ಒಟ್ಟು ನೋಟಗಳು

Monday, September 28, 2020

ಮನವೆಂಬ ಮಲಿನ ಮಣ್ಣಿನೊಳು - ರಚನೆ:ಶ್ರೀ. ಆನಂದ ರಾಮ್, ಶೃಂಗೇರಿ

ಮನವೆಂಬ ಮಲಿನ ಮಣ್ಣಿನೊಳು ಬಕುತಿಯಾ ಬೀಜ ಬಿತ್ತಿ ಶ್ರದ್ದೆಯಾ ನೀರೆರೆದು ಭಜಿಸುವೆನು
ಗುರು ಕರುಣೆ ಎಂಬ ಸುಮವು ಉದಿಸಿ ನಿನ್ನ ಕಾರುಣ್ಯದ ಫಲ ನೀಡೋ ಗುರುದೇವ|

ಅಲ್ಲ ಸಲ್ಲದ ಜಗದ ವಿಷಯಗಳ ಹಳುವೆಂಬ ಮಲಿನವನು ದೂರ ಮಾಡೋ
ಪೊಳ್ಳು ಭಕುತಿಯಂಬ ಮನದ ಮಲಿನ ಜರಿಯ ಹರಿಯ ಬಿಡ ಬೇಡವೋ|

ನಾನು ತಾನೆಂಬ ಮನದ ಕೀಟವ ಹಾರಬಿಡದೆ  ಎಲ್ಲಾ ನೀನೆಂಬ ಅರಿವು ನೀಡೋ
ನಿಜ ಬಕುತಿಯ ಫಸಲು ನುಂಗುವ ಆಸೆ ಆಮಿಷಗಳ ಕೀಟವ  ನಾಶ ಮಾಡೋ|

ಮಿಥ್ಯೆಯಂಬ  ಜಂತುವ ಹತ್ತಿರ ಬಿಡದೇ ಬಕುತಿಯ ಫಸಲ ಕಾಯೋ ಗುರುದೇವ
ಸುಂದರ ಸುಮವಾಗಿ ನಿನ್ನ ಮೂರುತಿ ಮನದಿ ಕಾಣಲಿ ಮಹಾದೇವ|

ಹೂವು ಕಾಯಾಗಿ ಕಾಯಿ ಹಣ್ಣಾಗುವಂತೆ ನನ್ನ ಭಕುತಿ ಬಲಿಯಲಿ ನನ್ನ ದೇವ
ನಿನ್ನ ಚರಣಕೆ ಅರ್ಪಿಸುವೆ ನನ್ನ ಹೃದಯದ ದೈನ್ಯ ತುಂಬಿದ ಶುದ್ಧ ಭಾವವ|

ಸಕರಾಯಧೀಶನ ಆಸ್ಥಾನದಿ ಬಕುತ ಜನಗಳ ಗುಂಪಿನಲಿ ನಿನಗಾಗಿ ಕಾಯುವೆನು ನಾನು
ಎನ್ನ ಬಕುತಿಯಾ ಹೊರೆ  ಇಳಿಸಿ ಎನ್ನ ಸರಿ ತಪ್ಪುಗಳ ತಿಳಿಸೋ ಸದ್ಗುರು ದೇವಾ|

1 comment:

  1. Swamy Guru venkatachala Avara paadagalige nanna bhakti poorvaka namanagalu. Gurugale nimma aashirvaada sadaa yellara mele erali haagu nimma rakshe yellara mele sadaa erali. Hari om tatsat.

    ReplyDelete