ಒಟ್ಟು ನೋಟಗಳು

Friday, October 8, 2021

ಹತ್ತಿಕ್ಕುವ ಹಂಬಲದಲಿ ಮನವ ಹುಡುಕಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಹತ್ತಿಕ್ಕುವ ಹಂಬಲದಲಿ ಮನವ ಹುಡುಕಿ ಹೊರಟೆ  ನೆನೆಯುತ ಗುರುವೇ  ನಿನ್ನ  ನಾನು
 ಬಾಹ್ಯ ಬದುಕಿನ ವಾಸನೆಯೊಳು ಹುದುಗಿ  ಹೋದ ಮನವ ಹೇಗೆ ಹುಡುಕಲಿ ನಾನು|

ಬುದ್ಧಿಯ ಅರಿವಿಗೆ ಬರುವ ಮೊದಲೇ ಮನ ತನ್ನಾಟವ ತೋರುತಿಹದೋ ಪ್ರಭುವೇ
ಮಾಯೆಯ ಮುಸುಕೊಳು ಎಲ್ಲಾ ಸೇರಿಹುದೋ ಸರಿ ತಪ್ಪಿನ ಅರಿವಾಗಲಿಲ್ಲ ದೊರೆಯೇ|

ಇಡುವ ಹೆಜ್ಜೆ ತಪ್ಪೆನಿಸುತಿದೆ ಬುದ್ದಿಗೆ ಕೇಳದಾಗಿದೆ ಮನವು ಹಿಂದಡಿಯಿಡಲು  ಗುರುವೇ
ಅಲ್ಪ ಸುಖದ ಅನಂದಕೆ ಹಾತೊರೆಯುವ ಮನವು ನಾಳಿನ ಕರ್ಮದ ಫಲ ತಿಳಿಯದೇ|

ನಿನ್ನನೇ ಭಯದಿ ಕೇಳಲು ಮನವು ಇನ್ನೆಷ್ಟು ದಿವಸ ಕಾಯಿಸುವೆ   ಸೋತಿದೆ ಜೀವವು
ನಿನ್ನವನಲ್ಲದಿರೆ ನಿನ್ನನೇ ನೆನೆವ ಭಜಿಸುವ ಮನವೇಕೆ ನೀಡಿದೆ ನನ್ನ ದೊರೆಯೇ|

ನೀನಿರುವ ಬೃಂದಾವನದ ದರುಶನಕೆ ಓಡೋಡಿ ಬಂದೆ ಬಳಲಿಹಾ ಮನಕೆ ಆನಂದ ನೀಡೋ
ಸಖರಾಯಪುರದ ಒಡೆಯ ಗುರುನಾಥ ನೀನೆನುತ ಹಂಬಲದಿ ಬೇಡಿಹೆನು ಕರುಣೆಯಾ ತೋರೋ|

No comments:

Post a Comment