ಒಟ್ಟು ನೋಟಗಳು

Tuesday, September 15, 2020

ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ ಆಸೆ ಆಮಿಷಗಳ ಸುಳಿಯಿಂದ ಹೊರಬರಲಾರೆ
ಉದ್ದಾರ ಮಾಡೆನ್ನನು ಎನ್ನಲು ಎನ್ನ ನಾಲಗೆ ಮಲಿನವಾಗಿದೆ ಗುರುದೇವಾ|

ಕಾಣುತಿಹದು ಕಾಮದಾಟವ ಮನಸು  ಧರಿಸಿಹುದು ಕಪಟ ವೇಷವ
ನುಡಿಯುತಿಹುದು ನಾಲಗೆಯು ನಿನ್ನ ನಾಮವ ತೋರಿಕೆಯ ಬಕುತಿ ಭಾವವ|

ಹಣದಾಸೆಯ ಅಮಲಿನಲಿ ನಾನೆಂಬ ಭಾವದಲಿ ಬಕುತಿಯೆಂದು ನಟಿಸುತಿಹೆನೋ
ಹುಂಬತನದ ಮಾತಿನಲಿ ಎಲ್ಲಾ ಬಲ್ಲೆನೆಂಬ ಗರ್ವದಲಿ ಬದುಕುತಿಹೆನೋ|

ಹಲವು ವೇಷದರಿಸಿ ಹಲವು ಮಂತ್ರ ಜಪಿಸಿ ನಾಟಕವಾಡುತ  ಉಸಿರಾಡುತಿಹೆನೋ
ಎನ್ನ ಕುಕರ್ಮಕೆ ಎನ್ನ ಅಪರಾಧಕೆ ಅನ್ಯರ      ದೂಶಿಸಿ ನಿನ್ನ ಬೇಡುತಿಹೆನೋ|

ಬದುಕಿಗಾಗಿ ಕಾಯಕ ಮಾಡುತಾ ಇತಿಮಿತಿಯ ಎಲ್ಲೆ ಮೀರುತ ನಡೆಯುತಿಹೆನೋ
ಅನ್ಯರ ಏಳಿಗೆಯ ಮಾತಿನಲಿ ಸಹಿಸುತ ಒಳಮನದಿ ಕರುಬುತ ಮುಖವಾಡ ದರಿಸಿಹೆನೋ|

ಮಾಡುವುದೆಲ್ಲ ಮಾಡಿ ಆಡುವುದೆಲ್ಲ ಆಡಿ ಮುಗಿಸಿ ದೈವವ ದೂರುತಿಹೆನೋ
ಸಖರಾಯಪುರದ ನ್ಯಾಯಾಧೀಶ ನೀನು ಎನ್ನ ಕಾರ್ಯಕೆ  ನಿನ್ನಂಗಳದ ತೀರ್ಪು ನೀಡೋ|

1 comment:

  1. Poojya Venkatachala avadootarige nanna bhakti poorvaka namanagalu. Hari om tatsat.

    ReplyDelete