ಒಟ್ಟು ನೋಟಗಳು

Friday, September 25, 2020

ಜಗದೊಳಿಹ ಬಕುತರಲಿ ನಾನೇ ಮೂರ್ಖನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಜಗದೊಳಿಹ ಬಕುತರಲಿ ನಾನೇ ಮೂರ್ಖನೋ ನಿನ್ನ ಸೇವಿಸದೆ ಮರುಳನಾದೆನೋ
ವಿದ ವಿಧದ ಬಕುತಿಯಾ ಮಾಡಿ ನಿನ್ನ ಪಡೆವರ ಕಂಡರೂ ಕಾಲ ಹರಣ ಮಾಡಿದೆನೋ|

ಅಂದದಾ ಪಲ್ಲಕ್ಕಿಯಲಿ ಕುಳ್ಳಿರಿಸಿ ಮುಗದ ಬಕುತಿಯ ತೋರಿ ಕುಣಿವರೋ
ಚಂದದಾ ಪದದಿಂದ ರಾಗದಾ ಮಾಲೆಮಾಡಿ  ಹಾಡಿ ಪಾಡಿ ನಲಿವರೋ|

ಬಣ್ಣದ ಪುಷ್ಪವಿರಿಸಿ ಗಂಧದಾ ಪರಿಮಳ ಸೂಸಿ ನಿನ್ನ ಸಿಂಗರಿಸಿ ನಲಿವರೋ
ಪೂರ್ಣ ಫಲ ಹಣ್ಣುಗಳಿರಿಸಿ ಧನ್ಯತಾ ಭಾವದಲಿ ಮೈ ಮರೆತು ನಮಿಪರೋ|

ಆರು ಅರಿಗಳ ಸಂಗ ಬೇಡವೆಂದು ಬೇಡುತ ನಿನ್ನ ಪದಕಮಲ ಪಿಡಿವರೋ
ಜನುಮ ಜನುಮಕೂ ನೀನೇ ಗುರುವೆಂದೆನುತ ಸಾರಿ ಸಾರಿ ಬೇಡುವರೋ|

ಭವ ಭಂದನವ ಬಿಡಿಸೆನುತ ಕರ್ಮಗಳ ಹೊರೆ ತಾಳೆನುತ ಧೈನ್ಯದಲಿ ಬೇಡುವರೋ
ಅಜ್ಞಾನ ತುಂಬಿದ ಅಂಧಕಾರದ ಬದುಕು ಸಾಕೆನುತ
ಮುಕ್ತಿ ನೀಡೆನ್ನುವರೋ|

ಮಿಥ್ಯವನೇ ಸತ್ಯವೆನುತ ತೋರಿಕೆಯನೇ ಬಕುತಿಯೆನುತ ಬಾಳಿದೆನೋ
ಎನ್ನ ಮನ್ನಿಸೆನ್ನಲು ಪದ ಸಿಗದೆ ಸೋತು ಹೋದೆನು ನಾನು ಸಖರಾಯಧೀಶನೇ|

1 comment:

  1. Hari om tatsat. Venkatachala Avadootara paadagalige nanna poojya namanagalu. Aashirvaada Maadi Kaapadi.

    ReplyDelete