ಒಟ್ಟು ನೋಟಗಳು

Wednesday, September 9, 2020

ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು ಜಗದೊಡೆಯ ಅವನು
ತಡಮಾಡದೆ ಹರಸುವನು ಎಮ್ಮನು ಕರುಣಾಮಯ ಗುರುನಾಥನು|

ತಾನಿರುವ ಅನುಭವವ ಕಾಣದಿರು ನೀಡುತ ಗುರುವು ಸಲಹುವನು 
ನೆರಳಂತೆ ಹಿಂಬಾಲಿಸುತ ಜತನದಿ ಕಾಯುತ ಕೈ ಹಿಡಿದು ನಡೆಸುವನು|

ಮುಸುಕು ತುಂಬಿದ ಬಾಳಿನೊಳು ಆಶಾ ಕಿರಣದ ಬೆಳಕ ನೀಡುತ ಪೊರೆಯುವನು
ಮನದೊಳಿಹ ಅಲ್ಪ ಭಾವಗಳ ಅಳಿಸಿ ಜಗದರಿವ ನೀಡಿ ಕರುಣಿಸುವನು|

ಚಂದದಿ ಬದುಕಿನರ್ಥವ ತಿಳಿಸಿ  ಸ್ವಾರ್ಥವನಳಿಸಿ ಬದುಕು ಹಸನಾಗಿಸುವನು
ಅನ್ಯರ ನೋವನು ಕ್ಷಣದಿ ಪರಿಹರಿಸಿ ಮಾದರಿಯ ಬದುಕು ನೆಡೆಸೆನ್ನುವನು|

ನಿತ್ಯವೂ ಬದುಕೊಂದು ಯಜ್ಞವೆನುತ ಸಾಧಿಸಿ ಗುರುವು ದಾರಿ ದೀಪವಾಗಿಹನು
ಹಣದಾಸೆಯ ಮೋಹದ ಬಲೆಯ ಕಿತ್ತೊಗೆದು ನಂಬಿದವರ ಪೊರೆಯುತಿಹನು|

ಮಂತ್ರ ತಂತ್ರದ ಅರಿವಿಲ್ಲದ ಪಾಮರ ಬಕುತ  ನಾನೂ ನಿನ್ನ ಸ್ಮರಿಸೆ ಅಭಯ ಪಡೆವೆನು
ಸಖರಾಯಪುರದ ಮಹದೇವನವನು ಗುರುವು ಬಕುತರ ಭಗವಂತನವನು|

1 comment:

  1. Poojya Shri venkatachala avadootarige nanna poojya namanagalu. Yellaranu Harasi asheervadisi Kaapadi. Hari om tatsat.

    ReplyDelete