ಒಟ್ಟು ನೋಟಗಳು

Tuesday, November 3, 2020

ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ ದಣಿವಾಗಿದೆ ಗುರುವೇ 
ಮೂಡನು ನಾನು ಎನ್ನ ಮತಿಯ ಬೆಳಗಿ ನಿತ್ಯ ಸತ್ಯವ ತೋರೋ ಪ್ರಭುವೇ|

ಎನ್ನ ಬದುಕಿನ ಸುತ್ತಲೂ ಆಮಿಷಗಳಿರಿಸಿ ಮನವ ದುರ್ಭಲ ಮಾಡಬೇಡವೋ
ಕಷ್ಟ ಕೋಟಲೆಗಳ ನಡುವೆ ನಿಲ್ಲಿಸಿ ಎನ್ನ ದೂರ ಮಾಡಬೇಡವೋ ದೊರೆಯೇ|

ಬಣ್ಣದ ಚಿತ್ತಾರದ ನಡುವೆ ನಿಂತ ಮಾತು ಬಾರದ ಮನುಜನಾದೆನೋ
ಎತ್ತ ನೋಡಿದರೆತ್ತ  ಚಿತ್ತ ಕೆಡಿಸುವ ವಿಷಯ ವಾಸನೆಗಳ ದಾಸನದೆನೋ|

ಮತ್ತು ಬಂದಂತೆ ಬಕುತಿಯ ನಾಟಕವಾಡಿ ನಿನ್ನ ಅಂಗಳದಿ ಆಡಿಹೆನೋ
ಸುತ್ತಮುತ್ತಲ ನೋಟ ಎನ್ನ ಕಡೆಗಿರಲೆಂದು ಕಣ್ಮುಚ್ಚಿ ಕುಳಿತು ನಾಟಕವಾಡಿಹೆನೋ|

ಸಖರಾಯಧೀಶನೆ ನೀನು ಮನದೊಳಗಿಹ ಭಾವ ಬದಲಿಸಿ ಹರಸುವೆಯೇನೋ
ಉಸಿರುಗಟ್ಟಿಸುವ ಮನದ ಗೊಂದಲವ ದೂರಮಾಡಿ ಕಾಪಡೋ ಎನ್ನನು|

1 comment:

  1. Guru venkatachala Avara paadagalige nanna bhakti poorvaka namanagalu. Hari om tatsat.

    ReplyDelete