ್ಥಿರ ಮನವ  ನೀಡಿ ಪೊರೆಯೋ ಎಂದೆನೋ|

No comments:

Post a Comment